ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ನ್ಯಾಯವಾದಿ ಶ್ರೀ. ವಿವೇಕ ಸುಬ್ಬಾ ರೆಡ್ಡಿ ಹಾಗೂ ವಕೀಲರ ಸಂಘದ ಕಾರ್ಯಕಾರಿ ಸಮಿತಿಗೆ ನ್ಯಾಯವಾದಿ ಅಮೃತೇಶ ಎನ್.ಪಿ. ಆಯ್ಕೆ

ನ್ಯಾಯವಾದಿ ಶ್ರೀ. ವಿವೇಕ ಸುಬ್ಬಾ ರೆಡ್ಡಿ ಮತ್ತು ನ್ಯಾಯವಾದಿ ಅಮೃತೇಶ ಎನ್.ಪಿ.

ಬೆಂಗಳೂರು – ಬೆಂಗಳೂರು ವಕೀಲರ ಸಂಘದ ಚುನಾವಣೆಯು ಡಿಸೆಂಬರ್ ೧೯ ರಂದು ನಡೆಯಿತು. ಇದರಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ವಿವೇಕ ರೆಡ್ಡಿ ಹಾಗೂ ಸಂಘದ ಕಾರ್ಯಕಾರಿ ಸಮಿತಿಗೆ ನ್ಯಾಯವಾದಿ ಅಮೃತೇಶ ಎನ್.ಪಿ. ಆಯ್ಕೆಯಾಗಿದ್ದಾರೆ. ನ್ಯಾಯವಾದಿ ವಿವೇಕ ರೆಡ್ಡಿ ಹಾಗೂ ನ್ಯಾಯವಾದಿ ಅಮೃತೇಶ ಎನ್.ಪಿ. ಇವರು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರ ಧರ್ಮದ ಕಾರ್ಯದಲ್ಲಿ ಸಹಕಾರ ನೀಡುತ್ತಿದ್ದಾರೆ.