ಬಕ್ರೀದ್ ದಿನದಂದು ಮುಗ್ಧ ಪ್ರಾಣಿಗಳ ಬಲಿಯಿಂದ ಬೇಸತ್ತ ಬಿಲಾಲ್ ‘ವಿಶಾಲ್’ ಆದನು!

ಖಾಂಡ್ವಾ (ಮಧ್ಯಪ್ರದೇಶ) – ಖಾಂಡ್ವಾ ಜಿಲ್ಲೆಯಲ್ಲಿ ಬಿಲಾಲ್ ಎಂಬ ಮುಸ್ಲಿಂ ಯುವಕ ಹಿಂದೂ ಧರ್ಮಕ್ಕೆ ಮರುಪ್ರವೇಶ ಮಾಡಿದ್ದಾನೆ. ಆತ ತನ್ನ ಹೆಸರನ್ನು ‘ವಿಶಾಲ್’ ಎಂದು ಬದಲಾಯಿಸಿಕೊಂಡಿದ್ದಾನೆ. ಶಿವ ಮಂದಿರದಲ್ಲಿ ವಿಧ್ಯುಕ್ತ ಮಂತ್ರೋಚ್ಛಾರಣೆಯೊಂದಿಗೆ ಆತ ಸನಾತನ ಧರ್ಮವನ್ನು ಸ್ವೀಕರಿಸಿದ್ದಾನೆ. ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ವಿಶಾಲ್‌ಗೆ ‘ರಾಮಾಯಣ’ ಗ್ರಂಥವನ್ನು ಉಡುಗೊರೆಯಾಗಿ ನೀಡಲಾಯಿತು.

ತನಗೆ ಬಾಲ್ಯದಿಂದಲೂ ಸನಾತನ ಧರ್ಮದ ಬಗ್ಗೆ ಒಲವಿತ್ತು ಎಂದು ವಿಶಾಲ್ ಹೇಳಿದ್ದಾನೆ. ಬಕ್ರೀದ್ ದಿನದಂದು ಮುಗ್ಧ ಪ್ರಾಣಿಗಳನ್ನು ಬಲಿ ಕೊಡುವುದನ್ನು ಕಂಡು ಆತ ಬೇಸತ್ತಿದ್ದನು, ಅದಕ್ಕಾಗಿಯೇ ಸನಾತನ ಧರ್ಮವನ್ನು ಸ್ವೀಕರಿಸುವ ನಿರ್ಧಾರ ತೆಗೆದುಕೊಂಡನು.