ಮತಾಂಧರಿಂದ ಮಂಜುನಾಥ ನಾಯಕ ಹೆಸರಿನ ಶಿಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ !

ಗಾಯಗೊಂಡ ಶಿಕ್ಷಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

  • ಹಿಂದೂಗಳನ್ನು ಯಾವಾಗಲು ‘ಅಸಹಿಷ್ಣು’ ಎಂದು ಹೇಳುವವರು ಈ ಹಲ್ಲೆಯ ಬಗ್ಗೆ ಮಾತನಾಡುವರೇ ? ಶಿಕ್ಷಕನ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಮತಾಂಧರು ಬೆಳೆದಿದ್ದಾರೆ ಎಂಬುದನ್ನು ತಿಳಿಯಿರಿ. ಇಂತಹ ಮತಾಂಧರಿಗೆ ಕಠಿಣ ಶಿಕ್ಷೆಯಾಗಲೇ ಬೇಕು !
  • ಕರ್ನಾಟಕದಲ್ಲಿ ಭಾಜಪ ಸರಕಾರವಿರುವಾಗ ಮತಾಂಧರಿಗೆ ಈ ರೀತಿ ದಾಳಿ ಮಾಡುವ ಧೈರ್ಯ ಬರದಂತೆ ಸರಕಾರ ಎಂದು ಹಿಂದೂಗಳಿಗೆ ಅನಿಸುತ್ತದೆ !

ರಬಕವಿ-ಬನಹಟ್ಟಿ – ಹಿಜಾಬ ಪ್ರಕರಣದಲ್ಲಿ ಮತಾಂಧರು ಹಳಿಂಗಳಿಯ ಅಲ್ಲಮಪ್ರಭು ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮಂಜುನಾಥ ನಾಯಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಅಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ ಬಳಿಕ ಬಾಗಲಕೋಟೆಯ ಸರಕಾರಿ ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಯಿತು.

ಇಲ್ಲಿ ಹಿಜಾಬ ಪ್ರಕರಣದ ಬಗ್ಗೆ ಪ್ರತಿಭಟನೆ ನಡೆಯುತ್ತಿರುವಾಗ ಕಲ್ಲುತೂರಾಟ ಮಾಡಿದನಂತರ ಕಬ್ಬಿಣದ ಸಲಾಕೆಯಿಂದ ದಾಳಿ ನಡೆಸಿದರು. ‘ವಿಡಿಯೋ ಮತ್ತು ಛಾಯಾಚಿತ್ರಗಳ ಸಹಾಯದಿಂದ ದಾಳಿ ಮಾಡಿರುವವನ ಗುರುತು ಹಿಡಿದು ಬಂಧಿಸಲಾಗುವುದು’, ಎಂದು ಪೊಲಿಸರು ತಿಳಿಸಿದ್ದಾರೆ.