ನ್ಯಾಯಾಧೀಶರ ಸಮ್ಮೇಳನದಲ್ಲಿ ಹೊಸ ‘ಎಐ ನೀತಿ’ ಘೋಷಣೆ

ಕರ್ಣಾವತಿ (ಗುಜರಾತ್) – ನ್ಯಾಯಾಂಗ ತೀರ್ಪು ಪ್ರಕ್ರಿಯೆ ಮತ್ತು ತೀರ್ಪುಗಳಿಗಾಗಿ ಕೃತಕ ಬುದ್ಧಿಮತ್ತೆ (‘ಎಐ’) ಬಳಸುವುದನ್ನು ಗುಜರಾತ್ ಹೈಕೋರ್ಟ್ ನಿಷೇಧಿಸಿದೆ. ನ್ಯಾಯದಾನ ಮಾಡುವಾಗ, ಜಾಮೀನು ನೀಡುವಾಗ, ವಾದಗಳನ್ನು ಪರಿಶೀಲಿಸುವಾಗ ಅಥವಾ ತೀರ್ಪಿನ ಕರಡು ಸಿದ್ಧಪಡಿಸುವಾಗ ಎಐ ಅನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಳಸಬಾರದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಗುಜರಾತ್ನಲ್ಲಿ ನಡೆದ ಜಿಲ್ಲಾ ನ್ಯಾಯಾಂಗದ ನ್ಯಾಯಾಧೀಶರ ಸಮ್ಮೇಳನದಲ್ಲಿ ಈ ಹೊಸ ‘ಎಐ ನೀತಿ’ಯನ್ನು ಘೋಷಿಸಲಾಯಿತು. ಇದರ ಪ್ರಕಾರ, ಸಾಕ್ಷ್ಯಗಳ ಪರಿಶೀಲನೆ, ಕಾನೂನು ವಿಭಾಗಗಳನ್ನು ಅನ್ವಯಿಸುವುದು ಅಥವಾ ಸಾಕ್ಷಿಗಳು, ಪಕ್ಷಕಾರರು ಮತ್ತು ವಕೀಲರ ಖಾಸಗಿ/ಗೌಪ್ಯ ಮಾಹಿತಿಯನ್ನು ನಿರ್ವಹಿಸಲು ಎಐ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ವಿಷಯಗಳಿಗಾಗಿ ‘ಎಐ’ ಬಳಕೆಗೆ ಅನುಮತಿ!
ನ್ಯಾಯಾಲಯದ ಸಮಯವನ್ನು ಉಳಿಸಲು ಕೆಲವು ಆಡಳಿತಾತ್ಮಕ ಕೆಲಸಗಳಲ್ಲಿ ಎಐ ಬಳಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಮಾಹಿತಿ ತಂತ್ರಜ್ಞಾನ ವಿಭಾಗದ ಅಡಿಯಲ್ಲಿ ತರಬೇತಿಗಾಗಿ ಪ್ರಸ್ತುತಿಗಳನ್ನು (ಪ್ರೆಸೆಂಟೇಶನ್) ಸಿದ್ಧಪಡಿಸುವುದು, ಸಾರ್ವಜನಿಕ ಸುತ್ತೋಲೆಗಳು ಮತ್ತು ನೋಟಿಸ್ಗಳ ಕರಡು ತಯಾರಿಸುವುದು, ಕಾನೂನು ಸಂಶೋಧನೆ ಮತ್ತು ಹಳೆಯ ತೀರ್ಪುಗಳ ಹುಡುಕಾಟಕ್ಕಾಗಿ ಎಐ ಅನ್ನು ಬಳಸಬಹುದು. ಆದಾಗ್ಯೂ, ಪಡೆದ ಮಾಹಿತಿಯನ್ನು ನೇರವಾಗಿ ಬಳಸುವ ಮೊದಲು ಮಾನವ ಪರಿಶೀಲನೆ ಕಡ್ಡಾಯವಾಗಿರುತ್ತದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ