ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಬೆಂಗಳೂರಿನಲ್ಲಿ ಮಾಂಸ ಮಾರಾಟದ ಮೇಲೆ ನಿರ್ಬಂಧ !

ಬೆಂಗಳೂರು ಮಹಾನಗರ ಪಾಲಿಕೆಯ ಶ್ಲಾಘನೀಯ ನಿರ್ಣಯ !

ಬೆಂಗಳೂರು – ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಇಲ್ಲಿಯ ಕಸಾಯಿಖಾನೆಗಳು ಅದೇ ರೀತಿ ಮಾಂಸ ಮಾರಾಟದ ಎಲ್ಲ ಅಂಗಡಿಗಳು ಬಂದ್ ಇರಲಿವೆ, ಎಂದು ಬೆಂಗಳೂರು ಮಹಾನಗರ ಪಾಲಿಕೆಯು ನಿರ್ಣಯವನ್ನು ಕೈಗೊಂಡಿದೆ. ಮಹಾನಗರ ಪಾಲಿಕೆಯ ಪಶುಸಂಗೋಪನ ಇಲಾಖೆಯ ಸಹಾಯಕ ಸಂಚಾಲಕರು ಈ ಅಧಿಸೂಚನೆಯನ್ನು ಜಾರಿ ಮಾಡಿದ್ದಾರೆ. ಈ ಹಿಂದೆಯೂ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾಗೂ ಶ್ರೀಗಣೇಶ ಚತುರ್ಥಿ ಈ ಹಬ್ಬಗಳಂದು ಮಹಾನಗರ ಪಾಲಿಕೆಯು ಮಾಂಸ ಮಾರಾಟದ ಮೇಲೆ ಇದೇ ರೀತಿ ನಿರ್ಬಂಧ ಹೇರಿತ್ತು.