ಕಲ್ಮಾ ಹೇಳಲು ನಕಾರ; ಹಿಂದೂ ಭದ್ರತಾ ಸಿಬ್ಬಂದಿಯ ಮೇಲೆ ಚಾಕುವಿನಿಂದ ಹಲ್ಲೆ; ಓರ್ವ ವ್ಯಕ್ತಿಯ ಬಂಧನ!

  • ಭಯೋತ್ಪಾದಕರೊಂದಿಗೆ ನಂಟಿರುವ ಸಾಧ್ಯತೆ!

  • ಮತಾಂಧರ ಹಿಂದೂ ದ್ವೇಷವನ್ನು ತಿಳಿಯಿರಿ!

(ಕಲ್ಮಾ ಎಂದರೆ ಅಲ್ಲಾಹನನ್ನು ಸ್ತುತಿಸುವ ವಾಕ್ಯಗಳು)

ಮುಂಬಯಿ – ಮೀರಾರೋಡ್ (ಪೂರ್ವ) ಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರ ಭದ್ರತಾ ಸಿಬ್ಬಂದಿಯ ಹೆಸರು ಮತ್ತು ಧರ್ಮವನ್ನು ಕೇಳಿದ ಜೈಬ್ ಜುಬೈರ್ ಅನ್ಸಾರಿ ಎಂಬ ಮುಸ್ಲಿಂ ಯುವಕ, ಭದ್ರತಾ ಸಿಬ್ಬಂದಿಗೆ ಕಲ್ಮಾ ಪಠಿಸುವಂತೆ ಹೇಳಿದನು. ಭದ್ರತಾ ಸಿಬ್ಬಂದಿಗೆ ಕಲ್ಮಾ ಪಠಿಸಲು ಬಾರದಿದ್ದಾಗ, ಜೈಬ್ ಜುಬೈರ್ ಅನ್ಸಾರಿ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದನು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ನಯಾನಗರದ ಬಾಡಿಗೆ ಮನೆಯಿಂದ ಆರೋಪಿಯನ್ನು ಬಂಧಿಸಿದ್ದಾರೆ.

ಏಪ್ರಿಲ್ 26 ರಂದು ಮಧ್ಯಾಹ್ನ 4 ಗಂಟೆಗೆ ಈ ಘಟನೆ ನಡೆದಿದೆ. ಈ ದಾಳಿಯಲ್ಲಿ ರಾಜಕುಮಾರ್ ಮಿಶ್ರಾ ಎಂಬ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಸುಬ್ರತೋ ಸೇನ್ ಎಂಬ ಮತ್ತೊಬ್ಬ ಸಿಬ್ಬಂದಿ ಅಲ್ಲಿಂದ ಓಡಿಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆರೋಪಿ ಜೈಬ್ ಜುಬೈರ್ ಅನ್ಸಾರಿ ಸುಶಿಕ್ಷಿತನಾಗಿದ್ದು, 2019 ರವರೆಗೆ ಅಮೆರಿಕದಲ್ಲಿ ಶಿಕ್ಷಣ ಪಡೆದಿದ್ದನು. ಭಾರತಕ್ಕೆ ಬಂದ ನಂತರ ಅವನು ರಸಾಯನಶಾಸ್ತ್ರ (ಕೆಮಿಸ್ಟ್ರಿ) ಮತ್ತು ಗಣಿತದ ಟ್ಯೂಷನ್ ಕ್ಲಾಸ್‌ಗಳನ್ನು ನಡೆಸುತ್ತಿದ್ದನು. ಪೊಲೀಸ್ ತನಿಖೆಯ ವೇಳೆ, ಈತ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ‘ಐಸಿಸ್’ ಭಯೋತ್ಪಾದಕ ಸಂಘಟನೆಯ ವಿಡಿಯೋಗಳನ್ನು ವೀಕ್ಷಿಸುತ್ತಿರುವುದು ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ಭಯೋತ್ಪಾದನಾ ನಿರೋಧಕ ದಳ (ATS) ತನಿಖೆ ನಡೆಸುತ್ತಿದೆ.