‘ಬಕ್ರೀದ್’ಗೆ ಪೊಲೀಸರನ್ನೂ ಬಲಿ ನೀಡಲಾಗುವುದು’, ಎಂದು ಹೇಳಿದ ಅಸ್ಸಾಂನ ಮಾಜಿ ಶಾಸಕ ಅಕಬರ ಮಿಯಾ ಅವರ ಬಂಧನ

ಗೌಹತ್ತಿ (ಅಸ್ಸಾಂ) – ಎ.ಐ.ಯು.ಡಿ.ಎಫ್. (ಆಲ್ ಇಂಡಿಯಾ ಯುನೈಟೆಡ್ ಡೆಮೋಕ್ರೆಟಿಕ್ ಫ್ರಂಟ್) ಪಕ್ಷದ ಮಾಜಿ ಶಾಸಕ ಅಲಿ ಅಕಬರ ಮಿಯಾರವರು ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಮತ್ತು ಪೊಲೀಸರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರಿಂದ ಅವರನ್ನು ಬಂಧಿಸಲಾಗಿದೆ. ಬಕ್ರೀದ್ ಸಂದರ್ಭದಲ್ಲಿ ಮಿಯಾರವರು ಪೊಲೀಸರಿಗೆ ಬೆದರಿಕೆ ಹಾಕುತ್ತಾ, ‘ಒಂದುವೇಳೆ ಕಾನೂನು-ಸುವ್ಯವಸ್ಥೆಯು (ಬಲಿ ತಡೆಯಲು) ಮಧ್ಯೆ ಬಂದರೆ, ಪೊಲೀಸರನ್ನೂ ‘ಬಲಿ’ ನೀಡಲಾಗುವುದು’ ಎಂದು ಹೇಳಿದರು. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ನಂತರ ಪೊಲೀಸರು ಕ್ರಮ ಕೈಗೊಂಡರು. ಪೊಲೀಸರ ಹೇಳಿಕೆಯನ್ವಯ ಇಂತಹ ಹೇಳಿಕೆಗಳು ಸಮಾಜದಲ್ಲಿ ಉದ್ವಿಗ್ನತೆಯನ್ನು ನಿರ್ಮಿಸಬಹುದು ಮತ್ತು ಅವು ಕಾನೂನಿಗೆ ವಿರೋಧವಾಗಿವೆ.

ಇನ್ನೊಂದೆಡೆ ಅನೇಕ ಸ್ಥಳೀಯ ಈದ್ಗಾ (ನಮಾಜ ಮಾಡುವ ಸ್ಥಳಗಳು) ಸಮಿತಿಗಳೂ ಯಾವುದೇ ವಿವಾದವಾಗಬಾರದು; ಎಂದು ಸ್ವಇಚ್ಛೆಯಿಂದ ಹಸು ಮತ್ತು ಎಮ್ಮೆಗಳ ಬಲಿ ನೀಡದಿರಲು ಘೋಷಣೆ ಮಾಡಿವೆ.

ಸಂಪಾದಕೀಯ ನಿಲುವು

ಇಂತಹವರಿಗೆ ಸರಕಾರವು ನಡುರಸ್ತೆಯಲ್ಲಿ ಗಲ್ಲು ಶಿಕ್ಷೆಯನ್ನೇ ನೀಡಬೇಕು, ಎಂದೇ ಅವರ ಹೇಳಿಕೆಯಿಂದ ಜನತೆಗೆ ಅನಿಸುತ್ತದೆ !