ಚೀನಾದ ಸಹವಾಸದೋಷದಿಂದ ಈಗ ನೇಪಾಳದ ಕಮ್ಯುನಿಸ್ಟ ಪ್ರಧಾನಮಂತ್ರಿ ಓಲಿ ಇವರೂ ಅಸುರ ವಿಸ್ತಾರವಾದಿಯನ್ನು ಜೋಪಾಸನೆ ಮಾಡುತ್ತಿರುವುದು ಕಂಡುಬರುತ್ತದೆ. ಭಾರತ-ನೇಪಾಳದ ನಡುವೆ ವೈರತ್ವ ನಿರ್ಮಿಸಲು ನೋಡುತ್ತಿರುವ ಓಲಿಯವರನ್ನು ಈಗ ನೇಪಾಳದ ಜನರೇ ಮನೆಗೆ ಕಳುಹಿಸಬೇಕು !
ಪಶ್ಚಿಮ ಚಂಪಾರಣ (ಬಿಹಾರ) – ನೇಪಾಳವು ಬಿಹಾರ್ನ ಪಶ್ಚಿಮ ಚಂಪಾರಣ ಜಿಲ್ಲೆಯಲ್ಲಿರುವ ‘ಸೀತಾಮಾತಾ ಗುಹೆ’ ಹೆಸರಿನಿಂದ ಗುರುತಿಸುವ ಪ್ರದೇಶವನ್ನು ತನ್ನದೆಂದು ಹೇಳಿಕೊಳ್ಳುತ್ತಿದೆ. ಕೆಲವು ನೇಪಾಳಿ ಸಮಾಜಕಂಟಕರು ಭಾರತ-ನೇಪಾಳ ಗಡಿಯಲ್ಲಿರುವ ಸೀತಾಮಾತಾ ಗುಹೆಯ ಪ್ರದೇಶದಲ್ಲಿ ಹಾಕಲಾಗಿದ್ದ ಕಲ್ಲಿನ ಖಂಬ ಕ್ರಮಸಂಖ್ಯೆ ೪೩೬ ಕಿತ್ತುಹಾಕಿದ್ದಾರೆ. ಈ ಘಟನೆಯ ಬಗ್ಗೆ ಸ್ಥಳೀಯರಿಂದ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾದ ನಂತರ ಸೈನ್ಯದ ಅಧಿಕಾರಿಯು ಘಟನಾಸ್ಥಳಕ್ಕೆ ಭೇಟಿ ನೀಡಿದ್ದಾರೆ. ನೇಪಾಳ ಸರಕಾರದ ಹೇಳಿಕೆಗನುಸಾರ ‘ಸೀತಾಮಾತೆಯು ಕೆಲವು ದಿನಗಳ ಕಾಲ ಈ ಗುಹೆಯಲ್ಲಿ ವಾಸವಾಗಿದ್ದರು ನಂತರ ಅವರು ವಾಲ್ಮಿಕೀ ಆಶ್ರಮಕ್ಕೆ ಹೋದರು’ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ಈ ಸ್ಥಳದಲ್ಲಿ ಎರಡೂ ದೇಶದ ನಾಗರಿಕರು ಪೂಜೆ ಮಾಡುತ್ತಿದ್ದರು.

ಅಮೆರಿಕವು ಇರಾನ್ನ ದಾಳಿಗಳಿಂದ ಭಾರತೀಯ ಹಡಗುಗಳನ್ನು ರಕ್ಷಿಸಿದೆ ಅಂತೆ!
ಶೀಘ್ರದಲ್ಲೇ ಶಾಂತಿ ಒಪ್ಪಂದ: ಇರಾನ್ ಯುದ್ಧ ಅಂತ್ಯ! – ಟ್ರಂಪ್ ಹೇಳಿಕೆ
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
ಬ್ರಿಟನ್ : ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪಾಕಿಸ್ತಾನಿ ಪ್ರಜೆ ಶೇರಾಜ್ ಮಲಿಕ್ಗೆ 10 ವರ್ಷಗಳ ಜೈಲು ಶಿಕ್ಷೆ!
ರಾವಲಕೋಟ್ (ಪಾಕ್ ಆಕ್ರಮಿತ ಕಾಶ್ಮೀರ) : ಪಾಕ್ ಸೇನೆಯು ಮತ್ತೆ 16 ನಾಗರಿಕರನ್ನು ಕೊಂದಿದೆ !
‘ಬಾಂಗ್ಲಾದೇಶದ ಸಾರ್ವಭೌಮತ್ವದ ರಕ್ಷಣೆಗಾಗಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ!’ – ‘ಜಮಾತ್-ಎ-ಇಸ್ಲಾಮಿ’ : Jamaat-e-Islami