ಮುಂಬಯಿ – ಗೋವಾ ರಾಷ್ಟ್ರೀಯ ಹೆದ್ದಾರಿಯ ಕೆಲಸವನ್ನು ವಿಳಂಬಗೊಳಿಸಿದ ಎರಡು ಗುತ್ತಿಗೆದಾರರ ಸಂಸ್ಥೆಗಳಿಗೆ ೧೬ ಕೋಟಿ ರೂಪಾಯಿ ದಂಡ!

​ರಸ್ತೆ ಅಭಿವೃದ್ಧಿ ಇಲಾಖೆಯಿಂದ ಕ್ರಮ!

ಮುಂಬಯಿ – ಮುಂಬಯಿ-ಗೋವಾ ರಾಷ್ಟ್ರೀಯ ಹೆದ್ದಾರಿ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ ಇಬ್ಬರು ಗುತ್ತಿಗೆದಾರರಿಗೆ ೧೬ ಕೋಟಿ ದಂಡ ವಿಧಿಸಲಾಗಿದೆ. ಈ ಗುತ್ತಿಗೆದಾರರಿಗೆ ಪದೇ ಪದೇ ಸೂಚನೆ ನೀಡಿದರೂ ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಿಲ್ಲ. ಪ್ರಯಾಣಿಕರಿಗೂ ಇದರಿಂದ ಅನಗತ್ಯ ತೊಂದರೆಯಾಗುತ್ತಿದೆ. ಈ ವಿಳಂಬವನ್ನು ಗಂಭೀರವಾಗಿ ಪರಿಗಣಿಸಿ ರಸ್ತೆ ಅಭಿವೃದ್ಧಿ ಇಲಾಖೆಯು ಈ ಕ್ರಮ ಕೈಗೊಂಡಿದೆ.

ಇದರಲ್ಲಿ ಅರಾವಳಿಯಿಂದ ಕಾಟೆಯವರೆಗಿನ ೩೯ ಕಿಲೋಮೀಟರ್ ಹಂತದ ಕೆಲಸ ಮಾಡುವ ‘ಎಚ್. ಎಮ್.ಪಿ.ಎಲ್.’ ಎಂಬ ಸಂಸ್ಥೆಗೆ ೩೧೧ ಕೋಟಿ ರೂಪಾಯಿಗಳ ಅನುದಾನ ನೀಡಲಾಗಿತ್ತು. ಕಾಟೆಯಿಂದ ವಾಕೇಡ್ ವರೆಗಿನ ೪೯ ಕಿಲೋಮೀಟರ್ ಕೆಲಸಕ್ಕಾಗಿ ‘ಈಗಲ್’ ಎಂಬ ಸಂಸ್ಥೆಗೆ ೫೧೯ ಕೋಟಿ ರೂಪಾಯಿಗಳ ಅನುದಾನ ನೀಡಲಾಗಿತ್ತು. ಎರಡೂ ಗುತ್ತಿಗೆದಾರರಿಗೆ ಕ್ರಮವಾಗಿ ೧೧ ಕೋಟಿ ಮತ್ತು ೫ ಕೋಟಿ ರೂಪಾಯಿಗಳ ದಂಡ ವಿಧಿಸಲಾಗಿದೆ.

ಸಂಪಾದಕೀಯ ನಿಲುವು

  • ಕೆಲಸ ನಡೆಯುತ್ತಿರುವಾಗಲೇ ನಿಯಮಿತ ಮೇಲ್ವಿಚಾರಣೆಯನ್ನು ಏಕೆ ಮಾಡಲಿಲ್ಲ ಎಂಬ ಪ್ರಶ್ನೆಗೆ ಆಡಳಿತ ಮಂಡಳಿಯು ಉತ್ತರಿಸಬೇಕು! ಇದು ಆಡಳಿತಾತ್ಮಕ ಶಿಥಿಲತೆಯಲ್ಲವೇ?
  • ದಂಡ ವಸೂಲಿಯೊಂದಿಗೆ, ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸದವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು!