ಪೊಲೀಸ್ ಅಧಿಕಾರಿ ಕಲೀಮ್ ಖಾನ್ ಅವರ ಆದೇಶದ ಮೇರೆಗೆ ಬಿಲಾಸ್ಪುರ (ಛತ್ತೀಸಗಡ್)ದಲ್ಲಿ ಶ್ರೀ ದುರ್ಗಾ ದೇವಿಯ ಮೂರ್ತಿಯ ವಿಸರ್ಜನೆ ಮೆರವಣಿಗೆಯಲ್ಲಿ ಪೊಲೀಸರಿಂದ ಲಾಠಿಚಾರ್ಜ್

ಪೊಲೀಸರು ಡಿಜೆ ಇದ್ದ ವಾಹನವನ್ನು ವಶಪಡಿಸಿಕೊಂಡಿದ್ದರಿಂದ ಗುಂಪಿನಿಂದ ಪೊಲೀಸ್ ಠಾಣೆ ಮೇಲೆ ಕಲ್ಲೆಸೆತ

  • ಹಿಂದೂ ಧಾರ್ಮಿಕ ಮೆರವಣಿಗೆಗಳಿಗೆ ಯಾವಾಗಲೂ ನಿರ್ಬಂಧ ಹೇರುವ ಪೊಲೀಸರು ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಾಲ ಮುದುಡಿಕೊಳ್ಳುತ್ತಾರೆ ! ಜನಸಮೂಹವು ನಿರ್ಬಂಧಗಳನ್ನು ವಿರೋಧಿಸಿದರೆ, ಅವರ ಮೇಲೆ ಲಾಠಿಚಾರ್ಜ್ ಮಾಡಲಾಗುತ್ತದೆ ಹಾಗೂ ಅಧಿಕಾರಿಯು ಮತಾಂಧನಾಗಿದ್ದರೆ, ಆತನಿಗೆ ಇನ್ನಷ್ಷು ಪೊಗರು ಬರುತ್ತದೆ, ಎಂಬುದು ಇದರಿಂದ ಕಂಡುಬರುತ್ತದೆ !
  • ಕಾಂಗ್ರೆಸ್‌ನ ರಾಜ್ಯದಲ್ಲಿ ಇದಕ್ಕಿಂತ ಇನ್ನೇನು ಬೇರೆಯಾಗಲು ಸಾಧ್ಯ ? ಈ ಘಟನೆಯ ಸತ್ಯ ಬೆಳಕಿಗೆ ಬರಲಿದೆ ಎಂದು ನಿರೀಕ್ಷಿಸಬೇಡಿ !

ಬಿಲಾಸ್ಪುರ್ (ಛತ್ತೀಸ್‌ಗಡ್) – ಇಲ್ಲಿ ಅಕ್ಟೋಬರ್ ೨೭ ರ ರಾತ್ರಿ ತೆಲಿಪರಾ ದುರ್ಗೋತ್ಸವ ಸಮಿತಿಯ ಮೆರವಣಿಗೆ ನಗರ ಪೊಲೀಸ್ ಠಾಣೆ ಬಳಿ ಸಾಗುತ್ತಿದ್ದಾಗ ಪೊಲೀಸರು ಡಿಜೆ ಹಾಕಿರುವ ಕಾರಣವನ್ನು ತಿಳಿಸಿ ‘ಡಿಜೆ’ ಹಾಕಿದ್ದ ವಾಹನವನ್ನು ವಶಪಡಿಸಿಕೊಂಡರು. ಜೊತೆಗೆ ದೇವಿಯ ಮೂರ್ತಿ ಇರುವ ವಾಹನವನ್ನೂ ನಿಲ್ಲಿಸಿದರು. ಈ ಬಗ್ಗೆ ಸಮಿತಿಯ ಸದಸ್ಯರು ಪೊಲೀಸರಿಗೆ ಮನವಿ ಮಾಡಲು ಪ್ರಯತ್ನಿಸಿದರು; ಆದರೆ ಅವರು ಅದನ್ನು ಒಪ್ಪಲಿಲ್ಲ. ನಂತರ ವಾಗ್ವಾದಕ್ಕೆ ಕಾರಣವಾಯಿತು ಹಾಗೂ ಯಾರೋ ಪೊಲೀಸ್ ಠಾಣೆಗೆ ಕಲ್ಲು ಎಸೆಯಲು ಪ್ರಾರಂಭಿಸಿದರು. ಇದರಿಂದಾಗಿ ಕಲೀಮ್ ಖಾನ್ ನೇತೃತ್ವದಲ್ಲಿ ಪೊಲೀಸರು ಭಕ್ತರ ಮೇಲೆ ಲಾಠಿಚಾರ್ಜ್ ಮಾಡಿದರು. ಇದರ ಪರಿಣಾಮವಾಗಿ ಅಲ್ಲಿದ್ದ ಜನರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ನಂತರ ಪೊಲೀಸರು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಿ ಮೂರ್ತಿಯನ್ನು ವಿಸರ್ಜನೆ ಮಾಡಿದರು.

ಪೊಲೀಸ್ ನಿರೀಕ್ಷಕ ಕಲೀಮ್ ಖಾನ್ ಇವರು, ‘ಜನರ ಗುಂಪು ಪೊಲೀಸ್ ಠಾಣೆಗೆ ನುಗ್ಗಿದ್ದರಿಂದ ಅವರನ್ನು ಓಡಿಸಲು ಲಾಠಿಚಾರ್ಜ್ ಮಾಡಬೇಕಾಯಿತು. ಇದರ ವಿಡಿಯೋ ಕೂಡ ಇದೆ.’ ಎಂದು ಹೇಳಿದರು. ಪೊಲೀಸ್ ಅಧೀಕ್ಷಕ ಉಮೇಶ ಕಶ್ಯಪ ಇವರು, ಪೊಲೀಸ್ ಠಾಣೆಗೆ ನುಗ್ಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.