
ಭುವನೇಶ್ವರ (ಒಡಿಶಾ) – ಕಳೆದ ತಿಂಗಳು ಜನವರಿ ೨೭ ರಂದು ಇಲ್ಲಿನ ಸುಂದರಪದ ಪ್ರದೇಶದಲ್ಲಿ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಸ್ಫೋಟದ ತನಿಖೆಯನ್ನು ಇದುವರೆ ಕೇವಲ ಒಡಿಶಾ ಪೊಲೀಸರು ಮಾತ್ರ ಮಾಡುತ್ತಿದ್ದರು; ಆದರೆ ಈಗ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನೂ (ಎನ್.ಐ.ಎ.) ಕರೆಯಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇತ್ತೀಚೆಗೆ ಸಿಕ್ಕಿರುವ ಹೊಸ ಸಿಸಿಟಿವಿ ವಿಡಿಯೋದಿಂದ ಹಲವು ವಿಷಯಗಳು ಬೆಳಕಿಗೆ ಬಂದಿವೆ. ಇದರಲ್ಲಿ ಸ್ಫೋಟದ ತೀವ್ರತೆ ಮತ್ತು ಅದರ ನಂತರದ ಗೊಂದಲದ ಸ್ಥಿತಿ ಸ್ಪಷ್ಟವಾಗಿ ಕಾಣುತ್ತಿದೆ. ತಜ್ಞರ ಪ್ರಕಾರ, ಈ ವಿಡಿಯೋದಿಂದ ಸ್ಫೋಟದ ಸ್ವರೂಪ ಸ್ಪಷ್ಟವಾಗಲಿದೆ, ಹಾಗೂ ಇದರ ಹಿಂದೆ ದೊಡ್ಡ ಸಂಚು ಇತ್ತೇ, ಎಂಬುದು ಕೂಡ ಬಯಲಾಗಬಹುದು.
ಗಾಯಗೊಂಡ ನಾಲ್ವರಲ್ಲಿ ಒಬ್ಬನು ಪಳಗಿದ ಅಪರಾಧಿಯಾಗಿದ್ದನು. ಅಪರಾಧಿಗಳ ಕೈಗೆ ಇಷ್ಟು ಶಕ್ತಿಯುತ ಸ್ಫೋಟಕ ವಸ್ತು ಹೇಗೆ ತಲುಪಿತು, ಎಂಬ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯು ವಿಶೇಷ ತನಿಖೆ ನಡೆಸುತ್ತಿದೆ. ಸ್ಥಳೀಯ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ ಜಂಟಿ ಕಾರ್ಯಾಚರಣೆಯು, ಈ ಘಟನೆಯ ಸಂಬಂಧ ಕೇವಲ ಸ್ಥಳೀಯ ಅಪರಾಧಕ್ಕೆ ಸೀಮಿತವಾಗಿರದೆ ಸುರಕ್ಷತೆಗೆ ಸಂಬಂಧಿಸಿದ ದೊಡ್ಡ ಸವಾಲಾಗಿರಬಹುದು, ಎಂಬ ಸಂಕೇತವನ್ನು ನೀಡುತ್ತಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ