ಬಾಂಗ್ಲಾದೇಶದವರೆಂದು ತಿಳಿದು ಬೆಂಗಳೂರಿನಲ್ಲಿ ಬಂಧಿಸಿದ್ದ ಬಂಗಾಲಿ ಹಿಂದೂ ದಂಪತಿಗಳಿಗೆ ಜಾಮೀನು

ಹಿಂದೂ ದಂಪತಿಗಳಿಗಾಗಿ ಹಿಂದೂ ವಿಧಿಜ್ಞ ಪರಿಷತ್ ನ ನ್ಯಾಯವಾದಿಗಳು ಉಚಿತ ಕಾನೂನು ಹೋರಾಟ !

ಬೆಂಗಳೂರು – ಮೂಲತಃ ಬಂಗಾಲ ರಾಜ್ಯದ ನಿವಾಸಿಯಾಗಿರುವ ಹಿಂದೂ ದಂಪತಿ ಶ್ರೀ. ಪಲಾಶ ಅಧಿಕಾರಿ ಮತ್ತು ಸೌ. ಶುಕ್ಲ ಅಧಿಕಾರಿ ಇವರನ್ನು ಅವರ ೧ ವರ್ಷದ ಮಗುವಿನ ಜೊತೆಗೆ ಕೆಲಸದ ಪ್ರಯುಕ್ತ ಬೆಂಗಳೂರಿಗೆ ಬಂದಿದ್ದರು. ಅವರನ್ನು ಬೆಂಗಳೂರು ಪೊಲೀಸರ ಬಾಂಗ್ಲಾದೇಶದ ನಾಗರೀಕರೆಂದು ೯ ತಿಂಗಳ ಹಿಂದೆ ಬಂಧಿಸಿದ್ದರು. ಅತ್ಯಂತ ಬಡ ಕುಟುಂಬದಿಂದ ಬಂದಿರುವ ಈ ದಂಪತಿಗಳು ಬೆಂಗಳೂರಿನಲ್ಲಿ ಯಾರ ಸಹಾಯನು ಇಲ್ಲದೆ ಅಸಹಾಯಕರಾಗಿದ್ದರು. ಇದನ್ನು ಗಮನಿಸಿ ಹಿಂದೂ ವಿದ್ಧಿಜ್ಞ ಪರಿಷತ್ ನ ನ್ಯಾಯವಾದಿ ಆಗಿರುವ ದಂಪತಿ ನ್ಯಾಯವಾದಿ ಸೌ. ದಿವ್ಯ ಬಾಳೆಹತ್ತಲ ಮತ್ತು ನ್ಯಾಯವಾದಿ ಉಮಾಶಂಕರ ಮೆಗುಂಡಿ ಇವರು ಇವರಿಗಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿದರು.ಅವರು ಪ್ರಾಮಾಣಿಕವಾಗಿ, ಉಚಿತ ಹೋರಾಡಿದ್ದರಿಂದ ಮಾರ್ಚ್ ೨೮ ರಂದು ದಂಡಾಧಿಕಾರಿ ನ್ಯಾಯಾಲಯದಿಂದ ಹಿಂದೂ ದಂಪತಿಗೆ ಜಾಮೀನು ಮಂಜೂರು ಮಾಡಿದೆ.

ಹಿಂದೂ ದಂಪತಿಗೆ ಉಚಿತ ಕಾನೂನು ಹೋರಾಟ ನಡೆಸಿ ನ್ಯಾಯ ದೊರಕಿಸಿ ಕೊಡುವ ನ್ಯಾಯವಾದಿಗಳಿಗೆ ಹಿಂದೂ ಸಂಘಟನೆಗಳು ಮತ್ತು ಪೀಡಿತ ದಂಪತಿಗಳು ಧನ್ಯವಾದ ಅರ್ಪಿಸಿ ಆಭಾರ ವ್ಯಕ್ತ ಪಡಿಸಿದರು.