
ಚೆನ್ನೈ (ತಮಿಳುನಾಡು) – ದೇವಾಲಯಗಳಲ್ಲಿ ಯಾವುದೇ ಮರ್ಯಾದೆ ಅಥವಾ ಗೌರವವನ್ನು ನೀಡುವಾಗ, ಮೊದಲ ಆದ್ಯತೆ ಕೇವಲ ದೇವರಿಗೆ ಮಾತ್ರ ನೀಡಬೇಕು. ಯಾವುದೇ ವ್ಯಕ್ತಿಯು ವಿಶೇಷ ಗೌರವವನ್ನು ತನ್ನ ಹಕ್ಕು ಎಂದು ಕೇಳಬಾರದು ಮತ್ತು ಅಂತಹ ಹಕ್ಕಿನ ವಾದವನ್ನು ಮಾನ್ಯ ಮಾಡಲಾಗುವುದಿಲ್ಲ ಎಂದು ಮದ್ರಾಸ್ ನ ಉಚ್ಚ ನ್ಯಾಯಾಲಯವು ಹೇಳಿದೆ. ಶ್ರೀರಂಗಂ ಶ್ರೀಮಠ ಅಂಡವನ್ ಆಶ್ರಮವು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಮೇಲಿನ ನಿರ್ಧಾರ ನೀಡಿದೆ. ಕಾಂಚೀಪುರಂನ ದೇವರಾಜ ಸ್ವಾಮಿ ದೇವಾಲಯದಲ್ಲಿ ಆಶ್ರಮದ ಮುಖ್ಯಸ್ಥರಿಗೆ ೧೯೯೨ ರಿಂದ ನೀಡಲಾಗುತ್ತಿದ್ದ ‘ಪಂಚಮುದ್ರಾ’ ಎಂಬ ವಿಶೇಷ ಗೌರವವನ್ನು ೨೦೨೩ ರಲ್ಲಿ ನಿಲ್ಲಿಸಲಾಗಿತ್ತು. ಅದನ್ನು ಮತ್ತೆ ಪ್ರಾರಂಭಿಸಬೇಕೆಂಬ ಬೇಡಿಕೆಯನ್ನು ಅರ್ಜಿಯಲ್ಲಿ ಕೇಳಲಾಗಿತ್ತು.
೧. ವಿಚಾರಣೆಯ ಸಮಯದಲ್ಲಿ ಹಿಂದೂ ಧಾರ್ಮಿಕ ಮತ್ತು ಧರ್ಮದತ್ತಿ ನಿಧಿ ವಿಭಾಗದ ಪರವಾಗಿ ವಾದ ಮಂಡಿಸಲಾಯಿತು. ವಿಶೇಷ ಗೌರವವನ್ನು ಕೇವಲ ೫ ಮಠಾಧೀಶರಿಗೆ ಮಾತ್ರ ನೀಡಲಾಗುತ್ತದೆ. ಅವುಗಳಲ್ಲಿ ಕಾಂಚಿ ಕಾಮಕೋಟಿ ಪೀಠ, ಶ್ರೀ ಅಹೋಬಿಲ ಮಠ, ನಾಂಗುನೇರಿ ಶ್ರೀ ವನಮಾಲೈ ಮಠ, ಮೈಸೂರು ಶ್ರೀ ಪರಕಾಲ ಜೀಯರ್ ಮಠ ಮತ್ತು ಉಡುಪಿ ಶ್ರೀ ವ್ಯಾಸರಾಯ ಮಠಗಳಾಗಿವೆ.
೨. ಈ ವಾದವನ್ನು ಗಮನಿಸಿದ ನ್ಯಾಯಾಲಯವು, ದೇವಾಲಯದಲ್ಲಿ ಮೊದಲ ಗೌರವವು ದೇವರಿಗೆ ಮಾತ್ರ ಸಲ್ಲಬೇಕು ಎಂದು ಸ್ಪಷ್ಟಪಡಿಸಿತು. ‘ಮಠಾಧೀಶರಿಗೆ ನೀಡಲಾಗುವ ವಿಶೇಷ ಗೌರವಗಳನ್ನು ಹಕ್ಕಿನಂತೆ ಪ್ರತಿಪಾದಿಸಲು ಸಾಧ್ಯವಿಲ್ಲ’ ಎಂದು ಹೇಳಿ ಆಶ್ರಮದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು. ಅಲ್ಲದೆ, ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ಧರ್ಮದತ್ತಿ ನಿಧಿ ಅಧಿನಿಯಮದ ಪ್ರಕಾರ, ಮಠಾಧೀಶರಿಗೆ ನೀಡಲಾಗುವ ಗೌರವದ ಕುರಿತು ನಿರ್ಧಾರ ತೆಗೆದುಕೊಳ್ಳುವ ಹಕ್ಕು ಕೇವಲ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತ್ರ ಇರುತ್ತದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು. ಶ್ರೀರಂಗಂ ಶ್ರೀಮಠ ಅಂಡವನ್ ಆಶ್ರಮ ಆಡಳಿತವು ಅಗತ್ಯವಿದ್ದರೆ, ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿ ಪರಿಹಾರೋಪಾಯಗಳನ್ನು ಕೇಳಬಹುದು ಎಂದು ನ್ಯಾಯಾಲಯ ಹೇಳಿತು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ