ಪುಣೆಯಲ್ಲಿ ‘ಮಹಾರಾಷ್ಟ್ರ ಮುಸ್ಲಿಂ ಕಾನ್ಫರೆನ್ಸ್’ ವಾರಿನ ಪ್ರಯುಕ್ತ ‘ಅಲ್ಲಾ ದೇವೇ ಅಲ್ಲಾ ದಿಲಾವೇ’ ಎಂದು ಫಲಕಗಳನ್ನು ಅಳವಡಿಸಿದೆ!

ಜಗದ್ಗುರು ಸಂತ ತುಕಾರಾಂ ಮಹಾರಾಜರ ಹೆಸರಿನಲ್ಲಿ 'ಇಸ್ಲಾಮಿ' ಪ್ರಚಾರ ಮಾಡುತ್ತಾ ವಾರಕರಿಗಳ ದಿಕ್ಕುತಪ್ಪಿಸುವ ಪ್ರಯತ್ನ!

ಪುಣೆ – ಜಗದ್ಗುರು ಸಂತ ತುಕಾರಾಂ ಮಹಾರಾಜರ ಪಾಲಖಿ ಮೆರವಣಿಗೆ ಪುಣ್ಯನಗರಿಗೆ ಆಗಮಿಸುತ್ತಿರುವಾಗಲೇ ನಗರದಲ್ಲಿ ‘ಮಹಾರಾಷ್ಟ್ರ ಮುಸ್ಲಿಂ ಕಾನ್ಫರೆನ್ಸ್’ ಸಂಘಟನೆಯು ವಿವಾದಾತ್ಮಕ ಫಲಕಗಳನ್ನು ಅಳವಡಿಸಿದೆ. ಸ್ವಾರಗೇಟ್‌ನ ಸೆವೆನ್ ಲವ್ಸ್ ಚೌಕ್‌ನಲ್ಲಿ ಅಳವಡಿಸಿರುವ ಫಲಕದಲ್ಲಿ ಸಂತ ತುಕಾರಾಂ ಮಹಾರಾಜರ ಚಿತ್ರದೊಂದಿಗೆ ಅವರ ಅಭಂಗದ ಸಾಲುಗಳಾದ ‘ಅಲ್ಲಾ ದೇವೇ ಅಲ್ಲಾ ದಿಲಾವೇ’ ಮತ್ತು ‘ಅಲ್ಲಾ ಏಕ್ ತು, ನಬಿ ಏಕ್ ತು’ ಎಂದು ಬರೆಯಲಾಗಿದೆ. ಕಳೆದ ವರ್ಷವೂ ಇದೇ ರೀತಿಯ ಫಲಕಗಳನ್ನು ಅಳವಡಿಸಿ ವಾರಕರಿ ಸಂಪ್ರದಾಯವನ್ನು ಉದ್ದೇಶಪೂರ್ವಕವಾಗಿ ಇಸ್ಲಾಮೀಕರಣ ಮಾಡುವ ಪ್ರಯತ್ನ ನಡೆಸಲಾಗಿತ್ತು, ಅದರ ಪುನರಾವರ್ತನೆಯನ್ನು ಈ ವರ್ಷವೂ ಮಾಡಲಾಗಿದೆ.

ನಗರದ ವೃತ್ತಗಳಲ್ಲಿ ಅಳವಡಿಸಲಾದ ಈ ಫಲಕದಲ್ಲಿ ಒಂದು ಕಡೆ ಜಗದ್ಗುರು ಸಂತ ತುಕಾರಾಂ ಮಹಾರಾಜರ ಮತ್ತು ಇನ್ನೊಂದು ಕಡೆ ಸಂಘಟನೆಯ ಸಂಸ್ಥಾಪಕ-ಅಧ್ಯಕ್ಷ ಹಾಜಿ ಜುಬೇರ್ ಮೆಮನ್ ಅವರ ದೊಡ್ಡ ಭಾವಚಿತ್ರವನ್ನು ಮುದ್ರಿಸಲಾಗಿದೆ. ಕೆಳಭಾಗದಲ್ಲಿ ಸಂಘಟನೆಯ ವಿವಿಧ ಪದಾಧಿಕಾರಿಗಳ ಭಾವಚಿತ್ರಗಳಿವೆ. (ತುಕಾರಾಂ ಮಹಾರಾಜರು ಹಿಂದೂ ಧರ್ಮದ ಶ್ರೇಷ್ಠತೆಯನ್ನು ಸಾರುವ ಅನೇಕ ಅಭಂಗಗಳು ಲಭ್ಯವಿವೆ. ತುಕಾರಾಂ ಮಹಾರಾಜರು ಮತ್ತು ವಾರಕರಿಗಳ ಬಗ್ಗೆ ಸೌಹಾರ್ದತೆ ತೋರಿಸುವವರು ಈ ಅಭಂಗಗಳನ್ನು ಸಹ ಅಧ್ಯಯನ ಮಾಡಬೇಕು! – ಸಂಪಾದಕರು)

ಈ ಫಲಕದ ಮೇಲೆ ಸಂತರ ಅಭಂಗಗಳ ಸಾಲುಗಳನ್ನು ಸಂದರ್ಭದಿಂದ ಬೇರ್ಪಡಿಸಿ, ಅದನ್ನು ತಮ್ಮ ಸ್ವಂತ ಧಾರ್ಮಿಕ ಅಜೆಂಡಾಕ್ಕಾಗಿ (ಕಾರ್ಯಸೂಚಿಗಾಗಿ) ಬಳಸಲಾಗಿದೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ.

ಸಂಪಾದಕೀಯ ನಿಲುವು

  • ತುಕಾರಾಂ ಮಹಾರಾಜರಂತಹ ಮಹಾನ್ ಸಂತರು ಕೂಡ ಅಲ್ಲಾನ ಕುರಿತು ಅಭಂಗಗಳನ್ನು ಬರೆದು ಅದರ ಶ್ರೇಷ್ಠತೆಯನ್ನು ಒಪ್ಪಿಕೊಂಡಿದ್ದಾರೆ, ಎಂದು ಬಿಂಬಿಸುವ ಇಸ್ಲಾಮಿ ಪ್ರಚಾರಕರ ಪ್ರಯತ್ನವಿದು. ವಾಸ್ತವದಲ್ಲಿ ಈ ಅಭಂಗಗಳ ಮೂಲಕ ತುಕಾರಾಂ ಮಹಾರಾಜರು ಪ್ರಯತ್ನವಾದಕ್ಕೆ ಒತ್ತು ನೀಡಿದ್ದಾರೆ; ಆದರೆ ತಮಗೆ ಬೇಕಾದಷ್ಟು ಅಭಂಗದ ಭಾಗವನ್ನು ತೆಗೆದುಕೊಂಡು ಇಸ್ಲಾಂ ಅನ್ನು ಉದಾತ್ತೀಕರಿಸಲು ಪ್ರಯತ್ನಿಸುತ್ತಿರುವ ಇಂತಹವರಿಂದ ಹಿಂದೂಗಳು ಎಚ್ಚರವಾಗಿರಬೇಕು!
  • ಹಿಂದೂ ಸಂತರ ವಚನಗಳ ಮೇಲೆ ಇಷ್ಟೊಂದು ಪ್ರೀತಿ ಇದ್ದರೆ, ಈ ಸಂಘಟನೆಯು ತಮ್ಮ ಧಾರ್ಮಿಕ ಸ್ಥಳಗಳಲ್ಲಿ ಸಂತ ತುಕಾರಾಂ ಮಹಾರಾಜರ ಅಭಂಗಗಳ ಫಲಕಗಳನ್ನು ಏಕೆ ಅಳವಡಿಸುವುದಿಲ್ಲ?