ರಾಜ್ಯದಲ್ಲಿ ಮತಯಂತ್ರಗಳ ಮೂಲಕವಲ್ಲ, ಬ್ಯಾಲೇಟ್ ಪೇಪರ್ ಮೂಲಕ ಚುನಾವಣೆ ನಡೆಯಲಿವೆ! : Karnataka Elections

ಚುನಾವಣಾ ಆಯೋಗದ ಮೇಲೆ ಅವಿಶ್ವಾಸ ವ್ಯಕ್ತಪಡಿಸುತ್ತಾ ರಾಜ್ಯದ ಕಾಂಗ್ರೆಸ್‌ನ ವಿಚಿತ್ರ ನಿರ್ಧಾರ!

ಬೆಂಗಳೂರು – ರಾಜ್ಯದ ಸ್ಥಳೀಯ ಚುನಾವಣೆಗಳನ್ನು ಮತಯಂತ್ರಗಳ ಮೂಲಕವಲ್ಲ, ‘ಬ್ಯಾಲೆಟ್ ಪೇಪರ್’ (ಮತಪತ್ರ) ಮೂಲಕ ನಡೆಸುವುದಾಗಿ ಕಾಂಗ್ರೆಸ್ ಸರಕಾರ ಘೋಷಿಸಿದೆ. ಮತಯಂತ್ರಗಳಿಂದ ಚುನಾವಣೆಯಲ್ಲಿ ಮೋಸ ನಡೆಯುತ್ತಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಆದಾಗ್ಯೂ, ಚುನಾವಣಾ ಆಯೋಗವು ವಿರೋಧ ಪಕ್ಷಗಳ ಆರೋಪಗಳನ್ನು ಹಲವು ಬಾರಿ ತಿರಸ್ಕರಿಸಿದೆ. ಆಯೋಗದ ಪ್ರಕಾರ, ಮತಯಂತ್ರಗಳನ್ನು ‘ಹ್ಯಾಕ್’ ಮಾಡುವುದು ಕಷ್ಟಕರವಷ್ಟೇ ಅಲ್ಲ, ಅಸಾಧ್ಯ ಕೂಡ ಆಗಿದೆ. ಹೀಗಿದ್ದರೂ, ರಾಜ್ಯದ ಮುಂಬರುವ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ‘ಬ್ಯಾಲೆಟ್ ಪೇಪರ್’ ಮೂಲಕ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಅವರು ಮಾಧ್ಯಮಗಳಿಗೆ ತಿಳಿಸಿದ್ದು, ಜನರ ‘ಮತಯಂತ್ರಗಳ’ ಮೇಲಿನ ನಂಬಿಕೆ ಮತ್ತು ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ. (ಮತಯಂತ್ರಗಳ ಮೇಲಲ್ಲ, ಸಮಾಜಘಾತುಕ ಕಾಂಗ್ರೆಸ್ಸಿನ ಮೇಲೆ ಜನರ ವಿಶ್ವಾಸ ಕಡಿಮೆಯಾಗಿದೆ! – ಸಂಪಾದಕರು) ರಾಜ್ಯ ಚುನಾವಣಾ ಆಯೋಗಕ್ಕೆ ‘ಮತದಾರರ ಪಟ್ಟಿಯನ್ನು ಸುಧಾರಿಸುವುದು ಸುಲಭವಾಗಲಿ’ ಎಂಬ ಉದ್ದೇಶದಿಂದ ನಾವು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲು ಮತ್ತು ಪ್ರಸ್ತುತ ನಿಯಮಗಳಲ್ಲಿ ಸುಧಾರಣೆ ತರಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

  • 2025 ರಲ್ಲಿ, ಅಂದರೆ ಕೃತಕ ಬುದ್ಧಿಮತ್ತೆಯ ಜಗತ್ತಿನಲ್ಲಿ ರಾಜ್ಯದ ಕಾಂಗ್ರೆಸ್ ಮತಪತ್ರಗಳ ಮೂಲಕ ಚುನಾವಣೆಗಳನ್ನು ನಡೆಸಲು ಹೊರಟಿದೆ, ಇದು ಹಾಸ್ಯಾಸ್ಪದವೇ ಆಗಿದೆ!
  • ಭಾರತದ ಪ್ರಜಾಪ್ರಭುತ್ವದ ಸಂಸ್ಥೆಗಳ ಬಗ್ಗೆ ಒಂದು ರಾಜ್ಯ ಸರಕಾರ ಈ ರೀತಿ ಅವಿಶ್ವಾಸ ತೋರಿಸುವುದು ಪ್ರಜಾಪ್ರಭುತ್ವವನ್ನು ಕೆಳಮಟ್ಟಕ್ಕಿಳಿಸುವ ಪ್ರಯತ್ನವಾಗಿದೆ. ಇದು ಭಾರತ ವಿರೋಧಿ ಕಥಾನಕದ ಭಾಗವಾಗಿದೆ ಎಂಬುದನ್ನು ಗಮನಿಸಬೇಕು!