
ಚೆನ್ನೈ (ತಮಿಳುನಾಡು) – ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ವಿಭಾಗೀಯ ಪೀಠವು ನೀಡಿರುವ ಮಧ್ಯಂತರ ಆದೇಶದ ಪ್ರಕಾರ, ೫,೦೦೦ ವರ್ಷಗಳಷ್ಟು ಹಳೆಯದಾದ ಪರಂಪರೆಯುಳ್ಳ ಬಿಂದು ಮಾಧವ ಪೆರುಮಾಳ್ ದೇವಾಲಯದ ಪಕ್ಕದಲ್ಲಿರುವ ಶೈಕ್ಷಣಿಕ ಆವರಣದಲ್ಲಿ ಚರ್ಚ್ನ ಅನಧಿಕೃತ ನಿರ್ಮಾಣವನ್ನು ತಡೆಯಲಾಗಿದೆ. ಥುತಿಪಟ್ಟು ಗ್ರಾಮದ (ಅಂಬೂರ ತಾಲೂಕು) ‘ಸರಕಾರ ಪೋರಂಬೋಕ್’ ಜಾಗದ ೬,೫೪೫ ಚದರ ಅಡಿ ವಿಸ್ತೀರ್ಣದ ವಿವಾದಿತ ಭೂಭಾಗದಲ್ಲಿ ಜೂನ್ ೨೨, ೨೦೨೬ ರವರೆಗೆ ‘ಯಥಾಸ್ಥಿತಿ’ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಈ ಸ್ಥಳದಲ್ಲಿ ಪ್ರಸ್ತುತ ೭೦ ವರ್ಷಗಳಷ್ಟು ಹಳೆಯದಾದ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಯಿದೆ. ಮೂಲತಃ ಈ ಜಾಗವು ಶ್ರೀನಿವಾಸ ನಾಯ್ಡು ಅವರಿಗೆ ಸೇರಿದ್ದಾಗಿದ್ದು, ನಂತರ ಅದನ್ನು ‘ಸರಕಾರ ಪೋರಂಬೋಕ್’ (ಸರಕಾರಿ ಪಾಳು ಬಿದ್ದ ಭೂಮಿ) ಎಂದು ವರ್ಗೀಕರಿಸಲಾಗಿತ್ತು. ಶ್ರೀನಿವಾಸ ನಾಯ್ಡು ಅವರು ಗ್ರಾಮದ ಮಕ್ಕಳಿಗಾಗಿ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸುವ ಸ್ಪಷ್ಟ ಉದ್ದೇಶದಿಂದ ಈ ಜಾಗವನ್ನು ಜಾನ್ ಸುಂದರ್ ಅವರಿಗೆ ಹಸ್ತಾಂತರಿಸಿದ್ದರು.
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
Corporate Jihad: ಮತಾಂತರಕ್ಕೆ ನಿರಾಕರಿಸಿದ್ದಕ್ಕಾಗಿ ‘ವಿಪ್ರೋ’ದ ಹಿಂದೂ ಮಹಿಳಾ ಉದ್ಯೋಗಿಯನ್ನು ಕೆಲಸದಿಂದ ವಜಾ !
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ ಶಿವಕುಮಾರ್