ರೈತರ ಪರಿಹಾರಕ್ಕೆ ಶ್ರೇಯಸ್ಸಿನ ಕಿತ್ತಾಟ: ಕಾಂಗ್ರೆಸ್-ಭಾಜಪ ವಾಗ್ವಾದ

ಹಾಸನ – ಇಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಅವರ ಎದುರು ಬೇಲೂರು ತಾಲೂಕಿನ ಗಂಗೂರು ಗ್ರಾಮದಲ್ಲಿ ಕಾಂಗ್ರೆಸ್ ಶಾಸಕ ಕೆ.ಎಮ್. ಶಿವಲಿಂಗೇಗೌಡ ಮತ್ತು ಭಾಜಪ ಶಾಸಕ ಹೆಚ್.ಕೆ. ಸುರೇಶ್ ನಡುವೆ ರೈತರಿಗೆ ಪರಿಹಾರದ ಹಣ ನೀಡುವ ವಿಚಾರದಲ್ಲಿ ವಾದ ಉಂಟಾಯಿತು.

ಎತ್ತಿನಹೊಳೆ ಯೋಜನೆಯ ಕಾಮಗಾರಿ ಪರಿಶೀಲನೆಗೆ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಬಂದಿದ್ದರು. ಈ ವೇಳೆ ಎತ್ತಿನಹೊಳೆ ಯೋಜನೆಗಾಗಿ ಜಮೀನು ನೀಡಿದ ರೈತರಿಗೆ ಸರಕಾರ 28 ಕೋಟಿ ರೂಪಾಯಿಗಳ ಪರಿಹಾರ ನೀಡಬೇಕಿದೆ. ಈ ಪರಿಹಾರದ ಮೊತ್ತವನ್ನು ಆದಷ್ಟು ಬೇಗ ನೀಡಬೇಕೆಂದು ರೈತರು ಸಚಿವರಿಗೆ ಮನವಿ ಮಾಡಿದರು. ಈ ವೇಳೆ ‘ನಾನೇ ಸ್ವತಃ ಮಾತನಾಡಿ 28 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದೇನೆ’ ಎಂದು ಶಾಸಕ ಕೆ.ಎಮ್. ಶಿವಲಿಂಗೇಗೌಡರು ಹೇಳಿದರು. ಈ ಹೇಳಿಕೆಗೆ ಸಿಟ್ಟಾದ ಶಾಸಕ ಹೆಚ್.ಕೆ. ಸುರೇಶ್ ಅವರು, ‘ಪ್ರತಿಯೊಂದರಲ್ಲೂ ಇವರು ನಮ್ಮದೇ ಎನ್ನುತ್ತಾರೆ. ನಿಮ್ಮದೇನು ಇಲ್ಲಿ, ನನ್ನ ಕ್ಷೇತ್ರದಲ್ಲಿ ನೀವು ಏನು ಮಾತನಾಡುತ್ತಿದ್ದೀರಿ?’ ಎಂದು ಭಾಜಪ ಶಾಸಕ ಹೆಚ್.ಕೆ. ಸುರೇಶ್ ಕೇಳಿದರು. ಅದಕ್ಕೆ ‘ಹೌದು, 28 ಕೋಟಿ ರೂಪಾಯಿ ಕೊಡಿಸಿದ್ದು ನಾನೇ’ ಎಂದರು. ಈ ವೇಳೆ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಜಗಳವನ್ನು ಕಂಡು ಸಚಿವ ರಾಮಲಿಂಗಾ ರೆಡ್ಡಿ ಸುಮ್ಮನಿದ್ದರು. ನಂತರ ಪೊಲೀಸರು ಮಧ್ಯಪ್ರವೇಶಿಸಿದ್ದರಿಂದ ಪರಿಸ್ಥಿತಿ ತಿಳಿಗೊಂಡಿತು.

ಸಂಪಾದಕೀಯ ನಿಲುವು

ರೈತರಿಗೆ ಪರಿಹಾರ ನೀಡುವುದು ಜನಪ್ರತಿನಿಧಿಗಳು ಮತ್ತು ಸರಕಾರದ ಕರ್ತವ್ಯವಾಗಿರುವಾಗ, ಅದಕ್ಕಾಗಿ ಶ್ರೇಯಸ್ಸು ಪಡೆಯಲು ಪ್ರಯತ್ನಿಸುವವರನ್ನು ಜನಪ್ರತಿನಿಧಿಗಳು ಎಂದು ಕರೆಯಬಹುದೇ?