ನ್ಯಾಯಾಧೀಶರ ಸಮ್ಮೇಳನದಲ್ಲಿ ಹೊಸ ‘ಎಐ ನೀತಿ’ ಘೋಷಣೆ

ಕರ್ಣಾವತಿ (ಗುಜರಾತ್) – ನ್ಯಾಯಾಂಗ ತೀರ್ಪು ಪ್ರಕ್ರಿಯೆ ಮತ್ತು ತೀರ್ಪುಗಳಿಗಾಗಿ ಕೃತಕ ಬುದ್ಧಿಮತ್ತೆ (‘ಎಐ’) ಬಳಸುವುದನ್ನು ಗುಜರಾತ್ ಹೈಕೋರ್ಟ್ ನಿಷೇಧಿಸಿದೆ. ನ್ಯಾಯದಾನ ಮಾಡುವಾಗ, ಜಾಮೀನು ನೀಡುವಾಗ, ವಾದಗಳನ್ನು ಪರಿಶೀಲಿಸುವಾಗ ಅಥವಾ ತೀರ್ಪಿನ ಕರಡು ಸಿದ್ಧಪಡಿಸುವಾಗ ಎಐ ಅನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಳಸಬಾರದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಗುಜರಾತ್ನಲ್ಲಿ ನಡೆದ ಜಿಲ್ಲಾ ನ್ಯಾಯಾಂಗದ ನ್ಯಾಯಾಧೀಶರ ಸಮ್ಮೇಳನದಲ್ಲಿ ಈ ಹೊಸ ‘ಎಐ ನೀತಿ’ಯನ್ನು ಘೋಷಿಸಲಾಯಿತು. ಇದರ ಪ್ರಕಾರ, ಸಾಕ್ಷ್ಯಗಳ ಪರಿಶೀಲನೆ, ಕಾನೂನು ವಿಭಾಗಗಳನ್ನು ಅನ್ವಯಿಸುವುದು ಅಥವಾ ಸಾಕ್ಷಿಗಳು, ಪಕ್ಷಕಾರರು ಮತ್ತು ವಕೀಲರ ಖಾಸಗಿ/ಗೌಪ್ಯ ಮಾಹಿತಿಯನ್ನು ನಿರ್ವಹಿಸಲು ಎಐ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ವಿಷಯಗಳಿಗಾಗಿ ‘ಎಐ’ ಬಳಕೆಗೆ ಅನುಮತಿ!
ನ್ಯಾಯಾಲಯದ ಸಮಯವನ್ನು ಉಳಿಸಲು ಕೆಲವು ಆಡಳಿತಾತ್ಮಕ ಕೆಲಸಗಳಲ್ಲಿ ಎಐ ಬಳಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಮಾಹಿತಿ ತಂತ್ರಜ್ಞಾನ ವಿಭಾಗದ ಅಡಿಯಲ್ಲಿ ತರಬೇತಿಗಾಗಿ ಪ್ರಸ್ತುತಿಗಳನ್ನು (ಪ್ರೆಸೆಂಟೇಶನ್) ಸಿದ್ಧಪಡಿಸುವುದು, ಸಾರ್ವಜನಿಕ ಸುತ್ತೋಲೆಗಳು ಮತ್ತು ನೋಟಿಸ್ಗಳ ಕರಡು ತಯಾರಿಸುವುದು, ಕಾನೂನು ಸಂಶೋಧನೆ ಮತ್ತು ಹಳೆಯ ತೀರ್ಪುಗಳ ಹುಡುಕಾಟಕ್ಕಾಗಿ ಎಐ ಅನ್ನು ಬಳಸಬಹುದು. ಆದಾಗ್ಯೂ, ಪಡೆದ ಮಾಹಿತಿಯನ್ನು ನೇರವಾಗಿ ಬಳಸುವ ಮೊದಲು ಮಾನವ ಪರಿಶೀಲನೆ ಕಡ್ಡಾಯವಾಗಿರುತ್ತದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ