
ನವದೆಹಲಿ – ದೆಹಲಿ ಜಿಮ್ಖಾನಾ ಕ್ಲಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ದೆಹಲಿ ಹೈಕೋರ್ಟ್ಗೆ, ಕ್ಲಬ್ನ ಭೂಮಿಯ ಮೇಲೆ ತಾವು ಬಲವಂತವಾಗಿ ನಿಯಂತ್ರಣ ಸಾಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಜೂನ್ ೫ ರೊಳಗೆ ಜಾಗವನ್ನು ಖಾಲಿ ಮಾಡಲು ನೀಡಿರುವ ಗಡುವು ಕೇವಲ ಕ್ಲಬ್ ಸ್ವಯಂಪ್ರೇರಿತವಾಗಿ ಜಾಗವನ್ನು ಖಾಲಿ ಮಾಡಲು ಮಾತ್ರ ನೀಡಲಾಗಿದೆ. ಒಂದು ವೇಳೆ ಕ್ಲಬ್ ಭೂಮಿಯನ್ನು ಖಾಲಿ ಮಾಡದಿದ್ದರೆ, ಸರಕಾರವು ಕಾನೂನಿನ ಪ್ರಕಾರ ನಿಗದಿತ ಪ್ರಕ್ರಿಯೆಯನ್ನೇ ಪಾಲಿಸಲಿದೆ. ಅಲ್ಲದೆ, ಭೂಮಿಯನ್ನು ಮರಳಿ ಪಡೆದ ನಂತರವೂ ಸದಸ್ಯರ ಸದಸ್ಯತ್ವವು ಹಾಗೇ ಮುಂದುವರಿಯಲಿದೆ. ಜಿಮ್ಖಾನಾ ಕ್ಲಬ್ಗೆ ಮತ್ತೊಂದು ಸ್ಥಳದಲ್ಲಿ ಪರ್ಯಾಯ ಭೂಮಿಯನ್ನು ನೀಡಲಾಗುವುದು ಎಂದೂ ಸರಕಾರವು ಭರವಸೆ ನೀಡಿದೆ.
ಸರಕಾರಕ್ಕೆ ಈ ಭೂಮಿ ಏಕೆ ಬೇಕು ?
ಲ್ಯೂಟಿಯನ್ಸ್ ಪ್ರದೇಶದಲ್ಲಿರುವ ಈ ಆಸ್ತಿಯು ೨೭.೩ ಎಕರೆಯಷ್ಟು ವಿಸ್ತಾರವಾಗಿದೆ. ಈ ಭೂಮಿಯು ಪ್ರಧಾನ ಮಂತ್ರಿಗಳ ನಿವಾಸ ಮತ್ತು ಉನ್ನತ ಸುರಕ್ಷತಾ ವಲಯದ ಹತ್ತಿರದಲ್ಲಿದೆ ಎಂದು ಸರಕಾರವು ಹೇಳಿದೆ. ಈ ಜಾಗವನ್ನು ರಕ್ಷಣಾ ಮೂಲಸೌಕರ್ಯಗಳನ್ನು ಬಲಪಡಿಸಲು ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಬಳಸಲಾಗುವುದು. ಬಾಡಿಗೆ ಒಪ್ಪಂದದ ‘ಕಲಂ ೪’ ರ ಅಡಿಯಲ್ಲಿ ‘ಸಾರ್ವಜನಿಕ ಉದ್ದೇಶಗಳಿಗಾಗಿ’ ಭೂಮಿಯನ್ನು ಮರಳಿ ಪಡೆಯುವ ಹಕ್ಕು ಸರಕಾರಕ್ಕೆ ಇದೆ ಎನ್ನಲಾಗಿದೆ.
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation