
ಗೌಹತ್ತಿ (ಅಸ್ಸಾಂ) – ಎ.ಐ.ಯು.ಡಿ.ಎಫ್. (ಆಲ್ ಇಂಡಿಯಾ ಯುನೈಟೆಡ್ ಡೆಮೋಕ್ರೆಟಿಕ್ ಫ್ರಂಟ್) ಪಕ್ಷದ ಮಾಜಿ ಶಾಸಕ ಅಲಿ ಅಕಬರ ಮಿಯಾರವರು ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಮತ್ತು ಪೊಲೀಸರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರಿಂದ ಅವರನ್ನು ಬಂಧಿಸಲಾಗಿದೆ. ಬಕ್ರೀದ್ ಸಂದರ್ಭದಲ್ಲಿ ಮಿಯಾರವರು ಪೊಲೀಸರಿಗೆ ಬೆದರಿಕೆ ಹಾಕುತ್ತಾ, ‘ಒಂದುವೇಳೆ ಕಾನೂನು-ಸುವ್ಯವಸ್ಥೆಯು (ಬಲಿ ತಡೆಯಲು) ಮಧ್ಯೆ ಬಂದರೆ, ಪೊಲೀಸರನ್ನೂ ‘ಬಲಿ’ ನೀಡಲಾಗುವುದು’ ಎಂದು ಹೇಳಿದರು. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ನಂತರ ಪೊಲೀಸರು ಕ್ರಮ ಕೈಗೊಂಡರು. ಪೊಲೀಸರ ಹೇಳಿಕೆಯನ್ವಯ ಇಂತಹ ಹೇಳಿಕೆಗಳು ಸಮಾಜದಲ್ಲಿ ಉದ್ವಿಗ್ನತೆಯನ್ನು ನಿರ್ಮಿಸಬಹುದು ಮತ್ತು ಅವು ಕಾನೂನಿಗೆ ವಿರೋಧವಾಗಿವೆ.
ಇನ್ನೊಂದೆಡೆ ಅನೇಕ ಸ್ಥಳೀಯ ಈದ್ಗಾ (ನಮಾಜ ಮಾಡುವ ಸ್ಥಳಗಳು) ಸಮಿತಿಗಳೂ ಯಾವುದೇ ವಿವಾದವಾಗಬಾರದು; ಎಂದು ಸ್ವಇಚ್ಛೆಯಿಂದ ಹಸು ಮತ್ತು ಎಮ್ಮೆಗಳ ಬಲಿ ನೀಡದಿರಲು ಘೋಷಣೆ ಮಾಡಿವೆ.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !