ಕರ್ನಾಟಕದ ದೇವಾಲಯದ ಸಿಬ್ಬಂದಿಯಿಂದಲೇ ಅರ್ಪಣೆ ಪೆಟ್ಟಿಗೆಯಿಂದ ಹಣ ಕಳ್ಳತನ

ಯಾದಗಿರಿ (ಕರ್ನಾಟಕ) – ಇಲ್ಲಿನ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿರುವ ಜಗದ್ಗುರು ಶ್ರೀ ಮೌನೇಶ್ವರ ದೇವಾಲಯದ ದೇವರ ಹುಂಡಿಯಿಂದ ದೇವಸ್ಥಾನದ ಸಿಬ್ಬಂದಿಗಳೇ ಹಣವನ್ನು ದೋಚುತ್ತಿದ್ದಾರೆ. ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಈ ದೇವಸ್ಥಾನದ ಹುಂಡಿಗೆ ಭಕ್ತರು ಹಾಕಿರುವ ಅರ್ಪಣೆಯನ್ನು ಸಿಬ್ಬಂದಿಯೊಬ್ಬರು ಕದಿಯುತ್ತಿರುವುದನ್ನು ಸ್ಥಳೀಯ ವ್ಯಕ್ತಿಯೊಬ್ಬರು ಸಂಚಾರವಾಣಿಯಿಂದ ಸೆರೆಹಿಡಿದು ಆತನನ್ನು ಹಿಡಿದ ಘಟನೆಯು ನಡೆದಿದೆ.(ದೇವಾಲಯಗಳನ್ನು ಸರಕಾರೀಕರಣ ಗೊಳಿಸಿದರೆ ಇದೇ ರೀತಿಯ ಘಟನೆಗಳು ಸಂಭವಿಸುತ್ತವೆ ! ಆದ್ದರಿಂದ, ಹಿಂದೂಗಳು ದೇವಾಲಯಗಳ ಸರಕಾರೀಕರಣವನ್ನು ತಡೆಯಲು ಪ್ರಯತ್ನಿಸಬೇಕು ! – ಸಂಪಾದಕ)