ನ್ಯಾಯಾಧೀಶರ ಸಮ್ಮೇಳನದಲ್ಲಿ ಹೊಸ ‘ಎಐ ನೀತಿ’ ಘೋಷಣೆ

ಕರ್ಣಾವತಿ (ಗುಜರಾತ್) – ನ್ಯಾಯಾಂಗ ತೀರ್ಪು ಪ್ರಕ್ರಿಯೆ ಮತ್ತು ತೀರ್ಪುಗಳಿಗಾಗಿ ಕೃತಕ ಬುದ್ಧಿಮತ್ತೆ (‘ಎಐ’) ಬಳಸುವುದನ್ನು ಗುಜರಾತ್ ಹೈಕೋರ್ಟ್ ನಿಷೇಧಿಸಿದೆ. ನ್ಯಾಯದಾನ ಮಾಡುವಾಗ, ಜಾಮೀನು ನೀಡುವಾಗ, ವಾದಗಳನ್ನು ಪರಿಶೀಲಿಸುವಾಗ ಅಥವಾ ತೀರ್ಪಿನ ಕರಡು ಸಿದ್ಧಪಡಿಸುವಾಗ ಎಐ ಅನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಳಸಬಾರದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಗುಜರಾತ್ನಲ್ಲಿ ನಡೆದ ಜಿಲ್ಲಾ ನ್ಯಾಯಾಂಗದ ನ್ಯಾಯಾಧೀಶರ ಸಮ್ಮೇಳನದಲ್ಲಿ ಈ ಹೊಸ ‘ಎಐ ನೀತಿ’ಯನ್ನು ಘೋಷಿಸಲಾಯಿತು. ಇದರ ಪ್ರಕಾರ, ಸಾಕ್ಷ್ಯಗಳ ಪರಿಶೀಲನೆ, ಕಾನೂನು ವಿಭಾಗಗಳನ್ನು ಅನ್ವಯಿಸುವುದು ಅಥವಾ ಸಾಕ್ಷಿಗಳು, ಪಕ್ಷಕಾರರು ಮತ್ತು ವಕೀಲರ ಖಾಸಗಿ/ಗೌಪ್ಯ ಮಾಹಿತಿಯನ್ನು ನಿರ್ವಹಿಸಲು ಎಐ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ವಿಷಯಗಳಿಗಾಗಿ ‘ಎಐ’ ಬಳಕೆಗೆ ಅನುಮತಿ!
ನ್ಯಾಯಾಲಯದ ಸಮಯವನ್ನು ಉಳಿಸಲು ಕೆಲವು ಆಡಳಿತಾತ್ಮಕ ಕೆಲಸಗಳಲ್ಲಿ ಎಐ ಬಳಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಮಾಹಿತಿ ತಂತ್ರಜ್ಞಾನ ವಿಭಾಗದ ಅಡಿಯಲ್ಲಿ ತರಬೇತಿಗಾಗಿ ಪ್ರಸ್ತುತಿಗಳನ್ನು (ಪ್ರೆಸೆಂಟೇಶನ್) ಸಿದ್ಧಪಡಿಸುವುದು, ಸಾರ್ವಜನಿಕ ಸುತ್ತೋಲೆಗಳು ಮತ್ತು ನೋಟಿಸ್ಗಳ ಕರಡು ತಯಾರಿಸುವುದು, ಕಾನೂನು ಸಂಶೋಧನೆ ಮತ್ತು ಹಳೆಯ ತೀರ್ಪುಗಳ ಹುಡುಕಾಟಕ್ಕಾಗಿ ಎಐ ಅನ್ನು ಬಳಸಬಹುದು. ಆದಾಗ್ಯೂ, ಪಡೆದ ಮಾಹಿತಿಯನ್ನು ನೇರವಾಗಿ ಬಳಸುವ ಮೊದಲು ಮಾನವ ಪರಿಶೀಲನೆ ಕಡ್ಡಾಯವಾಗಿರುತ್ತದೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ