ಮುಖ್ಯ ಆರೋಪಿ ಜಹೀರುಲ್ ಶೇಖ್ ಪರಾರಿ, ೬ ಜನರ ಬಂಧನ
೯ ಪೀಡಿತ ಹಿಂದೂಗಳ ರಕ್ಷಣೆ
ಅಮಾನುಷ ಹಲ್ಲೆ ಹಾಗೂ ಗೋಮಾಂಸ ತಿನ್ನಲು ಒತ್ತಡ

ಧುಬರಿ (ಆಸ್ಸಾಂ) – ಆಸ್ಸಾಂನ ಧುಬರಿ ಜಿಲ್ಲೆಯ ಗೌರಿಪುರದಲ್ಲಿರುವ ಒಂದು ಅಕ್ರಮ ವ್ಯಸನಮುಕ್ತಿ ಕೇಂದ್ರದಲ್ಲಿ (‘ರಿಹ್ಯಾಬ್ ಸೆಂಟರ್’ನಲ್ಲಿ) ಹಿಂದೂಗಳಿಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಕಿರುಕುಳ ನೀಡುತ್ತಿದ್ದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಏಪ್ರಿಲ್ ೨೪ ರ ತಡರಾತ್ರಿ ಪೊಲೀಸರು ಈ ಕೇಂದ್ರದ ಮೇಲೆ ದಾಳಿ ನಡೆಸಿ ೬ ಜನರನ್ನು ಬಂಧಿಸಿದ್ದಾರೆ ಮತ್ತು ೯ ಪೀಡಿತ ಹಿಂದೂಗಳನ್ನು ರಕ್ಷಿಸಿದ್ದಾರೆ. ಈ ಪ್ರಕರಣದ ಮುಖ್ಯ ಆರೋಪಿ ಜಹೀರುಲ್ ಶೇಖ್ ಸದ್ಯ ತಲೆಮರೆಸಿಕೊಂಡಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಮಾಹಿತಿಯ ಪ್ರಕಾರ, ವ್ಯಸನಮುಕ್ತಿ ಕೇಂದ್ರದ ಕಿರುಕುಳಕ್ಕೆ ಬೇಸತ್ತು ೫ ಸಂತ್ರಸ್ತ ಹಿಂದೂಗಳು ಕಟ್ಟಡದಿಂದ ಜಿಗಿದು ಓಡಿಹೋಗಲು ಪ್ರಯತ್ನಿಸಿದ್ದರು. ಪೊಲೀಸರು ಅದೇ ರಾತ್ರಿ ಈ ಕೇಂದ್ರದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು. ಅವರ ವಿಚಾರಣೆ ನಡೆಸಿದಾಗ ಕೇಂದ್ರದ ಒಳಗೆ ನಡೆಯುತ್ತಿದ್ದ ಭಯಾನಕ ಕೃತ್ಯಗಳು ಬಯಲಿಗೆ ಬಂದಿವೆ.
ಭಯಾನಕ ಕಿರುಕುಳ ಈ ರೀತಿಯಾಗಿ ನಡೆಯುತ್ತಿತ್ತು!
೧. ಕೇಂದ್ರಕ್ಕೆ ದಾಖಲಾದ ಹಿಂದೂಗಳಿಗೆ ‘ಉತ್ತಮ ಚಿಕಿತ್ಸೆ ನೀಡುವ’ ಆಮಿಷವೊಡ್ಡಿ ಇಸ್ಲಾಂ ಸ್ವೀಕರಿಸಲು ಒತ್ತಾಯಿಸಲಾಗುತ್ತಿತ್ತು.
೨. ಸಂತ್ರಸ್ತರಿಗೆ ಗೋಮಾಂಸ ತಿನ್ನಲು ಒತ್ತಡ ಹೇರಲಾಗುತ್ತಿತ್ತು. ನಿರಾಕರಿಸಿದರೆ ಕಬ್ಬಿಣದ ಸಲಾಕೆಗಳಿಂದ ಅಮಾನುಷವಾಗಿ ಹಲ್ಲೆ ಮಾಡಲಾಗುತ್ತಿತ್ತು.
೩. ಸಂತ್ರಸ್ತ ಹಿಂದೂಗಳು ದೈಹಿಕ ಮತ್ತು ಮಾನಸಿಕ ಕಿರುಕುಳದ ಬಗ್ಗೆ ದೂರು ನೀಡಿದ್ದಾರೆ.
೪. ಅವರಿಗೆ ಶೌಚಾಲಯ ಸ್ವಚ್ಛಗೊಳಿಸಲು ಒತ್ತಾಯಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ ಕೇಂದ್ರದ ಸಿಬ್ಬಂದಿ ಮತ್ತು ಮಾಲೀಕರ ಬಟ್ಟೆಗಳನ್ನು ಒಗೆಯಲು ಬಲವಂತ ಮಾಡಲಾಗುತ್ತಿತ್ತು.
೫. ಕೇಂದ್ರದ ವತಿಯಿಂದ ಪ್ರತಿ ತಿಂಗಳು ೧೨ ಸಾವಿರ ರೂಪಾಯಿಗಳನ್ನು ಪಡೆಯಲಾಗುತ್ತಿತ್ತು; ಆದರೆ ಅವರ ನಿರ್ವಹಣೆಗಾಗಿ ಕೇವಲ ೨ ಸಾವಿರ ರೂಪಾಯಿಗಳ ಆಸುಪಾಸಿನಲ್ಲಿ ಖರ್ಚು ಮಾಡಲಾಗುತ್ತಿತ್ತು. ಈ ಪ್ರಕರಣದ ಬಗ್ಗೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !