ಪಂಜಾಬ್‌ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಂದ ಭಾಜಪದ ಕಛೇರಿ ಧ್ವಂಸ

ಚಂಡೀಗಢ – ಪಂಜಾಬ್‌ನ ಆಮ್ ಆದ್ಮಿ ಪಕ್ಷದ ಸಂಸದ ಸಂಜೀವ್ ಅರೋರಾ ಅವರನ್ನು ಆರ್ಥಿಕ ಹಗರಣದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಬಂಧಿಸಿದೆ. ಇದರ ನಂತರ ಆಪ್ ಕಾರ್ಯಕರ್ತರು ಭಾಜಪದ ಕಛೇರಿಯನ್ನು ಧ್ವಂಸಗೊಳಿಸಿದ್ದಾರೆ. ಆಪ್ ಕಾರ್ಯಕರ್ತರು ಭಾಜಪದ ರಾಜ್ಯಾಧ್ಯಕ್ಷ ಸುನಿಲ ಜಾಖಡ್ ಅವರ ಕಚೇರಿಯ ಹೊರಗೆ ಪ್ರತಿಭಟನೆಯನ್ನೂ ನಡೆಸಿದರು. ಅವರು ಅರೋರಾ ಅವರ ಬಂಧನವನ್ನು ವಿರೋಧಿಸುತ್ತಿದ್ದರು.

ಸುನಿಲ ಜಾಖಡ್ ಅವರು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಟೀಕೆ ಮಾಡುತ್ತಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಅರವಿಂದ್ ಕೇಜ್ರಿವಾಲ್ ಜಿ! ಚೆನ್ನಾಗಿ ಕೇಳಿಸಿಕೊಳ್ಳಿ, ಪಂಜಾಬ್ ಅನ್ನು ಮಮತಾ ಅವರ ಬಂಗಾಳವಾಗಲು ಬಿಡುವುದಿಲ್ಲ. ಪಂಜಾಬಿ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ನೀವು ಎಷ್ಟೇ ನಾಟಕವಾಡಿದರೂ, ಪಂಜಾಬ್ ಅನ್ನು ಲೂಟಿ ಮಾಡುವ ಭ್ರಷ್ಟರ ವಿರುದ್ಧ ಕ್ರಮ ಮುಂದುವರಿಯಲಿದೆ ಮತ್ತು ಇದರ ಬಿಸಿ ತೆರೆಯ ಮರೆಯಲ್ಲಿ ಅಡಗಿರುವ ಜನರ ವರೆಗೂ ತಟ್ಟಲಿದೆ, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇತರ ಪಕ್ಷಗಳನ್ನು ಟೀಕಿಸಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷವೂ ಅದೇ ಪಕ್ಷಗಳಂತೆ ಗುಂಡಾಗಿರಿ ಮತ್ತು ಭ್ರಷ್ಟಾಚಾರ ಮಾಡ ತೊಡಗಿದೆ, ಈ ಕಾರಣದಿಂದಲೇ ಜನತೆ ಈಗ ಅದರ ರಾಜಕೀಯ ಅಸ್ತಿತ್ವವನ್ನು ಅಂತ್ಯಗೊಳಿಸದೆ ಬಿಡುವುದಿಲ್ಲ!