
ನವದೆಹಲಿ – ದೆಹಲಿ ಜಿಮ್ಖಾನಾ ಕ್ಲಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ದೆಹಲಿ ಹೈಕೋರ್ಟ್ಗೆ, ಕ್ಲಬ್ನ ಭೂಮಿಯ ಮೇಲೆ ತಾವು ಬಲವಂತವಾಗಿ ನಿಯಂತ್ರಣ ಸಾಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಜೂನ್ ೫ ರೊಳಗೆ ಜಾಗವನ್ನು ಖಾಲಿ ಮಾಡಲು ನೀಡಿರುವ ಗಡುವು ಕೇವಲ ಕ್ಲಬ್ ಸ್ವಯಂಪ್ರೇರಿತವಾಗಿ ಜಾಗವನ್ನು ಖಾಲಿ ಮಾಡಲು ಮಾತ್ರ ನೀಡಲಾಗಿದೆ. ಒಂದು ವೇಳೆ ಕ್ಲಬ್ ಭೂಮಿಯನ್ನು ಖಾಲಿ ಮಾಡದಿದ್ದರೆ, ಸರಕಾರವು ಕಾನೂನಿನ ಪ್ರಕಾರ ನಿಗದಿತ ಪ್ರಕ್ರಿಯೆಯನ್ನೇ ಪಾಲಿಸಲಿದೆ. ಅಲ್ಲದೆ, ಭೂಮಿಯನ್ನು ಮರಳಿ ಪಡೆದ ನಂತರವೂ ಸದಸ್ಯರ ಸದಸ್ಯತ್ವವು ಹಾಗೇ ಮುಂದುವರಿಯಲಿದೆ. ಜಿಮ್ಖಾನಾ ಕ್ಲಬ್ಗೆ ಮತ್ತೊಂದು ಸ್ಥಳದಲ್ಲಿ ಪರ್ಯಾಯ ಭೂಮಿಯನ್ನು ನೀಡಲಾಗುವುದು ಎಂದೂ ಸರಕಾರವು ಭರವಸೆ ನೀಡಿದೆ.
ಸರಕಾರಕ್ಕೆ ಈ ಭೂಮಿ ಏಕೆ ಬೇಕು ?
ಲ್ಯೂಟಿಯನ್ಸ್ ಪ್ರದೇಶದಲ್ಲಿರುವ ಈ ಆಸ್ತಿಯು ೨೭.೩ ಎಕರೆಯಷ್ಟು ವಿಸ್ತಾರವಾಗಿದೆ. ಈ ಭೂಮಿಯು ಪ್ರಧಾನ ಮಂತ್ರಿಗಳ ನಿವಾಸ ಮತ್ತು ಉನ್ನತ ಸುರಕ್ಷತಾ ವಲಯದ ಹತ್ತಿರದಲ್ಲಿದೆ ಎಂದು ಸರಕಾರವು ಹೇಳಿದೆ. ಈ ಜಾಗವನ್ನು ರಕ್ಷಣಾ ಮೂಲಸೌಕರ್ಯಗಳನ್ನು ಬಲಪಡಿಸಲು ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಬಳಸಲಾಗುವುದು. ಬಾಡಿಗೆ ಒಪ್ಪಂದದ ‘ಕಲಂ ೪’ ರ ಅಡಿಯಲ್ಲಿ ‘ಸಾರ್ವಜನಿಕ ಉದ್ದೇಶಗಳಿಗಾಗಿ’ ಭೂಮಿಯನ್ನು ಮರಳಿ ಪಡೆಯುವ ಹಕ್ಕು ಸರಕಾರಕ್ಕೆ ಇದೆ ಎನ್ನಲಾಗಿದೆ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !