ಕಾಶ್ಮೀರ ಕಣಿವೆಯಲ್ಲಿ ‘ಮುಸ್ಲಿಂ ಜಾಂಬಾಜ್ ಫೋರ್ಸ್’ ಭಯೋತ್ಪಾದಕ ಸಂಘಟನೆ ಮತ್ತೆ ಸಕ್ರಿಯ

​ಶ್ರೀನಗರ (ಜಮ್ಮು-ಕಾಶ್ಮೀರ) – ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿರುವುದರಿಂದ ಅಲ್ಲಿಂದ ನಿರ್ವಸಿತರಾದ ಹಿಂದೂಗಳು ಇನ್ನೂ ಮರಳಿಲ್ಲ, ಅಲ್ಲದೇ ಉಳಿದಿರುವ ಹಿಂದೂಗಳಿಗೆ ಇನ್ನೂ ಕೂಡ ಬೆದರಿಕೆಗಳು ಬರುತ್ತಿವೆ. ಪಹಲ್ಗಾಮ್ ಸಮೀಪದ ಮಟ್ಟನ್‌ನಲ್ಲಿ ಕಾಶ್ಮೀರಿ ಹಿಂದೂಗಳ ವಸತಿಯಿದೆ. ಅಲ್ಲಿನ ಹಿಂದೂಗಳ ಜನಸಂಖ್ಯೆ ಸುಮಾರು ೩೦೦. ಅಲ್ಲಿನ ಹಿಂದೂಗಳಿಗೆ ಬೆದರಿಕೆ ಕರೆಗಳು ಬರುತ್ತಿರುವುದರಿಂದ ಮಧ್ಯಾಹ್ನ ೪ ಗಂಟೆಯ ನಂತರ ಯಾರೂ ಮನೆಯಿಂದ ಹೊರಬರುತ್ತಿಲ್ಲ.

ಹಿಂದೂಗಳನ್ನು ಕೊಲ್ಲುವುದಾಗಿ ಲಷ್ಕರ್-ಎ-ತೊಯ್ಬಾದ ಶಾಖೆಯಾಗಿರುವ ‘ದ ರೆಸಿಸ್ಟೆನ್ಸ್ ಫೋರ್ಸ್’ ಎಂಬ ಸಂಘಟನೆಯು ಬೆದರಿಕೆ ಹಾಕಿದೆ. ಹಾಗೆಯೇ ೧೯೯೦ ರ ದಶಕದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದ ‘ಮುಸ್ಲಿಂ ಜಾಂಬಾಜ್ ಫೋರ್ಸ್’ ಕೂಡ ಭಿತ್ತಿಪತ್ರಗಳನ್ನು ಹಚ್ಚುವ ಮೂಲಕ ಕಾಶ್ಮೀರದ ಸ್ವಾತಂತ್ರ್ಯದವರೆಗೆ ಯುದ್ಧ ಮುಂದುವರಿಸುವುದಾಗಿ ಬೆದರಿಕೆ ಹಾಕಿದೆ. ೧೦ ನವೆಂಬರ್ ೨೦೨೫ ರಂದು ದೆಹಲಿಯಲ್ಲಿ ನಡೆದ ಸ್ಫೋಟದ ನಂತರ ಸಕ್ರಿಯವಾಗಿರುವ ಈ ಸಂಘಟನೆಯು ಕಾಶ್ಮೀರಿ ಯುವಕರ ದಾರಿ ತಪ್ಪಿಸುತ್ತಿದೆ.

ಸಂಪಾದಕೀಯ ನಿಲುವು

ಕಾಶ್ಮೀರದಿಂದ ಭಯೋತ್ಪಾದನೆ ನಿರ್ಮೂಲನೆಯಾಗುವ ಬದಲು ಭಯೋತ್ಪಾದಕ ಸಂಘಟನೆಗಳು ಮತ್ತೆ ಸಕ್ರಿಯವಾಗುತ್ತಿರುವುದು, ಲಜ್ಞ್ಯಾಸ್ಪದ !