ನಿಯತ್, ನೀತಿ ಮತ್ತು ನಿರ್ಣಯಗಳಿಂದ ದೇಶದ ಅಭಿವೃದ್ಧಿಗೆ ವೇಗ! – ಪ್ರಧಾನಮಂತ್ರಿ : PM Narendra Modi

(‘ನಿಯತ್’ ಎಂದರೆ ಉದ್ದೇಶ ಅಥವಾ ಆಶಯ)

ಪ್ರಧಾನಿ ನರೇಂದ್ರ ಮೋದಿ

ನವದೆಹಲಿ – ನಿಯತ್, ನೀತಿ ಮತ್ತು ನಿರ್ಣಯಗಳಿಂದ ಭಾರತದ ಅಭಿವೃದ್ಧಿಗೆ ಹೊಸ ವೇಗ ದೊರೆತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿ ತಿಳಿಸಿದರು. ನರೇಂದ್ರ ಮೋದಿ ಅವರು ಭಾರತದ ಸತತ ಅತಿ ದೀರ್ಘಾವಧಿಯ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದ ದಾಖಲೆಯನ್ನು ನಿರ್ಮಿಸಿದ ನಿಮಿತ್ತ ‘ಭಾರತ ಮಂಟಪಂ’ನಲ್ಲಿ ಭಾಜಪ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಘಟಕ ಪಕ್ಷಗಳ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು. ಈ ವೇಳೆ ಅವರು ಕಳೆದ 12 ವರ್ಷಗಳಲ್ಲಿ ಸರಕಾರ ಮಾಡಿದ ಕೆಲಸಗಳನ್ನು ಉಲ್ಲೇಖಿಸಿದರು.

ಪ್ರಧಾನಿ ಮಾತು ಮುಂದುವರೆಸುತ್ತಾ, “ನನಗೆ ದೇಶಸೇವೆ ಮಾಡುವ ಭಾಗ್ಯ ಸಿಕ್ಕಿದೆ. ಈ ಯಶಸ್ಸು ನನ್ನ ವೈಯಕ್ತಿಕವಲ್ಲ, ಬದಲಿಗೆ ದೇಶವಾಸಿಗಳ ಹಾಗೂ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ್ದಾಗಿದೆ. ‘ವಿಕಸಿತ ಭಾರತ’ ನಿರ್ಮಿಸುವಲ್ಲಿ ಎಲ್ಲರ ಪ್ರಯತ್ನವೇ ಪ್ರೇರಣಾ ಶಕ್ತಿಯಾಗಿದೆ. ರಾಜಕೀಯ ಸ್ಥಿರತೆ ಮತ್ತು ನಿರ್ಣಾಯಕ ನಾಯಕತ್ವದಿಂದಾಗಿ ದೇಶವು ಅಭಿವೃದ್ಧಿಯ ವೇಗವನ್ನು ಪಡೆದುಕೊಂಡಿದೆ” ಎಂದರು.

 

ಸಂಪಾದಕೀಯ ನಿಲುವು

  • ಕಾಂಗ್ರೆಸ್ ತನ್ನ ವೈಫಲ್ಯದ ಹೊರೆಯನ್ನು ದೇಶದ ಹಿಂದೂ ಸಮಾಜದ ಮೇಲೆ ಹೊರಿಸಿದೆ!
  • ಕಾಂಗ್ರೆಸ್ ಕಾಲದ ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು 'ಹಿಂದೂ ಗ್ರೋತ್ ರೇಟ್' ಎಂದು ಕರೆಯಲಾಗುತ್ತಿತ್ತು. ನಿಜ ಹೇಳಬೇಕೆಂದರೆ ಅದನ್ನು 'ಕಾಂಗ್ರೆಸ್ ಗ್ರೋತ್ ರೇಟ್' ಎಂದು ಕರೆಯುವುದು ಹೆಚ್ಚು ಸೂಕ್ತವಾಗುತ್ತಿತ್ತು. ಕಾಂಗ್ರೆಸ್ ತನ್ನ ವೈಫಲ್ಯದ ಹೊರೆಯನ್ನು ದೇಶದ ಹಿಂದೂ ಸಮಾಜದ ಮೇಲೆ ಹೊರಿಸಿತು ಮತ್ತು ದೇಶವನ್ನು ಅಸಹಾಯಕತೆ, ಬಡತನ ಹಾಗೂ ಕೀಳರಿಮೆಯ ಸುಳಿಗೆ ತಳ್ಳಿತು.