ಆಕ್ಷೇಪಾರ್ಹ ಹೇಳಿಕೆಗಾಗಿ ಶ್ವೇತಾ ತಿವಾರಿ ಅವರಿಂದ ಕ್ಷಮೆಯಾಚನೆ

ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ! – ಶ್ವೇತಾ ತಿವಾರಿ ಅವರ ಹೇಳಿಕೆ

ಭೋಪಾಲ (ಮಧ್ಯಪ್ರದೇಶ) – ‘ನನ್ನ ಒಳಉಡುಪಿನ ಅಳತೆಯನ್ನು ದೇವರೇ ತೆಗೆದುಕೊಳ್ಳುತ್ತಾನೆ’, ಎಂದು ಹೇಳಿಕೆ ನೀಡಿದ್ದ ನಟಿ ಶ್ವೇತಾ ತಿವಾರಿ ವಿರುದ್ಧ ಅಪರಾಧವು ದಾಖಲಾದ ನಂತರ ಅವರು ಕ್ಷಮೆ ಯಾಚಿಸಿದ್ದಾರೆ.

ಶ್ವೇತಾ ತಿವಾರಿ ಇವರು, ಸಹೋದ್ಯೋಗಿಯೊಂದಿಗಿನ ಪಾತ್ರದ ಬಗ್ಗೆ ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ತಪ್ಪಾಗಿ ನಿರೂಪಿಸಲಾಗಿದೆ, ಎಂದು ನನಗೆ ಗಮನಕ್ಕೆ ಬಂದಿದೆ. ಈ ಹೇಳಿಕೆಯ ಸಂದರ್ಭವನ್ನು ಅರ್ಥಮಾಡಿಕೊಂಡರೆ, ಈ ಹೇಳಿಕೆಯಲ್ಲಿ ದೇವರ ಪಾತ್ರವನ್ನು ನಿರ್ವಹಿಸುವ ಸೌರಭ್ ರಾಜ್ ಜೈನ್‌ಗೆ ‘ದೇವರು’ ಎಂಬ ಪದವನ್ನು ಬಳಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಸರಣಿಯಲ್ಲಿ ಅವನ ಹೆಸರು ’ದೇವ’ ಆಗಿದ್ದರಿಂದ ನಾನು ಅವರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದೆ. ಜನರು ನಟರ ಪಾತ್ರಗಳ ಹೆಸರುಗಳೊಂದಿಗೆ ಜೋಡಿಸಲ್ಪಡುತ್ತಾರೆ; ಹಾಗಾಗಿ ನಾನು ಮಾಧ್ಯಮದೊಂದಿಗಿನ ಸಂವಾದದಲ್ಲಿ ಆ ಉದಾಹರಣೆಯನ್ನು ನೀಡಿದ್ದೇನೆ; ಆದರೆ ಅವರು ತಪ್ಪಾಗಿ ಅರ್ಥೈಸಿಕೊಂಡರು. ಅದರ ಬಗ್ಗೆ ನನಗೆ ಬೇಸರವಿದೆ. ನನಗೆ ದೇವರ ಮೇಲೆ ಅಪಾರ ನಂಬಿಕೆ ಇದೆ. ಆದ್ದರಿಂದ ನಾನು ಯಾರನ್ನೂ ತಿಳಿದೋ ಅಥವಾ ತಿಳಿಯದೆಯೋ ಹೇಳಿಕೆ ನೀಡಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶವನ್ನು ಹೊಂದಿರಲಿಲ್ಲ; ಆದರೆ ಅರಿವಿಲ್ಲದೆ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ನನಗೆ ತಿಳಿದಿದೆ. ನನ್ನ ಮಾತುಗಳು ಅಥವಾ ಕೃತಿಗಳಿಂದ ಯಾರನ್ನೂ ನೋಯಿಸುವುದು ನನ್ನ ಉದ್ದೇಶವಿರಲಿಲ್ಲ, ಆದ್ದರಿಂದ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.