ರಾಯಗಢದಲ್ಲಿ ಪ್ರವಾಹದಿಂದ 3 ಸಾವಿರ ಗ್ಯಾಸ್ ಸಿಲಿಂಡರ್‌ಗಳು ಕೊಚ್ಚಿಹೋಗಿವೆ!

ರಾಯಗಢ – ಪಾತಾಳಗಂಗಾ ನದಿಗೆ ಬಂದ ಪ್ರವಾಹದಿಂದ 3 ಸಾವಿರ ಗ್ಯಾಸ್ ಸಿಲಿಂಡರ್‌ಗಳು ಕೊಚ್ಚಿಹೋಗಿವೆ. ಈ ಸಿಲಿಂಡರ್‌ಗಳು ಆ ಪ್ರದೇಶದ ಗೋದಾಮು ಮತ್ತು ಸಂಗ್ರಹಣಾ ಕೇಂದ್ರಗಳಲ್ಲಿದ್ದವು. ಕೆಲವು ಸಿಲಿಂಡರ್‌ಗಳು ತುಂಬಿದ್ದವು, ಇನ್ನು ಕೆಲವು ಖಾಲಿಯಾಗಿದ್ದವು. ಈ ಸಿಲಿಂಡರ್‌ಗಳು ಯಾರಿಗಾದರೂ ಸಿಕ್ಕರೆ, ಅವರು ಅದನ್ನು ಸ್ವತಃ ಬಳಸಲು ಅಥವಾ ಸ್ಥಳಾಂತರಿಸಲು ಪ್ರಯತ್ನಿಸಬಾರದು. ಸಿಲಿಂಡರ್‌ಗಳನ್ನು ತಕ್ಷಣವೇ ಹಿಂದೂಸ್ತಾನ್ ಪೆಟ್ರೋಲಿಯಂ ಆಡಳಿತ ಮಂಡಳಿಗೆ ಒಪ್ಪಿಸಬೇಕೆಂದು ವಿನಂತಿಸಲಾಗಿದೆ.