‘ಇಂತಹ ಚಿಕ್ಕ ನಿಯಮಗಳನ್ನು ಪಾಲಿಸದವರು ನಾಳೆ ಸರ್ಕಾರದ ನಿಯಮಗಳಿಗೆ ಬದಲಾಗಿ ಧರ್ಮಕ್ಕನುಸಾರ ವರ್ತಿಸಲು ಪ್ರಾರಂಭಿಸಿದರೆ, ಅವರು ಹಿಂದೂಗಳನ್ನು ರಕ್ಷಿಸುತ್ತಾರೆಯೇ’ ಎಂಬಂತಹ ಪ್ರಶ್ನೆ ಹಿಂದೂಗಳಲ್ಲಿ ನಿರ್ಮಾಣವಾದರೆ ಆಶ್ಚರ್ಯವೇನು ?
ಬಾಗಪತ್ (ಉತ್ತರ ಪ್ರದೇಶ) – ಬಾಗ್ಪತ್ನ ರಾಮಲಾ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಇಂತಸಾರ್ ಅಲಿ ಅನುಮತಿಯಿಲ್ಲದೆ ಗಡ್ಡವನ್ನು ಬೆಳೆಸಿದ್ದರು. ಇದರಿಂದಾಗಿ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಅಮಾನತುಗೊಳಿಸಿದ್ದಾರೆ. ಈ ಹಿಂದೆ ಗಡ್ಡವನ್ನು ಬೆಳೆಸುವ ಬಗ್ಗೆ ಅಲಿಯನ್ನು ಮೇಲಧಿಕಾರಿಗಳಿಂದ ಅನುಮತಿ ಪಡೆಯಲು ಹೇಳಲಾಗಿತ್ತು; ಆದರೆ ಆತ ಅನುಮತಿ ಪಡೆಯದೇ ಗಡ್ಡವನ್ನು ಬೆಳೆಸಿದನು. ಇಂತಸಾರ ಅಲಿ, ನಾನು ಕಳೆದ ಕೆಲವು ವರ್ಷಗಳಿಂದ ಅನುಮತಿ ಕೇಳುತ್ತಿದ್ದೇನೆ. ನನ್ನ ಅರ್ಜಿಯಲ್ಲಿ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದರು.
UP Police Sub-Inspector Intesar Ali suspended for keeping beard without permissionhttps://t.co/eHlVMdDVcK
— OpIndia.com (@OpIndia_com) October 22, 2020
ಪೊಲೀಸ್ ಅಧೀಕ್ಷಕ ಅಭಿಷೇಕ್ ಸಿಂಹ್ ಇವರು, ಪೊಲೀಸರ ನಿಯಮಗಳ ಪ್ರಕಾರ, ಸಿಖ್ಖರಿಗೆ ಮಾತ್ರ ಅನುಮತಿಯಿಲ್ಲದೆ ಗಡ್ಡ ಬೆಳೆಸಲು ಅವಕಾಶವಿದೆ ಎಂದು ಹೇಳಿದ್ದಾರೆ. ಅಲಿಯವರು ಗಡ್ಡ ಇಟ್ಟಿರುವ ಬಗ್ಗೆ ಹಲವಾರು ದೂರುಗಳು ಬಂದನಂತರ ಮೂರು ಬಾರಿ ಎಚ್ಚರಿಕೆ ನೀಡಲಾಗಿತ್ತು; ಆದರೆ ಗಡ್ಡ ತೆಗೆಯದೇ ಇದ್ದರಿಂದ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.