೩ ಲಕ್ಷಕ್ಕೂ ಹೆಚ್ಚು ಭಕ್ತರ ದರ್ಶನ ಬಾಕಿ

ಅಮರನಾಥ (ಜಮ್ಮು-ಕಾಶ್ಮೀರ) – ಇಲ್ಲಿನ ಅಮರನಾಥ ಗುಹೆಯಲ್ಲಿನ ನೈಸರ್ಗಿಕ ಮಂಜುಗಡ್ಡೆಯ ಶಿವಲಿಂಗವು ಬಹುತೇಕ ಸಂಪೂರ್ಣವಾಗಿ ಕರಗಿದೆ. ಯಾತ್ರೆ ಆರಂಭವಾಗಿ ಕೇವಲ ೫ ದಿನಗಳಾಗಿದ್ದು, ಇನ್ನು ೫೪ ದಿನಗಳ ಕಾಲ ಈ ಯಾತ್ರೆ ಮುಂದುವರಿಯಲಿದೆ. ಕಳೆದ ೪ ದಿನಗಳಲ್ಲಿ ೮೬ ಸಾವಿರ ಭಕ್ತರು ಪವಿತ್ರ ಗುಹೆಯಲ್ಲಿ ದರ್ಶನ ಪಡೆದಿದ್ದಾರೆ. ಈ ಸಂಖ್ಯೆ ಪ್ರತಿದಿನ ೧ ಲಕ್ಷ ದಾಟುವ ಸಾಧ್ಯತೆ ಇದೆ. ಯಾತ್ರೆಗಾಗಿ ಈ ವರ್ಷ ೪ ಲಕ್ಷ ಭಕ್ತರು ನೋಂದಣಿ ಮಾಡಿಕೊಂಡಿದ್ದಾರೆ.
ಮೇ ೨೩ ರಂದು ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧರು ಬಿಡುಗಡೆ ಮಾಡಿದ ಚಿತ್ರದಲ್ಲಿ ಶಿವಲಿಂಗದ ಗಾತ್ರ ೭ ಅಡಿ ಇತ್ತು. ಜೂನ್ ೨೯ ರ ಮೊದಲ ಪೂಜೆಯ ದಿನದಂದೂ ಶಿವಲಿಂಗದ ಎತ್ತರ ೫ ಅಡಿಗಿಂತ ಹೆಚ್ಚಿತ್ತು. ಜುಲೈ ೬ ರಂದು ಮುನ್ನೆಲೆಗೆ ಬಂದ ಚಿತ್ರದಲ್ಲಿ ಅದು ಶೇಕಡಾ ೯೦ ರಷ್ಟು ಕರಗಿರುವುದು ಕಂಡುಬಂದಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ