(ಹರಾಮ್ ಅಂದರೆ ಇಸ್ಲಾಮ್ ಪ್ರಕಾರ ಅಯೋಗ್ಯ)

ಗುರುಗ್ರಾಮ (ಹರಿಯಾಣ) – ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಹರಿಯಾಣ ಪೊಲೀಸರು ಒಂದು ಜಂಟಿ ಕಾರ್ಯಾಚರಣೆಯಲ್ಲಿ ‘ಹೀರಾ ಗ್ರೂಪ್ ಆಫ್ ಕಂಪನೀಸ್’ನ ಸಂಸ್ಥಾಪಕಿ ನೌಹೇರಾ ಶೇಖ್ ಳನ್ನು ಇತ್ತೀಚೆಗೆ ಬಂಧಿಸಿದ್ದಾರೆ. ಷರಿಯತ್ ಕಾನೂನಿನ ಹೆಸರಿನಲ್ಲಿ ದೇಶಾದ್ಯಂತ ಲಕ್ಷಾಂತರ ಜನರಿಗೆ ವಂಚಿಸಿ ೩,೦೦೦ ಕೋಟಿ ರೂಪಾಯಿಗಳ ಬೃಹತ್ ಹಗರಣ ಮಾಡಿದ್ದ ನೌಹೇರಾ ಕಳೆದ ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದಳು.
Gurugram (Haryana) – Heera group chief Nowhera Shaikh, who embezzled ₹3,000 crores by calling interest ‘Haram’, arrested by ED
This is an example showing that Muslim women are also at the forefront of crime.#CrimeNews pic.twitter.com/yHeRHzSyQJ
— Sanatan Prabhat (@SanatanPrabhat) May 26, 2026
೧. ಷರಿಯತ್ ಕಾನೂನಿನ ಪ್ರಕಾರ ಬಡ್ಡಿ ಗಳಿಕೆ ಮಾಡುವುದು ಅಥವಾ ನೀಡುವುದು ಸಂಪೂರ್ಣವಾಗಿ ‘ಹರಾಮ್’ ಎಂದು ಪರಿಗಣಿಸಲಾಗುತ್ತದೆ. ಈ ಧಾರ್ಮಿಕ ನಂಬಿಕೆಯಿಂದಾಗಿ ಅನೇಕ ಮುಸಲ್ಮಾನರು ಬ್ಯಾಂಕುಗಳಲ್ಲಿ ಹಣ ಜಮೆ ಮಾಡುವುದಿಲ್ಲ. ನೌಹೇರಾ ಇದರ ದುರ್ಲಾಭ ಪಡೆದುಕೊಂಡಳು ಮತ್ತು ಅತ್ಯಂತ ಚಾಲಾಕಿತನದಿಂದ ಹಣ ಹೂಡಿಕೆ ಮಾಡುವ ಒಂದು ಯೋಜನೆ ಸಿದ್ಧಪಡಿಸಿದಳು. ‘ಹೀರಾ ಗ್ರೂಪ್’ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಿದಳು ಮತ್ತು ವಿಶೇಷವಾಗಿ ಮುಸಲ್ಮಾನರನ್ನು ಗುರಿಯಾಗಿಸಿದಳು.
೨. ಈ ಬೃಹತ್ ಹಗರಣದಲ್ಲಿ ಅಂದಾಜು ೧ ಲಕ್ಷ ೭೨ ಸಾವಿರಕ್ಕೂ ಅಧಿಕ ಹೂಡಿಕೆದಾರರ ೩,೦೦೦ ಕೋಟಿ ರೂಪಾಯಿಗಳು ಮುಳುಗಿವೆ.
೩. ಸರ್ವೋಚ್ಚ ನ್ಯಾಯಾಲಯವು ಮಧ್ಯಂತರ ಜಾಮೀನು ತಿರಸ್ಕರಿಸಿದ ನಂತರ ಮತ್ತು ಖುದ್ದಾಗಿ ಶರಣಾಗಲು ಆದೇಶ ನೀಡಿದ ನಂತರವೂ ನೌಹೇರಾ ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದಳು.
೪. ಸರ್ವೋಚ್ಚ ನ್ಯಾಯಾಲಯದ ಕಠಿಣ ನಿಲುವಿನ ನಂತರ ‘ಇ.ಡಿ.’ ಇದುವರೆಗೆ ನೌಹೇರಾ ಮತ್ತು ಆಕೆಯ ಸಂಬಂಧಿಕರ ೪೦೦ ಕೋಟಿ ರೂಪಾಯಿಗಳ ಆಸ್ತಿಯನ್ನು ಜಪ್ತಿ ಮಾಡಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ