ತೃಣಮೂಲ ಕಾಂಗ್ರೆಸ್ಸಿನ ರಾಜ್ಯಸಭಾ ಸಂಸದರಾದ ಪಿ.ಸಿ. ಬರಾಯಿಕರಿಂದ ರಾಜೀನಾಮೆ!

  • ಇದುವರೆಗೆ 3 ಸಂಸದರಿಂದ ರಾಜೀನಾಮೆ!

  • ತೃಣಮೂಲ ಕಾಂಗ್ರೆಸ್ ಪಕ್ಷ ತೊರೆಯಲು 20 ಸಂಸದರ ನಿರ್ಧಾರ!

ಕೋಲಕಾತಾ (ಬಂಗಾಳ) – ತೃಣಮೂಲ ಕಾಂಗ್ರೆಸ್‌ನ ಇನ್ನೊಬ್ಬ ಸಂಸದರಾದ ಪ್ರಕಾಶ್ ಚಿಕ್ ಬರಾಯಿಕರವರು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದುವರೆಗೆ ತೃಣಮೂಲ ಕಾಂಗ್ರೆಸ್ಸಿನ ಒಟ್ಟು 3 ಸಂಸದರು ರಾಜೀನಾಮೆ ನೀಡಿದ್ದಾರೆ. ಅಲ್ಲದೆ ತೃಣಮೂಲ ಕಾಂಗ್ರೆಸ್ಸಿನ ಒಟ್ಟು 20 ಸಂಸದರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಬಂಗಾಳ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ನಂತರ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯವರ ಪಕ್ಷದಲ್ಲಿ ಬಿರುಕು ಉಂಟಾಗುತ್ತಿರುವುದು ಕಂಡುಬರುತ್ತಿದೆ. ಬಂಗಾಳದ ಹಲವು ಶಾಸಕರು ಕೂಡ ಋತಬ್ರತಾ ಬ್ಯಾನರ್ಜಿಯವರನ್ನು ತಮ್ಮ ನಾಯಕರನ್ನಾಗಿ ಸ್ವೀಕರಿಸಿ, ಮಮತಾ ಬ್ಯಾನರ್ಜಿಯವರ ಬಣವನ್ನು ತೊರೆಯುವ ಸೂಚನೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಹೀನಾಯ ಸೋಲಿನ ನಂತರ, ಪಕ್ಷದ ನಾಯಕರು ಪಕ್ಷದಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸುತ್ತಾ ರಾಜೀನಾಮೆ ನೀಡುತ್ತಿದ್ದಾರೆ. ಇದನ್ನೇ ಅವರು ಮೊದಲೇ ಏಕೆ ಮಾಡಲಿಲ್ಲ? ಇದರಿಂದ ಅವರ ತತ್ವಹೀನತೆ ಎದ್ದು ಕಾಣುತ್ತದೆ!