ಬಂಗಾಳದಲ್ಲಿ ಆದಿವಾಸಿ ಮಹಿಳೆಯ ಮೇಲೆ ಸಾಮೂಹಿಕ ಬಲಾತ್ಕಾರ ಮತ್ತು ಕೊಲೆ: ಇಬ್ಬರು ಕಾಮುಕ ಮುಸಲ್ಮಾನರ ಬಂಧನ

ಕೊಲಕಾತಾ (ಬಂಗಾಳ) – ಬಂಗಾಳದ ಪೂರ್ವ ಬರ್ಧಮಾನ ಜಿಲ್ಲೆಯಲ್ಲಿ ಆದಿವಾಸಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಬಲಾತ್ಕಾರ ಎಸಗಿ ಆಕೆಯ ಹತ್ಯೆ ಮಾಡಿದ ಪ್ರಕರಣದಲ್ಲಿ ಎಸ್‌. ಕೆ. ಅಜೀಜುಲ ಮತ್ತು ಭದಾಯಿ ಶೇಖ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ದೇವಾನದಿಘಿಯಲ್ಲಿ ನಡೆದಿದ್ದು, ಈ ಮಹಿಳೆಯು ಕಳೆದ ಒಂದೂವರೆ ತಿಂಗಳಿನಿಂದ ತನ್ನ ಸಂಬಂಧಿಗಳ ಮನೆಯಲ್ಲಿ ವಾಸಿಸುತ್ತಿದ್ದಳು.

ಪೊಲೀಸರ ಅನುಸಾರ, ಪತಿಯನ್ನು ಹುಡುಕಲು ಆಕೆ ಜುಲೈ 6 ರ ಸಂಜೆ ಮನೆಯಿಂದ ಹೊರಟಿದ್ದಳು, ಆ ಬಳಿಕ ಆಕೆ ಕಾಣೆಯಾಗಿದ್ದಳು. ಜುಲೈ 7 ರ ಬೆಳಗ್ಗೆ ಆಕೆಯ ಶವವು ಕಾಲುವೆಯ ಪಕ್ಕದ ಗದ್ದೆಯಲ್ಲಿ ಪತ್ತೆಯಾಗಿದೆ.

ಸಂಪಾದಕೀಯ ನಿಲುವು

ಬಲಾತ್ಕಾರದ ಇಂತಹ ಪ್ರಕರಣಗಳಲ್ಲಿ ದೋಷಿಗಳಿಗೆ ಗಲ್ಲು ಶಿಕ್ಷೆಯನ್ನೇ ನೀಡುವ ಕಾನೂನನ್ನು ಜಾರಿಗೆ ತಂದು ಅದನ್ನು ತತ್ಪರತೆಯಿಂದ ಅನುಷ್ಠಾನಗೊಳಿಸಿದರೆ ಮಾತ್ರ ಇಂತಹ ಘಟನೆಗಳು ನಿಲ್ಲುತ್ತವೆ; ಆದರೆ ದೇಶದ ಸರ್ವಪಕ್ಷಗಳ ಸರಕಾರಗಳಿಗೆ ಈ ಬಗ್ಗೆ ಸಂವೇದನಾಶೀಲತೆ ಇದೆಯೇ? ಅವರಲ್ಲಿ ಇಂತಹ ಘಟನೆಗಳನ್ನು ಶಾಶ್ವತವಾಗಿ ತಡೆಯುವ ಇಚ್ಛಾಶಕ್ತಿ ಇದೆಯೇ? ಎಂಬುದು ಮೂಲ ಪ್ರಶ್ನೆಯಾಗಿದೆ!