
ನವಿ ಮುಂಬಯಿ – ಇಲ್ಲಿನ ಕೊಪರ್ಖೈರಣೇ ಪ್ರದೇಶದ ಸೆಕ್ಟರ್ ೨ರಲ್ಲಿ ಇರುವ ವಿದ್ಯಾಭವನ ಕಟ್ಟಡದಲ್ಲಿ ಮಾರ್ಚ್ ೫ರ ಸಂಜೆ ಒಂದು ಮನೆಯ ಸ್ಲ್ಯಾಬ್ (ಮೇಲ್ಚಾವಣಿ) ಏಕಾಏಕಿ ಕುಸಿದುಬಿತ್ತು. ಆ ಸಮಯದಲ್ಲಿ ಅಲ್ಲಿ ಟ್ಯೂಷನ್ ತರಗತಿ ನಡೆಯುತ್ತಿತ್ತು ಮತ್ತು ಶಿಕ್ಷಕಿ ಹಾಗೂ ವಿದ್ಯಾರ್ಥಿಗಳು ಅಲ್ಲಿದ್ದರು. ಈ ಘಟನೆದಲ್ಲಿ ಮನೀಷ್ ಮ್ಹಸೆ (ವಯಸ್ಸು ೯ ವರ್ಷ) ಮೃತನಾದನು; ಶಿಕ್ಷಕಿ ಹಾಗೂ ೧೧ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಿಕ್ಷಕಿ ಶ್ಯಾಮಲಿ ಚೌಧರಿ (ವಯಸ್ಸು ೫೩ ವರ್ಷ) ಅವರು ವಿದ್ಯಾರ್ಥಿಗಳಿಗೆ ಟ್ಯೂಷನ್ ನಡೆಸುತ್ತಿದ್ದರು. ಮೇಲ್ಚಾವಣಿ ಕುಸಿದ ಪರಿಣಾಮ ಎಲ್ಲರೂ ಅವಶೇಷಗಳಡಿ ಸಿಲುಕಿಕೊಂಡರು. ಅಗ್ನಿಶಾಮಕ ದಳವು ಅವಶೇಷಗಳನ್ನು ತೆರವುಗೊಳಿಸಿತು. ಸ್ಥಳೀಯ ನಿವಾಸಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ನವಿ ಮುಂಬಯಿಯ ಮಹಾಪೌರ ಸುಜಾತಾ ಪಾಟೀಲ್ ಅವರು ಗಾಯಾಳುಗಳ ಕುಟುಂಬಗಳಿಗೆ ಸಾಂತ್ವನ ಹೇಳಿ, ಸರಿಯಾದ ಚಿಕಿತ್ಸೆಯನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಈ ಕಟ್ಟಡವು ಅಪಾಯಕರ ಕಟ್ಟಡಗಳ ಪಟ್ಟಿಯಲ್ಲಿ ಇರಲಿಲ್ಲ. ಆದ್ದರಿಂದ ಅಪಘಾತದ ಕಾರಣ ತಿಳಿಯಲು ಮಹಾನಗರ ಪಾಲಿಕೆ ಆಯುಕ್ತರು ಕಟ್ಟಡದ ರಚನಾ ಪರಿಶೀಲನೆ (ಸ್ಟ್ರಕ್ಚರಲ್ ಆಡಿಟ್) ನಡೆಸಲು ಆದೇಶಿಸಿದ್ದಾರೆ. ಪ್ರಸ್ತುತ ಸಂಪೂರ್ಣ ಕಟ್ಟಡವನ್ನು ಖಾಲಿ ಮಾಡಲಾಗಿದೆ.
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !