
ಪೇಟಲಿಂಗ ಜಯ (ಮಲೇಷ್ಯಾ) – ಚರ್ಚ್, ದೇವಸ್ಥಾನಗಳಂತಹ ಮುಸಲ್ಮಾನೆತರ ಧಾರ್ಮಿಕ ಸ್ಥಳದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಮುಸಲ್ಮಾನರು ಉಪಸ್ಥಿತರಿರಲು ನಿಷೇಧ ಹೇರಲಾಗಿದೆ. ಸೆಲಾಂಗಾರಚೆ ಧಾರ್ಮಿಕ ವ್ಯವಹಾರ ಇಲಾಖೆಯ ಕಾರ್ಯಕಾರಿ ಅಧಿಕಾರಿ ಝಾವಾವಿ ಅಹಮದ್ ಮುಘನಿ ಇವರು ಈ ಮಾಹಿತಿ ನೀಡಿದರು. ಸಹಿಷ್ಣುತೆ ಹೆಚ್ಚಿಸುವುದಕ್ಕಾಗಿ ಸ್ವಯಂಸೇವೆ ಸಂಸ್ಥೆಗಳಿಂದ ಆಯೋಜಿಸಿರುವ ಕಾರ್ಯಕ್ರಮಕ್ಕೆ ಝವಾವಿ ಇವರು ಸ್ವಾಗತ ಕೋರಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೆಲಾಂಗಾರ್
ಇಸ್ಲಾಮಿಕ್ ಧಾರ್ಮಿಕ ಇಲಾಖೆಯಿಂದ ಜಾರಿಗೊಳಿಸುವ ಮಾರ್ಗದರ್ಶಕ ತತ್ವಗಳ ಪಾಲನೆಯಾಗಬೇಕು, ಎಂದು ಝವಾವಿ ಇವರು ಒಂದು ಮನವಿಯಲ್ಲಿ ಹೇಳಿದ್ದಾರೆ. ಧಾರ್ಮಿಕ ಉಪಕ್ರಮವನ್ನು ಆಯೋಜಿಸಲು ಇಚ್ಚಿಸುವ ಸಂಸ್ಥೆಗಳು ಯಾವುದೇ ವದಂತಿಯನ್ನು ಹಬ್ಬಿಸಬಾರದು, ಇದಕ್ಕಾಗಿ ಹೆಚ್ಚು ಸೂಕ್ಷ್ಮವಾಗಿರಲು ನೆನಪು ಮಾಡಿಕೊಟ್ಟರು. ಇದರ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಮುಸಲ್ಮಾನೆತರ ಸಂಸ್ಥೆಗಳು ಇಸ್ಲಾಮಿಕ್ ಧಾರ್ಮಿಕ ವ್ಯವಹಾರ ಇಲಾಖೆ ಅಥವಾ ರಾಜ್ಯ ಮುಫ್ತಿ ಇವರ ಜೊತೆ ಸಂಪರ್ಕಿಸಲು ಕರೆ ನೀಡಿದ್ದಾರೆ.
(ಸೌಜನ್ಯ : Free Malaysia Today)
‘ಇಂಪ್ಯಾಕ್ಟ್ ಮಲೇಷ್ಯಾ’, ಈ ಸ್ವಯಂ ಸೇವಿ ಸಂಸ್ಥೆಯ ಸದಸ್ಯರು ಕ್ಲಾಂಗ್ ಇಲ್ಲಿಯ ಚರ್ಚಗೆ ನೀಡಿರುವ ಭೇಟಿಯ ಬಗ್ಗೆ ಫಲಕದಿಂದ ಅಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕ್ರೈಸ್ತ ಧರ್ಮದ ಬಗ್ಗೆ ಹೆಚ್ಚು ಮಾಹಿತಿ ತಿಳಿದು ಕೊಳ್ಳುವುದಕ್ಕಾಗಿ ಕ್ರೈಸ್ತರಲ್ಲದೆ ಇರುವ ಜನರಿಗೆ ಚರ್ಚ್ ಗೆ ಭೇಟಿ ನೀಡಲು ಫಲಕಗಳ ಮೂಲಕ ಕರೆ ನೀಡಿದ್ದರು. ಅದರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಝವಾವಿ ಇವರು ಒಂದು ಮನವಿ ಪ್ರಸಾರಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಮುಸಲ್ಮಾನ ಯುವಕರು ಸಹಭಾಗಿಯಾಗಿರಲಿಲ್ಲ ಎಂದು ಮಲೇಷ್ಯಾದ ಸಚಿವ ಹನ್ನಾ ಯೋಹ ಇವರು ಹೇಳಿದರು.
ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಗಟ್ಟಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸುತ್ತಿದ್ದಾರೆ! : Taslima Nasrin
ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ರಷ್ಯಾದಿಂದ ದಾಳಿ : 6 ಜನರ ಸಾವು : Russia Ukraine War
ಇರಾನ್ನಲ್ಲಿರುವ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳಬೇಕು! – ಭಾರತ : US Iran War
‘ಕಳೆದ ವರ್ಷ ನಡೆದ ಸಂಘರ್ಷವು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ಒಳಸಂಚಾಗಿತ್ತು!’ (ಅಂತೆ) : Imran Khan Sister’s Claim
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ