ನರಸಿಂಗಪುರ (ಮಧ್ಯಪ್ರದೇಶ) ಇಲ್ಲಿಯ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಹಿಂದೂ ಮನೆಗಳ ಮೆಲೆ ಕಲ್ಲು ತೂರಾಟ

ನರಸಿಂಗಪುರ (ಮಧ್ಯಪ್ರದೇಶ) – ಇಲ್ಲಿನ ಮುಸ್ಲಿಂ ಬಹುಸಂಖ್ಯಾತವಿರುವ ‘ಮಹಾಜನಿ ಟೊಲಾ’ದಲ್ಲಿ ಜಿಹಾದಿಗಳು ಹಿಂದೂಗಳ ಮನೆಗಳ ಮೆಲೆ ಕಲ್ಲು ತೂರಾಟ ನಡೆಸಿರುವ ಬಗ್ಗೆ ವರದಿಯಾಗಿದೆ. ಹಿಂದೂಗಳ ಪ್ರಕಾರ, ಈ ಪ್ರದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಇದೆ ಎಂದು ಹೇಳುತ್ತಾರೆ. ಆದ್ದರಿಂದ ಜಿಹಾದಿ ಮುಸ್ಲಿಮರು ನಮಗೆ ಕಿರುಕುಳ ನೀಡುತ್ತಿದ್ದಾರೆ ಇಲ್ಲಿಂದ ಪಲಾಯನ ಮಡುವಂತೆ ಒತ್ತಾಯಿಸಲಾಗುತ್ತಿದೆ.

ಇಲ್ಲಿ ನೆಲೆಸಿರುವ ಇಮರತ ಪ್ರಜಾಪತಿ ಎಂಬುವವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದ್ದು ಅವರು ಪೊಲಿಸರಿಗೆ ಮಾಹಿತಿ ನೀಡಿದರು. ಸ್ವಲ್ಪ ಸಮಯದ ನಂತರ ಪೊಲೀಸರು ಬಂದು ತನಿಖೆ ಮಾಡಿ ಹೋದರು. ಇದಾದ ಕೆಲಹೊತ್ತಿನಲ್ಲೆ ಅವರ ಮನೆಯ ಮೇಲೆ ಪುನಃ ಕಲ್ಲು ತೂರಾಟ ನಡೆದಿದೆ. ಈ ಪ್ರಕರಣದಲ್ಲಿ ಪ್ರಜಾಪತಿಯವರು, ‘ಇಲ್ಲಿ ಗಸ್ತು ತಿರುಗುವಂತೆ ಆಡಳಿತಕ್ಕೂ ಒತ್ತಾಯಿಸಿದ್ದೇವೆ. ಈ ಕಲ್ಲು ತೂರಾಟ ಘಟನೆಗಳಿಂದ ಇಲ್ಲಿಯವರೆಗೆ ೨-೩ ಹಿಂದೂ ಕುಟುಂಬಗಳು ತಮ್ಮ ಮನೆಗಳನ್ನು ಮಾರಿ ಇಲ್ಲಿಂದ ಬೇರೆಡೆಗೆ ತೆರಳಿದ್ದಾರೆ.” ಎಂದು ಹೇಳಿದರು.

ಸಂಪಾದಕೀಯ ನಿಲುವು

‘ಮದ್ಯಪ್ರದೇಶದಲ್ಲಿ ಬಿಜೆಪಿ ಸರಕಾರ ಇರುವಾಗ ಇಂತಹ ಘಟನೆಗಳು ಹೆಗೆ ನಡೆಯುತ್ತವೆ ?’, ಎಂದು ಹಿಂದೂಗಳ ಮನದಲ್ಲಿ ಪ್ರಶ್ನೆ ಮೂಡುತ್ತದೆ !

ಹಿಂದೂಗಳು ಅಲ್ಪ ಸಂಖ್ಯಾತರಾಗಿರುವಲ್ಲಿ, ಅವರು ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ, ಇದು ಜಾತ್ಯತೀತ ಹಿಂದುಗಳಿಗೆ ಯಾವಾಗ ತಿಳಿಯುತ್ತದೆ ?