ಸನಾತನ ಸಂಸ್ಥೆಯು ಉತ್ತಮ ರೀತಿಯಲ್ಲಿ ಧರ್ಮಕಾರ್ಯವನ್ನು ಮಾಡುತ್ತಿದೆ ! – ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ

ಹರಿಹರಪುರದ ಪೀಠಾಧಿಪತಿ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ

ಚಿಕ್ಕಮಗಳೂರು – ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮಿ ನರಸಿಂಹ ಪೀಠ, ಹರಿಹರಪುರದ ಪೀಠಾಧಿಪತಿ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಅವರನ್ನು ‘ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ದ ಅಡಿಯಲ್ಲಿ ಸನಾತನ ಸಂಸ್ಥೆಯ ವತಿಯಿಂದ ಭೇಟಿ ಮಾಡಲಾಯಿತು. ಈ ಸಮಯದಲ್ಲಿ ಮಹಾಸ್ವಾಮೀಜಿಯವರಿಗೆ ಸನಾತನದ ಗ್ರಂಥಗಳ ಬಗ್ಗೆ, ಪಂಚಾಂಗದ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಮಯದಲ್ಲಿ ಅವರು ಎಲ್ಲವನ್ನೂ ಅತ್ಯಂತ ಆತ್ಮಿಯತೆಯಿಂದ ತಿಳಿದುಕೊಂಡರು ಮತ್ತು ‘ಸನಾತನ ಸಂಸ್ಥೆಯು ಧರ್ಮಕಾರ್ಯವನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದೆ’, ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ, ಸನಾತನ ಸಂಸ್ಥೆಯ ಸೌ. ಶಾರದಾ ಯೋಗೀಶ, ಶ್ರೀಮತಿ ಲಲಿತಮ್ಮ ತಿಮ್ಮಪ್ಪಯ್ಯ ಮತ್ತು ಧರ್ಮಪ್ರೇಮಿ ಡಾ. ಯೋಗೀಶ ಉಪಸ್ಥಿತರಿದ್ದರು. ಸನಾತನದ ಚೈತನ್ಯಮಯ ಗ್ರಂಥಗಳಿಂದ ಸಮಾಜದಲ್ಲಿನ ಹೆಚ್ಚು ಹೆಚ್ಚು ಜನರಿಗೆ ಲಾಭವಾಗಲಿ ಎಂದು ಸನಾತನ ಸಂಸ್ಥೆಯ ವತಿಯಿಂದ ಭಾರತದಾದ್ಯಂತ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗುತ್ತಿದೆ.