ಮಂತ್ರಾಲಯದ ಪ್ರವೇಶದ್ವಾರದಲ್ಲಿದ್ದ ಅಶುದ್ಧ ಭಾಷೆಯ ಫಲಕವನ್ನು ಆಡಳಿತವು ತೆರವುಗೊಳಿಸಿದೆ !

ದೈನಿಕ ‘ಸನಾತನ ಪ್ರಭಾತ’ದ ವರದಿಯ ಪರಿಣಾಮ !

ಅಶುದ್ಧ ಮರಾಠಿ ಭಾಷೆಯ ಸೂಚನಾಫಲಕ ಫಲಕವನ್ನು ತೆರವುಗೊಳಿಸಿತು ಮಂತ್ರಾಲಯದ ಅದೇ ಸ್ಥಳ

ಮುಂಬಯಿ, ೨೭ ಮೇ (ವಾರ್ತೆ.) – ಮಂತ್ರಾಲಯಕ್ಕೆ ಬರುವ ಸಂದರ್ಶಕರಿಗಾಗಿ ಮಂತ್ರಾಲಯದ ಪ್ರವೇಶದ್ವಾರದಲ್ಲಿ ಅಳವಡಿಸಲಾಗಿದ್ದ ಸೂಚನಾಫಲಕದ ಮೇಲಿನ ಬರಹವು ಅಶುದ್ಧ ಮತ್ತು ಅರ್ಥವಾಗದಂತಿತ್ತು. ಈ ಕುರಿತು ದೈನಿಕ ‘ಸನಾತನ ಪ್ರಭಾತ’ದಲ್ಲಿ ೨೬ ಮೇ ೨೦೨೬ ರಂದು ‘ಮಂತ್ರಾಲಯದ ಪ್ರವೇಶದ್ವಾರದಲ್ಲಿಯೇ ಮರಾಠಿಯ ಅವಹೇಳನ !’, ‘ಸಂದರ್ಶಕರಿಗಾಗಿರುವ ಸೂಚನಾಫಲಕದಲ್ಲಿ ಮರಾಠಿಯ ಒಂದು ವಾಕ್ಯವೂ ಸರಿಯಿಲ್ಲ !’, ಎಂಬ ತಲೆಬರಹದ ವರದಿಯನ್ನು ಪ್ರಕಟಿಸಲಾಗಿತ್ತು. ಇದರ ನಂತರ ೨೭ ಮೇ ಯಂದು ಆಡಳಿತವು ಈ ಫಲಕವನ್ನು ತೆರವುಗೊಳಿಸಿದೆ. ಈ ವರದಿಯನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಮರಾಠಿ ಭಾಷಾ ಸಚಿವ ಉದಯ ಸಾಮಂತ ಮತ್ತು ಮರಾಠಿ ಭಾಷಾ ವಿಭಾಗಕ್ಕೆ ಅವರ ‘ಎಕ್ಸ್’ ಖಾತೆಗಳಿಗೆ ಟ್ಯಾಗ್ ಮಾಡುವ ಮೂಲಕ ಗಮನಕ್ಕೆ ತರಲಾಗಿತ್ತು. ದೈನಿಕ ‘ಸನಾತನ ಪ್ರಭಾತ’ದಲ್ಲಿ ವರದಿ ಬಂದ ನಂತರ ಇತರ ವೃತ್ತಪತ್ರಿಕೆಗಳೂ ಈ ಸುದ್ದಿಯನ್ನು ಪ್ರಕಟಿಸಿದವು.

ಏನಂತ ಬರೆಯಲಾಗಿತ್ತು ಸೂಚನಾಫಲಕದಲ್ಲಿ ?

ಮಂತ್ರಾಲಯದ ‘ಗಾರ್ಡನ್ ಗೇಟ್’ ಪ್ರವೇಶದ್ವಾರದಲ್ಲಿ ‘ಮಂತ್ರಾಲಯ ಪ್ರವೇಶಕ್ಕಾಗಿ ೦೨.೦೦ ಗಂಟೆಯ ಸರತಿ ಸಾಲು ಇಲ್ಲಿಂದ ಶುರು’ ಎಂಬ ಸೂಚನೆ ಇರುವ ಫಲಕವನ್ನು ಅಳವಡಿಸಲಾಗಿತ್ತು. ಈ ಸೂಚನಾಫಲಕದಲ್ಲಿದ್ದ ಒಂದು ಪದವನ್ನೂ ಸಹ ಮರಾಠಿ ಭಾಷೆಯಲ್ಲಿ ಸರಿಯಾಗಿ ಬರೆಯಲಾಗಿರಲಿಲ್ಲ.