ದೈನಿಕ ‘ಸನಾತನ ಪ್ರಭಾತ’ದ ವರದಿಯ ಪರಿಣಾಮ !
![]() |
![]() |
| ಅಶುದ್ಧ ಮರಾಠಿ ಭಾಷೆಯ ಸೂಚನಾಫಲಕ | ಫಲಕವನ್ನು ತೆರವುಗೊಳಿಸಿತು ಮಂತ್ರಾಲಯದ ಅದೇ ಸ್ಥಳ |
ಮುಂಬಯಿ, ೨೭ ಮೇ (ವಾರ್ತೆ.) – ಮಂತ್ರಾಲಯಕ್ಕೆ ಬರುವ ಸಂದರ್ಶಕರಿಗಾಗಿ ಮಂತ್ರಾಲಯದ ಪ್ರವೇಶದ್ವಾರದಲ್ಲಿ ಅಳವಡಿಸಲಾಗಿದ್ದ ಸೂಚನಾಫಲಕದ ಮೇಲಿನ ಬರಹವು ಅಶುದ್ಧ ಮತ್ತು ಅರ್ಥವಾಗದಂತಿತ್ತು. ಈ ಕುರಿತು ದೈನಿಕ ‘ಸನಾತನ ಪ್ರಭಾತ’ದಲ್ಲಿ ೨೬ ಮೇ ೨೦೨೬ ರಂದು ‘ಮಂತ್ರಾಲಯದ ಪ್ರವೇಶದ್ವಾರದಲ್ಲಿಯೇ ಮರಾಠಿಯ ಅವಹೇಳನ !’, ‘ಸಂದರ್ಶಕರಿಗಾಗಿರುವ ಸೂಚನಾಫಲಕದಲ್ಲಿ ಮರಾಠಿಯ ಒಂದು ವಾಕ್ಯವೂ ಸರಿಯಿಲ್ಲ !’, ಎಂಬ ತಲೆಬರಹದ ವರದಿಯನ್ನು ಪ್ರಕಟಿಸಲಾಗಿತ್ತು. ಇದರ ನಂತರ ೨೭ ಮೇ ಯಂದು ಆಡಳಿತವು ಈ ಫಲಕವನ್ನು ತೆರವುಗೊಳಿಸಿದೆ. ಈ ವರದಿಯನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಮರಾಠಿ ಭಾಷಾ ಸಚಿವ ಉದಯ ಸಾಮಂತ ಮತ್ತು ಮರಾಠಿ ಭಾಷಾ ವಿಭಾಗಕ್ಕೆ ಅವರ ‘ಎಕ್ಸ್’ ಖಾತೆಗಳಿಗೆ ಟ್ಯಾಗ್ ಮಾಡುವ ಮೂಲಕ ಗಮನಕ್ಕೆ ತರಲಾಗಿತ್ತು. ದೈನಿಕ ‘ಸನಾತನ ಪ್ರಭಾತ’ದಲ್ಲಿ ವರದಿ ಬಂದ ನಂತರ ಇತರ ವೃತ್ತಪತ್ರಿಕೆಗಳೂ ಈ ಸುದ್ದಿಯನ್ನು ಪ್ರಕಟಿಸಿದವು.
ಏನಂತ ಬರೆಯಲಾಗಿತ್ತು ಸೂಚನಾಫಲಕದಲ್ಲಿ ?
ಮಂತ್ರಾಲಯದ ‘ಗಾರ್ಡನ್ ಗೇಟ್’ ಪ್ರವೇಶದ್ವಾರದಲ್ಲಿ ‘ಮಂತ್ರಾಲಯ ಪ್ರವೇಶಕ್ಕಾಗಿ ೦೨.೦೦ ಗಂಟೆಯ ಸರತಿ ಸಾಲು ಇಲ್ಲಿಂದ ಶುರು’ ಎಂಬ ಸೂಚನೆ ಇರುವ ಫಲಕವನ್ನು ಅಳವಡಿಸಲಾಗಿತ್ತು. ಈ ಸೂಚನಾಫಲಕದಲ್ಲಿದ್ದ ಒಂದು ಪದವನ್ನೂ ಸಹ ಮರಾಠಿ ಭಾಷೆಯಲ್ಲಿ ಸರಿಯಾಗಿ ಬರೆಯಲಾಗಿರಲಿಲ್ಲ.


ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ