₹77 ಲಕ್ಷ 46 ಸಾವಿರ ಹಣದ ದುರುಪಯೋಗ

ಅಹಲ್ಯಾನಗರ – ಶನಿ ಶಿಂಗ್ಣಾಪುರದ ಶ್ರೀ ಶನೈಶ್ಚರ ದೇವಸ್ಥಾನದ ಆನ್ಲೈನ್ ದರ್ಶನ ಮತ್ತು ಪೂಜಾ ಅಪ್ಲಿಕೇಶನ್ನಲ್ಲಿ ನಡೆದ ಭ್ರಷ್ಟಾಚಾರದ ತನಿಖೆಯನ್ನು ಸೈಬರ್ ಪೊಲೀಸರು ಪೂರ್ಣಗೊಳಿಸಿದ್ದು, ನೆವಾಸಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದ್ದಾರೆ. ದೇವಸ್ಥಾನದ ಅಧಿಕೃತ ಅನುಮತಿ ಹೊಂದಿದ್ದ ಅಪ್ಲಿಕೇಶನ್ ಮೂಲಕವೇ ಈ ಹಣ ಲೂಟಿ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಈ ಪ್ರಕರಣದಲ್ಲಿ ಅಂದಾಜು ₹77 ಲಕ್ಷ 46 ಸಾವಿರದ 341 ಹಣದ ದುರುಪಯೋಗವಾಗಿದ್ದು, 9 ಮಂದಿ ಶಂಕಿತ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
1. ಆ್ಯಪ್ ದುರುಪಯೋಗ ಪ್ರಕರಣದ ತನಿಖೆ ಪೊಲೀಸರು ಆರಂಭಿಸುತ್ತಿದ್ದಂತೆ, ದೇವಸ್ಥಾನದ ಅಂದಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಪ್ಲಿಕೇಶನ್ ಮಾಲೀಕರಿಗೆ ನೀಡಿದ್ದ ಅನುಮತಿ ಪತ್ರವನ್ನು ಹೊಸದಾಗಿ ಸೃಷ್ಟಿಸಿ, ಸಿಬ್ಬಂದಿಗಳ ಬ್ಯಾಂಕ್ ಖಾತೆಗೆ ಜಮೆಯಾದ ಮೊತ್ತದ ಬಗ್ಗೆ ಸುಳ್ಳು ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದರು.
2. ಸಂಜಯ ಪವಾರ್ ಎಂಬ ಸಿಬ್ಬಂದಿಯು ಅಪ್ಲಿಕೇಶನ್ ನಿರ್ವಹಿಸುವ ವ್ಯಕ್ತಿಗೆ ಬೆದರಿಕೆ ಹಾಕಿ, ನಕಲಿ ಅನುಮತಿ ಪತ್ರ ಮತ್ತು ಲೆಕ್ಕಪತ್ರಗಳನ್ನು ಪೊಲೀಸರಿಗೆ ಸಲ್ಲಿಸುವಂತೆ ಒತ್ತಾಯಿಸಿದ್ದನು. ಅಲ್ಲದೆ, ಸ್ವತಃ ತನ್ನ ಸಹಿಯ ಮೂಲಕವೇ ಪೂಜೆಗೆ ಅನುಮತಿ ನೀಡಿದ್ದೂ ಪತ್ತೆಯಾಗಿದೆ.
3. ಈ ಇಡೀ ಪ್ರಕರಣದಲ್ಲಿ ದೇವಸ್ಥಾನದ ಅಧಿಕಾರಿಗಳು ಮತ್ತು ಸಿಬ್ಬಂದಿಯೇ ಈ ಭ್ರಷ್ಟಾಚಾರದ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದ್ದು, ಭಕ್ತರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟವಾಗಿದೆ.
4. ದೇವಸ್ಥಾನದ ಟ್ರಸ್ಟಿಗಳು, ಅಧಿಕಾರಿಗಳು, ಸಿಬ್ಬಂದಿ, ಅರ್ಚಕರು ಮತ್ತು ಅಪ್ಲಿಕೇಶನ್ ಮಾಲೀಕರ ಸುಮಾರು 100ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಈ ಹಗರಣ ಬಯಲಾಗಿದೆ. ಈ ಹಗರಣವು ಅಂದಾಜು ₹500 ಕೋಟಿ ರೂಪಾಯಿಗಳಷ್ಟು ದೊಡ್ಡದಿರಬಹುದು ಎಂದು ಈ ಹಿಂದೆ ಹೇಳಲಾಗಿತ್ತು.
5. ಈ ಪ್ರಕರಣವು ವಿಧಾನಮಂಡಲದಲ್ಲಿ ಚರ್ಚೆಯಾದ ನಂತರ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಆದೇಶ ನೀಡಿದ ನಂತರ ತನಿಖೆಯು ವೇಗವನ್ನು ಪಡೆದುಕೊಂಡಿತು.
6. ತನಿಖೆಯ ವೇಳೆ, ದೇವಸ್ಥಾನವು ಅನುಮತಿ ನೀಡದ ಕೆಲವು ಅಪ್ಲಿಕೇಶನ್ಗಳ ಮೂಲಕ ಆನ್ಲೈನ್ ಪೂಜೆ ಬುಕಿಂಗ್ ನಡೆದಿರಲಿಲ್ಲ; ಆದರೆ ದೇವಸ್ಥಾನವು ‘ದೇವಧಾಮ್’, ‘ಶ್ರೀಮಂದಿರ್’, ‘ಉತ್ಸವ್’, ‘ವಾಮಾ’ ಮತ್ತು ‘ಶೆಮಾರು’ ಎಂಬ 5 ಅಪ್ಲಿಕೇಶನ್ಗಳಿಗೆ ಮಾತ್ರ ಆನ್ಲೈನ್ ಪೂಜೆ ಮತ್ತು ನೇರ ದರ್ಶನಕ್ಕಾಗಿ ಬುಕಿಂಗ್ ಮಾಡಲು ಅಧಿಕೃತ ಅನುಮತಿ ನೀಡಿತ್ತು ಎಂಬುದು ಸ್ಪಷ್ಟವಾಗಿದೆ.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ