‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದೂಗಳು ಅಸುರಕ್ಷಿತರು !’ – ರಿಂಕು ಶರ್ಮಾ ಹತ್ಯೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಟೀಕೆ

ಕೇಂದ್ರ ಗೃಹ ಸಚಿವ ಅಮಿತ ಶಾ ಅವರ ರಾಜೀನಾಮೆಗೆ ಬೇಡಿಕೆ

  • ಕೇರಳ, ಬಂಗಾಲ ಇತ್ಯಾದಿ ರಾಜ್ಯಗಳಲ್ಲಿಯೂ ಹಿಂದೂಗಳು ಅಸುರಕ್ಷಿತರಾಗಿದ್ದಾರೆ, ಆಮ್ ಆದ್ಮಿ ಪಕ್ಷವು ಎಂದಿಗೂ ಇದರ ಬಗ್ಗೆ ಮಾತನಾಡುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ!
  • ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರಕಾರವಿದೆ. ರಾಜಧಾನಿಯಲ್ಲಿ ಸಮಾಜಘಾತಕ ಕೃತ್ಯವೆಸಗುವ ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶದ ನುಸುಳುಕೋರರು ಅಕ್ರಮವಾಗಿ ನೆಲೆಸಿದ್ದು ಅದರಿಂದ ಗಂಡಾಂತರ ನಿರ್ಮಾಣವಾಗಿದೆ. ಆಪ್ ನವರಿ ಎಂದಿಗೂ ಅದರ ಬಗ್ಗೆ ‘ಚಕಾರ’ ವೆತ್ತುವುದಿಲ್ಲ ಎಂಬುದನ್ನು ಗಮನಿಸಿ!
ಸೌರಭ ಭಾರದ್ವಾಜ್

ನವ ದೆಹಲಿ : ದೆಹಲಿಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಇದನ್ನು ನಿರ್ವಹಿಸುವಲ್ಲಿ ಕೇಂದ್ರ ಗೃಹ ಸಚಿವಾಲಯ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದು ಅನೇಕ ಘಟನೆಗಳಿಂದ ಎದುರು ಬಂದಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಕೊಲೆ ಘಟನೆಗಳು ಈಗ ಸಾಮಾನ್ಯವಾಗಿದೆ. ಈ ಹತ್ಯೆಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರಣರಾಗಿದ್ದಾರೆ. ಬಿಜೆಪಿ ಸರ್ಕಾರದ ಕಾಲದಲ್ಲಿಯೂ ಹಿಂದೂಗಳು ಸುರಕ್ಷಿತವಾಗಿಲ್ಲ ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ಸೌರಭ ಭಾರದ್ವಾಜ್ ಹೇಳಿದ್ದಾರೆ.

ದೆಹಲಿಯ ಮಂಗೋಲಪುರಿ ಪ್ರದೇಶದಲ್ಲಿ ಭಜರಂಗದಳದ ಕಾರ್ಯಕರ್ತ ರಿಂಕು ಶರ್ಮಾ ಅವರನ್ನು ಮತಾಂಧರು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಭಾರದ್ವಾಜ್ ಈ ಹೇಳಿಕೆ ನೀಡಿದ್ದಾರೆ.