ದೇಶದಲ್ಲಿ ಶ್ರೀ ಗಣೇಶ ಮೂರ್ತಿ ವಿಸರ್ಜನೆಯ ಸಮಯದಲ್ಲಿ ೧೬ ಜನರ ಸಾವು

ನವದೆಹಲಿ – ಅನಂತಚತುರ್ದಶಿಯ ದಿನ ಶ್ರೀ ಗಣೇಶನ ಮೂರ್ತಿ ವಿಸರ್ಜನೆ ಮಾಡುವಾಗ ದೇಶದ ಕೆಲವು ರಾಜ್ಯಗಳಲ್ಲಿ ಗಣೇಶಭಕ್ತರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಉತ್ತರಪ್ರದೇಶ, ಹರ್ಯಾಣ ಹಾಗೂ ಮಹಾರಾಷ್ಟ್ರ ಈ ರಾಜ್ಯಗಳಲ್ಲಿ ವಿಸರ್ಜನೆಯ ಸಮಯದಲ್ಲಿ ೧೬ ಜನರು ಮೃತಪಟ್ಟ. ಹರ್ಯಾಣದಲ್ಲಿನ ಮಹೇಂದ್ರಗಡ ಮತ್ತು ಸೋನೀಪತದಲ್ಲಿ ವಿಸರ್ಜನೆಗಾಗಿ ಹೋಗಿದ್ದ ೬ ಜನರು ಮುಳುಗಿ ಸಾವನ್ನಪ್ಪಿದರು.

ಈ ಘಟನೆಯ ಸಮಯದಲ್ಲಿ ನೀರಿನ ರಭಸದ ಪ್ರವಾಹದಲ್ಲಿ ೯ ಜನರು ಕೊಚ್ಚಿಕೊಂಡು ಹೋಗಿರುವ ಮಾಹಿತಿ ಸಿಕ್ಕಿದೆ. ಇದರಲ್ಲಿ ಮೂವರನ್ನು ರಕ್ಷಿಸಲಾಯಿತು. ಉತ್ತರ ಪ್ರದೇಶದಲ್ಲಿ ವಿವಿಧ ಸ್ಥಳಗಳಲ್ಲಿ ೪ ಸಹೋದರರ ಸಹಿತ ೬ ಜನರು ಮುಳುಗಿ ಮೃತರಾದರು. ಮಹಾರಾಷ್ಟ್ರದ ಧುಳೆಯಲ್ಲಿ ಒಬ್ಬನು ಮೃತಪಟ್ಟನು.