ಸರಕಾರವು ಈಗ ಯಾವ ಯೋಜನೆಯ ವಿಷಯಗಳ ಜಾಗೃತಿಗಾಗಿ ಜಾಹೀರಾತಿನ ಮೇಲೆ ಎಷ್ಟು ಖರ್ಚು ಮಾಡಬೇಕು, ಎಂಬುದನ್ನು ನಿರ್ಧರಿಸುವ ಅವಶ್ಯಕತೆ ಇದೆ ! ಇಲ್ಲದಿದ್ದರೆ ಇಂತಹ ಯೋಜನೆಯ ಮೂಲ ಉದ್ದೇಶ ಹಿಂದುಳಿಯುತ್ತದೆ !

ನವ ದೆಹಲಿ – ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆಗಾಗಿ ಖರ್ಚು ಮಾಡಿರುವ ೪೪೬ ಕೋಟಿ ೭೨ ಲಕ್ಷ ರೂಪಾಯಿಗಳ ಪೈಕಿ ಶೇ. ೭೮.೧೧ ರಷ್ಟು ಹಣ ಜಾಹೀರಾತಿಗಾಗಿ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ. ‘ಬೇಟಿ ಬಚಾವ್ ಬೇಟಿ ಪಢಾವೋ’ ಈ ಸಂದೇಶ ಜನರವರೆಗೂ ಮುಟ್ಟಿಸಲು ಮಾಧ್ಯಮಗಳಲ್ಲಿ ಅಭಿಯಾನ ನಡೆಸುವ ಸಮಿತಿಗೆ ಇದು ಅವಶ್ಯಕವಾಗಿದೆ ಎನಿಸುತ್ತದೆ’, ಎಂದು ಸಂಸದೀಯ ಸಮಿತಿಯ ವರದಿಯಲ್ಲಿ ಹೇಳಲಾಗಿದೆ. ಈ ವರದಿ ಸಂಸತ್ತಿನಲ್ಲಿ ಪ್ರಸ್ತುತಪಡಿಸಲಾಗಿದೆ.
‘79% of Beti Bachao funds spent on media advocacy’ https://t.co/Guwug1fis8 pic.twitter.com/r4cq8U9B3j
— The Times Of India (@timesofindia) December 10, 2021
೨೦೧೬-೧೭ ರಲ್ಲಿ ಈ ಯೋಜನೆಯಡಿ ತುಂಬಾ ಕಡಿಮೆ ಖರ್ಚು ಮಾಡಲಾಗಿತ್ತು ಎಂದು ಲೆಕ್ಕ ಪರಿಶೋಧಕರು (ಕ್ಯಾಗ) ಹೇಳಿದ್ದಾರೆ. ೨೦೧೪-೧೫ ಮತ್ತು ೨೦೧೯-೨೦ ರ ಕಾಲಾವಧಿಯಲ್ಲಿ ರಾಜ್ಯಗಳು ಕೇವಲ ೧೫೬ ಕೋಟಿ ೪೬ ಲಕ್ಷ ರೂಪಾಯಿಯ ಉಪಯೋಗ ಮಾಡಿದೆ. ಈ ಕಾಲಾವಧಿಯಲ್ಲಿ ಕೇಂದ್ರ ಸರಕಾರವು ರಾಜ್ಯಗಳಿಗೆ ೬೫೨ ಕೋಟಿ ರೂಪಾಯಿ ನೀಡಿತ್ತು; ಆದರೆ ರಾಜ್ಯಗಳು ಕೇವಲ ಶೇ. ೨೫.೧೩ ರಷ್ಟು ಹಣ ಉಪಯೋಗಿಸಿದೆ, ಎಂದು ‘ಕ್ಯಾಗ್’ ಹೇಳಿದೆ.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ