ಮುಖ್ಯ ಆರೋಪಿ ಜಹೀರುಲ್ ಶೇಖ್ ಪರಾರಿ, ೬ ಜನರ ಬಂಧನ
೯ ಪೀಡಿತ ಹಿಂದೂಗಳ ರಕ್ಷಣೆ
ಅಮಾನುಷ ಹಲ್ಲೆ ಹಾಗೂ ಗೋಮಾಂಸ ತಿನ್ನಲು ಒತ್ತಡ

ಧುಬರಿ (ಆಸ್ಸಾಂ) – ಆಸ್ಸಾಂನ ಧುಬರಿ ಜಿಲ್ಲೆಯ ಗೌರಿಪುರದಲ್ಲಿರುವ ಒಂದು ಅಕ್ರಮ ವ್ಯಸನಮುಕ್ತಿ ಕೇಂದ್ರದಲ್ಲಿ (‘ರಿಹ್ಯಾಬ್ ಸೆಂಟರ್’ನಲ್ಲಿ) ಹಿಂದೂಗಳಿಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಕಿರುಕುಳ ನೀಡುತ್ತಿದ್ದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಏಪ್ರಿಲ್ ೨೪ ರ ತಡರಾತ್ರಿ ಪೊಲೀಸರು ಈ ಕೇಂದ್ರದ ಮೇಲೆ ದಾಳಿ ನಡೆಸಿ ೬ ಜನರನ್ನು ಬಂಧಿಸಿದ್ದಾರೆ ಮತ್ತು ೯ ಪೀಡಿತ ಹಿಂದೂಗಳನ್ನು ರಕ್ಷಿಸಿದ್ದಾರೆ. ಈ ಪ್ರಕರಣದ ಮುಖ್ಯ ಆರೋಪಿ ಜಹೀರುಲ್ ಶೇಖ್ ಸದ್ಯ ತಲೆಮರೆಸಿಕೊಂಡಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಮಾಹಿತಿಯ ಪ್ರಕಾರ, ವ್ಯಸನಮುಕ್ತಿ ಕೇಂದ್ರದ ಕಿರುಕುಳಕ್ಕೆ ಬೇಸತ್ತು ೫ ಸಂತ್ರಸ್ತ ಹಿಂದೂಗಳು ಕಟ್ಟಡದಿಂದ ಜಿಗಿದು ಓಡಿಹೋಗಲು ಪ್ರಯತ್ನಿಸಿದ್ದರು. ಪೊಲೀಸರು ಅದೇ ರಾತ್ರಿ ಈ ಕೇಂದ್ರದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು. ಅವರ ವಿಚಾರಣೆ ನಡೆಸಿದಾಗ ಕೇಂದ್ರದ ಒಳಗೆ ನಡೆಯುತ್ತಿದ್ದ ಭಯಾನಕ ಕೃತ್ಯಗಳು ಬಯಲಿಗೆ ಬಂದಿವೆ.
ಭಯಾನಕ ಕಿರುಕುಳ ಈ ರೀತಿಯಾಗಿ ನಡೆಯುತ್ತಿತ್ತು!
೧. ಕೇಂದ್ರಕ್ಕೆ ದಾಖಲಾದ ಹಿಂದೂಗಳಿಗೆ ‘ಉತ್ತಮ ಚಿಕಿತ್ಸೆ ನೀಡುವ’ ಆಮಿಷವೊಡ್ಡಿ ಇಸ್ಲಾಂ ಸ್ವೀಕರಿಸಲು ಒತ್ತಾಯಿಸಲಾಗುತ್ತಿತ್ತು.
೨. ಸಂತ್ರಸ್ತರಿಗೆ ಗೋಮಾಂಸ ತಿನ್ನಲು ಒತ್ತಡ ಹೇರಲಾಗುತ್ತಿತ್ತು. ನಿರಾಕರಿಸಿದರೆ ಕಬ್ಬಿಣದ ಸಲಾಕೆಗಳಿಂದ ಅಮಾನುಷವಾಗಿ ಹಲ್ಲೆ ಮಾಡಲಾಗುತ್ತಿತ್ತು.
೩. ಸಂತ್ರಸ್ತ ಹಿಂದೂಗಳು ದೈಹಿಕ ಮತ್ತು ಮಾನಸಿಕ ಕಿರುಕುಳದ ಬಗ್ಗೆ ದೂರು ನೀಡಿದ್ದಾರೆ.
೪. ಅವರಿಗೆ ಶೌಚಾಲಯ ಸ್ವಚ್ಛಗೊಳಿಸಲು ಒತ್ತಾಯಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ ಕೇಂದ್ರದ ಸಿಬ್ಬಂದಿ ಮತ್ತು ಮಾಲೀಕರ ಬಟ್ಟೆಗಳನ್ನು ಒಗೆಯಲು ಬಲವಂತ ಮಾಡಲಾಗುತ್ತಿತ್ತು.
೫. ಕೇಂದ್ರದ ವತಿಯಿಂದ ಪ್ರತಿ ತಿಂಗಳು ೧೨ ಸಾವಿರ ರೂಪಾಯಿಗಳನ್ನು ಪಡೆಯಲಾಗುತ್ತಿತ್ತು; ಆದರೆ ಅವರ ನಿರ್ವಹಣೆಗಾಗಿ ಕೇವಲ ೨ ಸಾವಿರ ರೂಪಾಯಿಗಳ ಆಸುಪಾಸಿನಲ್ಲಿ ಖರ್ಚು ಮಾಡಲಾಗುತ್ತಿತ್ತು. ಈ ಪ್ರಕರಣದ ಬಗ್ಗೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ