ಹಿಂದೂವಿರೋಧಿ ‘ಫೇಸಬುಕ್’ನ ದಬ್ಬಾಳಿಕೆ ವಿರುದ್ಧ ಸಂಘರ್ಷ ಮಾಡಲು ಪಣತೊಟ್ಟ ಹಿಂದೂಗಳು
ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿರುವಾಗ ‘ಫೇಸಬುಕ್’ ದಬ್ಬಾಳಿಕೆ ನಿಲುವು ತೋರುತ್ತಾ ಕೇವಲ ಹಿಂದೂ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಫೇಸಬುಕ್ ಪೇಜ್ ಬಂದ್ ಮಾಡುತ್ತಿದೆ. ಇನ್ನೊಂದೆಡೆ ಹಿಂಸಾಚಾರ ಮಾಡುವ ಉಗ್ರರ ಮತ್ತು ಅವರ ಉಗ್ರವಾದಿ ಸಂಘಟನೆಗಳ ‘ಫೇಸಬುಕ್ ಪೇಜ್’ ಸಲೀಸಾಗಿ ವಿಷಕಕ್ಕುತ್ತಾ ಪ್ರಚಾರ ಮಾಡುತ್ತಿವೆ. ಹಿಂದೂಬಹುಸಂಖ್ಯಾತ ದೇಶದಲ್ಲಿ ಹಿಂದೂಗಳದ್ದೇ ಧ್ವನಿ ಅದುಮುವ ಆಕ್ರೋಶಕಾರಿ ಕೃತ್ಯವನ್ನು ‘ಫೇಸಬುಕ್’ ಆರಂಭಿಸಿದೆ. ಹಿಂದೂವಿರೋಧಿ ‘ಫೇಸಬುಕ್’ನ ಈ ಪಕ್ಷಪಾತವನ್ನು ಬಯಲಿಗೆಳೆಯಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ 6 ಸೆಪ್ಟೆಂಬರ್ 2020 ರಂದು ರಾತ್ರಿ 8.30 ರಿಂದ 9.30 ಈ ಅವಧಿಯಲ್ಲಿ ‘ಚರ್ಚಾ ಹಿಂದೂ ರಾಷ್ಟ್ರ ಕಿ’ ಈ ವಿಶೇಷ ವಿಚಾರ ಸಂಕಿರಣದಲ್ಲಿ ಫೇಸ್ಬುಕ್ ಕಾ ಪಕ್ಷಪಾತ : ಹಿಂದುವೊಂಕೆ ‘ಪೇಜ್ ಬಂದ್, ಆತಂಕಿಯೋಕೆ ಚಾಲು !’ ಈ ವಿಷಯದ ಮೇಲೆ ‘ಆನ್ಲೈನ್’ ವಿಶೇಷ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಹಾಗಾಗಿ ಹೆಚ್ಚೆಚ್ಚು ಹಿಂದೂಗಳು ಈ ಕಾರ್ಯಕ್ರಮವನ್ನು ವೀಕ್ಷಿಸಬೇಕು ಮತ್ತು ‘ಫೇಸಬುಕ್’ನ ಈ ಪಕ್ಷಪಾತವನ್ನು ಖಂಡಿಸಬೇಕು, ಎಂದೂ ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.
ಈ ‘ವಿಶೇಷ ಚರ್ಚಾಕೂಟ’ದಲ್ಲಿ ‘ಫೇಸ್ಬುಕ್’ ಇತ್ತೀಚೆಗೆ ಯಾರ ಪುಟಗಳನ್ನು ಬಂದ್ ಮಾಡಿದೆಯೋ, ಅವರು ಭಾಜಪದ ತೆಲಂಗಾಣದ ಶಾಸಕ ಹಾಗೂ ಪ್ರಖರ ಹಿಂದುತ್ವನಿಷ್ಠ ಟಿ. ರಾಜಾಸಿಂಹ, ‘ಸೋಶಿಯಲ್ ಮೀಡಿಯಾ’ದ ಅಭ್ಯಸಕರಾದ ಶ್ರೀ. ಅಭಿವನ ಖರೆ, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ವಕ್ತಾರರಾದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಹಾಗೂ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮವನ್ನು ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂಜಾಗೃತಿ’ ಈ ‘ಯು-ಟ್ಯುಬ್’ ಚಾನಲ್ ಮೂಲಕ, ಅದೇರೀತಿ www.hindujagruti.org ಈ ಜಾಲತಾಣದಿಂದ ನೇರ ಪ್ರಸಾರವಾಗಲಿದೆ.
ಈ ಕಾರ್ಯಕ್ರಮವನ್ನು ವೀಕ್ಷಿಸಲು ಲಿಂಕ್ :
Youtube.com/HinduJagruti
www.hindujagruti.org


ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !