‘ಚುನಾವಣೆಯ ನಂತರ ‘ಮಿಯಾ’ ಸಮುದಾಯವು ಏರಿಕೆಯಾಗಿ ದಾದಾಗಿರಿ ಮಾಡುವರಂತೆ!’

  • ಅಸ್ಸಾಂ ವಿಧಾನಸಭಾ ಚುನಾವಣೆ ೨೦೨೬

  • ಎ.ಐ.ಯು.ಡಿ.ಎಫ್. ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರ ಪ್ರಚೋದನಾಕಾರಿ ಹೇಳಿಕೆ

(ಎ.ಐ.ಯು.ಡಿ.ಎಫ್. ಎಂದರೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್)
(‘ಮಿಯಾ’ ಎಂದರೆ ಬಾಂಗ್ಲಾದೇಶಿ ಮುಸ್ಲಿಂ)

ದಿಸ್ಪುರ್ (ಅಸ್ಸಾಂ) – ಅಸ್ಸಾಂನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎ.ಐ.ಯು.ಡಿ.ಎಫ್. ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಅವರು, ‘ಚುನಾವಣೆಯ ನಂತರ ಅಸ್ಸಾಂನಲ್ಲಿ ‘ಮಿಯಾ’ (ಬಾಂಗ್ಲಾದೇಶಿ ಮುಸ್ಲಿಂ) ಸಮುದಾಯದ ಪ್ರಭಾವ ಹೆಚ್ಚಾಗಲಿದೆ’, ಎಂದು ಹೇಳಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು, ಕಳೆದ ೫ ವರ್ಷಗಳಲ್ಲಿ ತಮ್ಮ ಸರಕಾರವು ಬಾಂಗ್ಲಾದೇಶಿ ಮಿಯಾಗಳ ಕೈಕಾಲು ಮುರಿದಿದೆ ಮತ್ತು ಮುಂದಿನ ೫ ವರ್ಷಗಳಲ್ಲಿ ಅವರ ಬೆನ್ನೆಲುಬನ್ನೇ ಮುರಿಯಲಾಗುವುದು ಎಂದು ಹೇಳಿದ್ದರು. ಮುಖ್ಯಮಂತ್ರಿಗಳ ಈ ಹೇಳಿಕೆಯ ಹಿನ್ನೆಲೆಯಲ್ಲಿ ಅಜ್ಮಲ್ ಅವರು ಮೇಲಿನಂತೆ ಹೇಳಿಕೆ ನೀಡಿದ್ದು, ಅಸ್ಸಾಂನಲ್ಲಿ ಬಾಂಗ್ಲಾದೇಶಿ ಮುಸ್ಲಿಮರಿಗೆ ಮುಕ್ತ ಅವಕಾಶ ನೀಡುವ ತಮ್ಮ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ.

ಅಜ್ಮಲ್ ಮುಂದೆ ಮಾತನಾಡಿ, ಚುನಾವಣಾ ಫಲಿತಾಂಶ ಬಂದ ನಂತರ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಲಿದೆ. ಮುಂದಿನ ದಿನಗಳಲ್ಲಿ ಮಿಯಾ ಸಮುದಾಯವು ಅಸ್ಸಾಂನಲ್ಲಿ ಮೇಲುಗೈ ಸಾಧಿಸಲಿದೆ ಮತ್ತು ಅವರದೇ ದಾದಾಗಿರಿ ನಡೆಯಲಿದೆ. ಹಾಗೆಯೇ ಹಿಮಂತ ಸರಮಾ ಅವರ ಪ್ರಭಾವ ಕೊನೆಗೊಳ್ಳುವುದು ಮತ್ತು ಅವರು ಅಸ್ಸಾಂ ಬಿಟ್ಟು ನವದೆಹಲಿಗೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಬಾಂಗ್ಲಾದೇಶಿ ಮುಸ್ಲಿಮರಿಗಾಗಿ ಅಸ್ಸಾಂನ ಬಾಗಿಲು ತೆರೆಯುವವರಿಗೆ ಮತದಾರರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು!
  • ಭಾರತದ ಭದ್ರತೆಗೆ ಬಹಿರಂಗವಾಗಿ ಸವಾಲು ಹಾಕುವ ಇಂತಹ ವ್ಯಕ್ತಿಗಳಿಗೆ ಮತ್ತು ಅವರ ಪಕ್ಷಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆಜೀವ ನಿಷೇಧ ಹೇರಬೇಕು!