ನಾಲ್ಕು ತಿಂಗಳ ಹಿಂದೆ ಸಲ್ಮಾನ್‍ನೊಂದಿಗೆ ನಿಖಾಹ ಮಾಡಿಕೊಂಡು ಇಸ್ಲಾಂಗೆ ಮತಾಂತರಗೊಂಡ ಶ್ರವಂತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ !

ಯುವತಿಯ ಹತ್ಯೆ ಮಾಡಲಾಗಿದೆ ಎಂದು ಆಕೆಯ ಸಂಬಂಧಿಕರಿಂದ ಆರೋಪ

ಲವ್ ಜಿಹಾದಗೆ ಒಬ್ಬರ ನಂತರ ಒಬ್ಬರಂತೆ ಹಿಂದೂ ಹುಡುಗಿಯರು ಬಲಿಯಾಗುತ್ತಿರುವಾಗ ಈ ಬಗ್ಗೆ ಎಲ್ಲಿಯೂ ಸರಕಾರವು ಒಂದು ಶಬ್ದವನ್ನು ಮಾತನಾಡುತ್ತಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಲವ್ ಜಿಹಾದ್ ತಡೆಗಟ್ಟಲು ಈಗ ಹಿಂದೂ ರಾಷ್ಟ್ರವೇ ಅಗತ್ಯವಿದೆ !

ಕಮರರೆಡ್ಡಿ (ತೆಲಂಗಾಣಾ) – ೪ ತಿಂಗಳ ಹಿಂದೆ ಸಲ್ಮಾನ್ ಎಂಬ ಯುವಕನನ್ನು ಮದುವೆಯಾದ ಶ್ರವಂತಿ (ವಯಸ್ಸು ೧೯) ಎಂಬ ಹಿಂದೂ ಹುಡುಗಿಯು ನೇಣು ಬಿಗಿದಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಲ್ಮಾನ್ ಅವರ ಕುಟುಂಬದಿಂದ ಆಕೆಯ ಹತ್ಯೆಯಾಗಿದೆ ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ.

ಸಲ್ಮಾನ್‍ನ ಪ್ರೇಮದ ಬಲೆಗೆ ಬಿದ್ದ ಶ್ರವಂತಿಯು ಅವನನ್ನು ೨೦೨೧ ರ ಜನವರಿ ೭ ರಂದು ವಿವಾಹವಾದಳು. ಅದಕ್ಕಾಗಿ ಅವಳು ಇಸ್ಲಾಂಗೆ ಮತಾಂತರಗೊಂಡು ಶೇಖ್ ಸಮೀರಾ ಎಂದು ಹೆಸರಿಟ್ಟುಕೊಂಡಳು. ಶ್ರವಂತಿಯ ಸಾವಿಗೆ ಸಂಬಂಧಿಸಿದಂತೆ ದೇವುನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ. ಮೃತ ಬಾಲಕಿಯ ಸಂಬಂಧಿಕರು ಸಲ್ಮಾನ್ ಮತ್ತು ಅವರ ಕುಟುಂಬದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.