ದೈನಿಕ ‘ಸನಾತನ ಪ್ರಭಾತ’ದ ವರದಿಯ ಪರಿಣಾಮ !
![]() |
![]() |
| ಅಶುದ್ಧ ಮರಾಠಿ ಭಾಷೆಯ ಸೂಚನಾಫಲಕ | ಫಲಕವನ್ನು ತೆರವುಗೊಳಿಸಿತು ಮಂತ್ರಾಲಯದ ಅದೇ ಸ್ಥಳ |
ಮುಂಬಯಿ, ೨೭ ಮೇ (ವಾರ್ತೆ.) – ಮಂತ್ರಾಲಯಕ್ಕೆ ಬರುವ ಸಂದರ್ಶಕರಿಗಾಗಿ ಮಂತ್ರಾಲಯದ ಪ್ರವೇಶದ್ವಾರದಲ್ಲಿ ಅಳವಡಿಸಲಾಗಿದ್ದ ಸೂಚನಾಫಲಕದ ಮೇಲಿನ ಬರಹವು ಅಶುದ್ಧ ಮತ್ತು ಅರ್ಥವಾಗದಂತಿತ್ತು. ಈ ಕುರಿತು ದೈನಿಕ ‘ಸನಾತನ ಪ್ರಭಾತ’ದಲ್ಲಿ ೨೬ ಮೇ ೨೦೨೬ ರಂದು ‘ಮಂತ್ರಾಲಯದ ಪ್ರವೇಶದ್ವಾರದಲ್ಲಿಯೇ ಮರಾಠಿಯ ಅವಹೇಳನ !’, ‘ಸಂದರ್ಶಕರಿಗಾಗಿರುವ ಸೂಚನಾಫಲಕದಲ್ಲಿ ಮರಾಠಿಯ ಒಂದು ವಾಕ್ಯವೂ ಸರಿಯಿಲ್ಲ !’, ಎಂಬ ತಲೆಬರಹದ ವರದಿಯನ್ನು ಪ್ರಕಟಿಸಲಾಗಿತ್ತು. ಇದರ ನಂತರ ೨೭ ಮೇ ಯಂದು ಆಡಳಿತವು ಈ ಫಲಕವನ್ನು ತೆರವುಗೊಳಿಸಿದೆ. ಈ ವರದಿಯನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಮರಾಠಿ ಭಾಷಾ ಸಚಿವ ಉದಯ ಸಾಮಂತ ಮತ್ತು ಮರಾಠಿ ಭಾಷಾ ವಿಭಾಗಕ್ಕೆ ಅವರ ‘ಎಕ್ಸ್’ ಖಾತೆಗಳಿಗೆ ಟ್ಯಾಗ್ ಮಾಡುವ ಮೂಲಕ ಗಮನಕ್ಕೆ ತರಲಾಗಿತ್ತು. ದೈನಿಕ ‘ಸನಾತನ ಪ್ರಭಾತ’ದಲ್ಲಿ ವರದಿ ಬಂದ ನಂತರ ಇತರ ವೃತ್ತಪತ್ರಿಕೆಗಳೂ ಈ ಸುದ್ದಿಯನ್ನು ಪ್ರಕಟಿಸಿದವು.
ಏನಂತ ಬರೆಯಲಾಗಿತ್ತು ಸೂಚನಾಫಲಕದಲ್ಲಿ ?
ಮಂತ್ರಾಲಯದ ‘ಗಾರ್ಡನ್ ಗೇಟ್’ ಪ್ರವೇಶದ್ವಾರದಲ್ಲಿ ‘ಮಂತ್ರಾಲಯ ಪ್ರವೇಶಕ್ಕಾಗಿ ೦೨.೦೦ ಗಂಟೆಯ ಸರತಿ ಸಾಲು ಇಲ್ಲಿಂದ ಶುರು’ ಎಂಬ ಸೂಚನೆ ಇರುವ ಫಲಕವನ್ನು ಅಳವಡಿಸಲಾಗಿತ್ತು. ಈ ಸೂಚನಾಫಲಕದಲ್ಲಿದ್ದ ಒಂದು ಪದವನ್ನೂ ಸಹ ಮರಾಠಿ ಭಾಷೆಯಲ್ಲಿ ಸರಿಯಾಗಿ ಬರೆಯಲಾಗಿರಲಿಲ್ಲ.


ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!