ವಾರಣಾಸಿ ಮತ್ತು ಬರೆಲಿಯಲ್ಲಿ ಮೊಹರಂ ಮೆರೆವಣಿಗೆ ವೇಳೆ ಮತಾಂಧರಿಂದ ಹಿಂಸಾಚಾರ

ಲಕ್ಷ್ಮಣಪುರಿ (ಉತ್ತರಪ್ರದೇಶ ) – ವಾರಾಣಸಿ ಮತ್ತು ಬರೇಲಿ ಜಿಲ್ಲೆಗಳಲ್ಲಿ ಮೊಹರಂ ಪ್ರಯುಕ್ತ ನಡೆಸಲಾಗಿರುವ ಮೆರವಣಿಗೆಯಲ್ಲಿ ಹಿಂಸಾಚಾರ ನಡೆದಿದೆ. ಇದರಲ್ಲಿ ಅನೇಕರು ಗಾಯಗೊಂಡರು. ಹಿಂಸಾಚಾರದಲ್ಲಿ ಹರಿತವಾದ ಶಸ್ತ್ರಗಳ ಉಪಯೋಗ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

೧. ವಾರಣಾಸಿಯ ಮಿರ್ಜಾಮುರಾದ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟ ನಡೆದಿದೆ. ಇಲ್ಲಿಯ ಕರಧನಾ ಮಾರುಕಟ್ಟೆಯಲ್ಲಿ ಮೆರವಣಿಗೆ ಸಮಯದಲ್ಲಿ ಅಡ್ಡ ಬರುವ ನೇರಳೆ ಹಣ್ಣಿನ ಮರ ಕಡೆಯುವುದರ ಬಗ್ಗೆ ವಿವಾದ ನಡೆದು ಅದು ಹಿಂಸಾಚಾರಕ್ಕೆ ತಿರುಗಿತು. ನೇರಳೆ ಹಣ್ಣಿನ ಮರದ ಎದುರು ಇರುವ ಹಿಂದೂ ಅಂಗಡಿಯವರು ಮರ ಕಡೆಯಲು ವಿರೋಧಿಸಿದಾಗ ಅವನನ್ನು ಥಳಿಸಲಾಯಿತು, ಅವನ ಅಂಗಡಿ ನಾಶಗೊಳಿಸಲಾಯಿತು. ಪೊಲೀಸರು ಘಟನಾ ಸ್ಥಳಕ್ಕೆ ತಲುಪುವಾಗ ಹಿಂದೂ ಸಂಘಟನೆಗಳು ಕೂಡ ಅಲ್ಲಿ ತಲುಪಿದ್ದವು. ಆದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

೨. ಬರೆಲಿಯಲ್ಲಿನ ಘಟನೆಯಲ್ಲಿ ಮಜೌಆ ಗಂಗಾಪುರ ಪ್ರದೇಶದಲ್ಲಿ ಮತಾಂಧರಿಂದ ಹಿಂದೂಗಳ ಅಂಗಡಿಯ ಮೇಲೆ ಕಲ್ಲತೂರಾಟ ನಡೆಸಿದರು. ಇದರಲ್ಲಿ ಮಹಿಳೆಯರು ಸಹಭಾಗಿಯಾಗಿದ್ದರು. ಇದಕ್ಕೆ ಹಿಂದೂಗಳು ಪ್ರತ್ಯುತ್ತರ ನೀಡಿದ್ದಾರೆ. ಸುಮಾರು ಅರ್ಧ ಗಂಟೆ ಈ ಕಲ್ಲು ತೂರಾಟ ನಡೆಯುತ್ತಿತ್ತು.

ಸಂಪಾದಕೀಯ ನಿಲುವು 

ಹಿಂದೂಗಳ ಧಾರ್ಮಿಕ ಮೆರವಣಿಗೆಯ ಸಮಯದಲ್ಲಿ ಮತಾಂಧರು ಹಿಂದೂಗಳ ಮೇಲೆ ದಾಳಿ ನಡೆಸುತ್ತಾರೆ ಮತ್ತು ಸ್ವಂತದ ಧಾರ್ಮಿಕ ಮೆರವಣಿಗೆಯ ಸಮಯದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸುತ್ತಾರೆ ! ‘ದೇಶದಲ್ಲಿ ಮುಸಲ್ಮಾನರು’ ಅಸುರಕ್ಷಿತರು ಎಂದು ಹೇಳುವವರು ಈಗ ಎಲ್ಲಿ ಇದ್ದಾರೆ ?