ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ಹಾಗೂ ಹತ್ಯೆಯ ಆರೋಪಿಯ ಖುಲಾಸೆಗೊಂಡ ಬಗ್ಗೆ ಯುವತಿಯರ ತಾಯಿಯಿಂದ ಆಂದೋಲನ

  • ಕೇರಳದಲ್ಲಿ ೩ ವರ್ಷಗಳ ಹಿಂದಿನ ಘಟನೆ !

  • ನಿರ್ದೋಷಿಗಳಾದ ೪ ಆರೋಪಿಗಳು ಸಿಪಿಐ (ಎಂ) ಕಾರ್ಮಿಕರು

  • ಕೇರಳದಲ್ಲಿ ಸಿಪಿಐ (ಎಂ) ರಾಜ್ಯವಿರುವುದರಿಂದ ಅವರ ಕಾರ್ಯಕರ್ತರಿಂದ ಈ ರೀತಿಯ ಅಪರಾಧವಾಗಿದ್ದರೆ, ಅವರಿಗೆ ಶಿಕ್ಷೆಯಾಗಲು ಸಿಪಿಐ (ಎಂ) ಸರ್ಕಾರ ಎಂದಾದರೂ ಪ್ರಯತ್ನಿಸುತ್ತದೆಯೇ ? ಮತ್ತು ಪೊಲೀಸರು ಸಹ ಆ ರೀತಿ ಪ್ರಯತ್ನಿಸುತ್ತಾರೆಯೇ ?

  • ಭಾಜಪದ ರಾಜ್ಯದಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯದ ಘಟನೆಗಳ ಬಗ್ಗೆ ಕೂಗಾಡುವ ಕಾಂಗ್ರೆಸ್, ಸಿಪಿಐ (ಎಂ) ಮತ್ತು ಇತರ ಪಕ್ಷಗಳು ತಾವು ಅಧಿಕಾರದಲ್ಲಿರುವ ರಾಜ್ಯಗಳಲ್ಲಾಗುವ ಇಂತಹ ಘಟನೆಗಳ ಬಗ್ಗೆ ಮೌನ ವಹಿಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಪಾಲಕ್ಕಾಡ್ (ಕೇರಳ) – ಮೂರು ವರ್ಷಗಳ ಹಿಂದೆ ಓರ್ವ ಮಹಿಳೆಯ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವಾಲಯಾರನಲ್ಲಿ ಸಂಶಯಾಸ್ಪದವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆ ಮಾಡುವ ಮೊದಲು ಅವರಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಈ ಪ್ರಕರಣದಲ್ಲಿ ಕಳೆದ ವರ್ಷ ನ್ಯಾಯಾಲಯದಿಂದ ಖುಲಾಸೆಗೊಂಡ ನಾಲ್ವರು ಆರೋಪಿಗಳು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಎಂದು ಹೇಳಲಾಗಿದೆ. ಈಗ ಈ ಹುಡುಗಿಯರ ತಾಯಿ ನ್ಯಾಯ ಪಡೆಯಲು ಮತ್ತೆ ಆಂದೋಲನವನ್ನು ಪ್ರಾರಂಭಿಸಿದ್ದಾರೆ. ಈ ಪ್ರಕರಣದ ೬ ಆರೋಪಿಗಳಲ್ಲಿ ೫ ಮಂದಿಯನ್ನು ಮಾತ್ರ ಬಂಧಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ೬ ನೇ ಆರೋಪಿಗಳನ್ನು ಏಕೆ ಬಂಧಿಸಲಾಗಿಲ್ಲ ? ಅಂತಹ ಪ್ರಶ್ನೆಯನ್ನು ಪ್ರಸ್ತುತಪಡಿಸಿದ್ದಾರೆ.

೧. ಈ ಘಟನೆಯ ತನಿಖೆಯನ್ನು ಯೋಗ್ಯ ರೀತಿಯಲ್ಲಿ ಮಾಡಿಲ್ಲ ಎಂದು ಕಳೆದ ತಿಂಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳ ಹೈಕೋರ್ಟ್‌ನಲ್ಲಿ ಒಪ್ಪಿಕೊಂಡಿದ್ದರು. ಆದ್ದರಿಂದ ನಾವು ಮತ್ತೆ ವಿಚಾರಣೆ ನಡೆಸುತ್ತೇವೆ. (ಯೋಗ್ಯರೀತಿಯಲ್ಲಿ ತನಿಖೆಯನ್ನು ಮಾಡದಿರುವ ಸಂಬಂಧಪಟ್ಟ ಪೊಲೀಸರ ವಿರುದ್ಧ ಸರಕಾರ ಯಾವ ಕ್ರಮ ತೆಗೆದುಕೊಳ್ಳುತ್ತದೆ ಮತ್ತು ಅದನ್ನು ಯಾವಾಗ ಕೈಗೊಳ್ಳಲಿದೆ ಎಂದು ವಿಜಯನ್‌ರು ಹೇಳಬೇಕು ! – ಸಂಪಾದಕ)

೨. ಸೆಂಟ್ರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ (ಸಿಬಿಐ)ನಿಂದ ವಿಚಾರಣೆ ನಡೆಸಬೇಕೆಂದು ಕೋರಿ ಹುಡುಗಿಯರ ತಾಯಿ ಉಚ್ಚ ನ್ಯಾಯಾಲಯದಲ್ಲಿ ಬೇಡಿಕೆ ಸಲ್ಲಿಸಿದ್ದರು.

ಕೆ. ಸುರೇಂದ್ರನ್

೩. ಪ್ರತಿಪಕ್ಷದ ನಾಯಕ ರಮೇಶ ಚೆನ್ನಿಥಾಲಾ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಇವರು ಆಂದೋಲನ ಮಾಡುತ್ತಿರುವ ಮಹಿಳೆಯನ್ನು ಭೇಟಿಯಾದರು. ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಬಾಲಕಿಯರ ಮೇಲೆ ನಡೆದ ಕಥಿತ ದೌರ್ಜನ್ಯದ ಬಗ್ಗೆ ಕಣ್ಣೀರು ಸುರಿಸಿದವರು ಈ ಘಟನೆಯಿಂದ ಮೌನರಾಗಿದ್ದಾರೆ ಎಂದು ಅವರು ಹೇಳಿದರು.