ಸನಾತನ ಸಂಸ್ಥೆಯು ಮೊದಲಿನಿಂದಲೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ ! – ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಶಿರಸಿ, ಕರ್ನಾಟಕ

ಶಿರಸಿ – ಸನಾತನ ಸಂಸ್ಥೆ ಮೊದಲಿನಿಂದಲೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಈಗ ಈ ಗ್ರಂಥ ಅಭಿಯಾನದ ಮಾಧ್ಯಮದಿಂದ ಜ್ಞಾನಶಕ್ತಿಯನ್ನು ಪ್ರಸಾರ ಮಾಡುವುದು, ತುಂಬ ಒಳ್ಳೆಯದಿದೆ. ಅದಕ್ಕೆ ನಮ್ಮ ಸಹಕಾರ ಖಂಡಿತ ಇರುವುದು, ಎಂದು ಶ್ರೀ ಸೊಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಇವರು ಸನಾತನ ಸಂಸ್ಥೆಯ ಸಾಧಕರಿಗೆ ಆಶಿರ್ವಾದ ನೀಡಿದರು. ಸನಾತನ ಸಂಸ್ಥೆಯ ವತಿಯಿಂದ ‘ಸನಾತನ ಧರ್ಮ ಜ್ಞಾನಶಕ್ತಿ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ. ಸನಾತನದ ವಿವಿಧ ವಿಷಯಗಳ ಬಗೆಗಿನ ಗ್ರಂಥ ಸಮಾಜದ ತನಕ ತಲುಪಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಈ ಬಗ್ಗೆ ಸ್ವಾಮೀಜಿಯವರರಿಗೆ ಮಾಹಿತಿ ನೀಡಲಾಗಿದೆ. ಈ ಸಮಯದಲ್ಲಿ ಸನಾತನ ಸಂಸ್ಥೆಯ ಸೌ. ಭಾವನಾ ನೆತ್ರೆಕರ, ಸೌ. ಸುಮಂಗಲಾ ನಾಯಕ ಮತ್ತು ಶ್ರೀ. ಶರತಕುಮಾರ ಇವರು ಉಪಸ್ಥಿತರಿದ್ದರು.