ಅನುಕಂಪದ ನೌಕರಿಗಾಗಿ ತಾಯಿಯ ಹತ್ಯೆ? ಮಗಳ ಬಂಧನ : Mother Murder Case

ಮಗಳು ಸೇರಿದಂತೆ ೭ ಜನರ ಬಂಧನ

ಎಡಭಾಗದಲ್ಲಿ ಶ್ರೀಮತಿ ನೀರಜ್ ಶರ್ಮಾ ಮತ್ತು ಆರೋಪಿ ಆಯುಷಿ ಶರ್ಮಾ.

ಜೈಪುರ (ರಾಜಸ್ಥಾನ) – ಅನುಕಂಪದ ಆಧಾರದ ಮೇಲೆ ತಾಯಿಗೆ ಸಿಕ್ಕಿದ ನೌಕರಿ ತನಗೆ ಸಿಗಬೇಕು ಮತ್ತು ಆಸ್ತಿಯಲ್ಲಿ ಪಾಲು ಸಿಗಬೇಕು ಎಂಬ ಕಾರಣಕ್ಕಾಗಿ ಮಗಳೊಬ್ಬಳು ಸುಪಾರಿ ನೀಡಿ ತಾಯಿಯನ್ನು ಹತ್ಯೆ ಮಾಡಿಸಿದ ಘಟನೆ ಇಲ್ಲಿನ ಪ್ರತಾಪನಗರದಲ್ಲಿ ನಡೆದಿದೆ. ನ್ಯಾಯಾಲಯದ ಕ್ಲರ್ಕ ಆಗಿದ್ದ ೪೫ ವರ್ಷದ ಶ್ರೀಮತಿ ನೀರಜ್ ಶರ್ಮಾ ಅವರನ್ನು ಕಾರ್ ಅಡಿಯಲ್ಲಿ ಹೊಸಕಿ ಹಾಕಿ ಹತ್ಯೆ ಮಾಡಲಾಗಿತ್ತು. ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇದು ಅಪಘಾತವಲ್ಲ, ಬದಲಿಗೆ ಮುಂಚಿತವಾಗಿಯೇ ಯೋಜಿಸಿದ ಕೊಲೆ ಎಂಬ ಸಂಶಯ ಪೊಲೀಸರಿಗೆ ಬಂದಿತ್ತು. ತನಿಖೆಯಿಂದ ಕೌಟುಂಬಿಕ ಪಿತೂರಿ ಮತ್ತು ಬಾಡಿಗೆ ಹಂತಕರ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಪೊಲೀಸರು ಈ ಪ್ರಕರಣದಲ್ಲಿ ನೀರಜ್ ಅವರ ಮಗಳು ಆಯುಷಿ ಶರ್ಮಾ ಸೇರಿದಂತೆ ೭ ಜನರನ್ನು ಬಂಧಿಸಿದ್ದು, ಇನ್ನೊಬ್ಬ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ.

ಪೊಲೀಸ್ ಉಪ ಆಯುಕ್ತರಾದ ರಂಜಿತಾ ಶರ್ಮಾ ಅವರು, ನೀರಜ್ ಅವರ ಪತಿ ಸುಮಾರು ಒಂದು ವರ್ಷದ ಹಿಂದೆ ನಿಧನರಾಗಿದ್ದರು. ಪತಿಯ ನಿಧನದ ನಂತರ ನೀರಜ್ ಅವರಿಗೆ ಅನುಕಂಪದ ಆಧಾರದ ಮೇಲೆ ನ್ಯಾಯಾಲಯದಲ್ಲಿ ಕಿರಿಯ ಲಿಪಿಕರಾಗಿ ಸರಕಾರಿ ನೌಕರಿ ಸಿಕ್ಕಿತ್ತು. ಮಗಳು ಆಯುಷಿಗೆ ಆ ಸರಕಾರಿ ನೌಕರಿ ಬೇಕಾಗಿತ್ತು; ಆದರೆ ನೀರಜ್ ಅವರೇ ಸ್ವತಃ ಆ ನೌಕರಿಯನ್ನು ಸ್ವೀಕರಿಸಿದ್ದರು. ಇದಲ್ಲದೆ ಕಳೆದ ೨-೩ ವರ್ಷಗಳಿಂದ ತಾಯಿ ಮತ್ತು ಮಗಳ ನಡುವೆ ಆಸ್ತಿ ವಿಷಯವಾಗಿಯೂ ವಿವಾದ ನಡೆದಿತ್ತು. ನೌಕರಿ ಮತ್ತು ಆಸ್ತಿಯನ್ನು ವಶಪಡಿಸಿಕೊಳ್ಳಲು ಆಯುಷಿ ತನ್ನ ಚಿಕ್ಕಪ್ಪ ಮೋಹನ ಸ್ವರೂಪ ಮತ್ತು ಸೋದರಸಂಬಂಧಿ ಬಲರಾಮ ಉರ್ಫ್ ರವಿ ಎಂಬುವವರ ಜೊತೆಗೂಡಿ ತಾಯಿಯನ್ನು ಮುಗಿಸಲು ಸಂಚು ರೂಪಿಸಿದ್ದಳು. ಇದಕ್ಕಾಗಿ ಅವರು ಭರತಪುರದ ಹೇಮಂತ ಶರ್ಮಾ ಎಂಬಾತನಿಗೆ ೭ ಲಕ್ಷ ರೂಪಾಯಿಗಳ ಸುಪಾರಿ ನೀಡಿದ್ದರು.

ಸಂಪಾದಕೀಯ ನಿಲುವು

ಇದು ನೈತಿಕತೆಯ ಅಧಃಪತನವನ್ನು ತೋರಿಸುವ ಘಟನೆಯಾಗಿದೆ. ಈ ಹಿಂದೆಯೂ ಇಂತಹದ್ದೇ ಘಟನೆಯನ್ನು ಮಗನೊಬ್ಬ ತನ್ನ ತಂದೆಯ ವಿಷಯದಲ್ಲಿ ಮಾಡಿದ್ದನು. ಇದಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಜನರಿಗೆ ನೈತಿಕತೆಯನ್ನು ಕಲಿಸದ ಎಲ್ಲಪಕ್ಷದ ಸರಕಾರಿ ಆಡಳಿತಗಾರರೇ ಜವಾಬ್ದಾರರು!