ನಕಲಿ ಮದ್ಯ ಮಾರಾಟ ಪ್ರಕರಣ: ರಾಷ್ಟ್ರೀಯ ಜನತಾ ದಳದ ಮಾಜಿ ಶಾಸಕನ ಬಂಧನ

​ರಾಂಚಿ (ಜಾರ್ಖಂಡ್) ಕಾರ್ಖಾನೆಯ ಮೇಲೆ ದಾಳಿ; ಅಕ್ರಮ ಮದ್ಯ ವಶ

​ರಾಂಚಿ (ಜಾರ್ಖಂಡ್) – ಇಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆ ಜಂಟಿಯಾಗಿ ಓರಮಾಂಝಿ ಪ್ರದೇಶದಲ್ಲಿರುವ ಮದ್ಯದ ಕಾರ್ಖಾನೆಯೊಂದರ ಮೇಲೆ ನಡೆಸಿದ ದಾಳಿಯಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಪಕ್ಷದ ನಾಯಕ ಮತ್ತು ಬಿಹಾರದ ಮಾಜಿ ಶಾಸಕ ಸುಬೋಧ ಕುಮಾರ ರಾಯ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಇಲ್ಲಿಂದ ಭಾರಿ ಪ್ರಮಾಣದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈ ಮದ್ಯದ ಬಾಟಲಿಗಳ ಮೇಲೆ ಕಿಂಗ್‌ ಫಿಷರ್, ರಾಯಲ್ಸನ್ ಗೋಲ್ಡ್ ವಿಸ್ಕಿ, ಆಫ್ಟರ್ ಡಾರ್ಕ್ ಬ್ಲೂ ವಿಸ್ಕಿಯಂತಹ ಪ್ರಸಿದ್ಧ ಮದ್ಯದ ಬ್ರ್ಯಾಂಡ್‌ ಗಳ ಲೇಬಲ್‌ ಗಳನ್ನು ಅಂಟಿಸಿ, ಇತರ ರಾಜ್ಯಗಳಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿತ್ತು.

ಸಂಪಾದಕೀಯ ನಿಲುವು

ಇಂತಹ ನಾಯಕರಿರುವ ಪಕ್ಷವನ್ನು ನಿಷೇಧಿಸುವಂತೆ ಸಾರ್ವಜನಿಕರು ಒತ್ತಾಯಿಸಬೇಕು !