ಹರಿಯಾಣ: ರಜೆಯ ಮೇಲೆ ಬಂದಿದ್ದ ಸೈನಿಕನ ಗುಂಡಿಕ್ಕಿ ಹತ್ಯೆ! : CRPF Jawan Murder

ಪ್ರಾಥಮಿಕ ಅಂದಾಜಿನಲ್ಲಿ ವೈಯಕ್ತಿಕ ದ್ವೇಷದಿಂದ ಕೊಲೆ

ಹತ್ಯೆಯಾದ ಯೋಧ ಕೃಷ್ಣ

ಸೋನಿಪತ್ (ಹರಿಯಾಣ) – ಇಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸೈನಿಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಜುಲೈ ೨೭ರ ರಾತ್ರಿ ತಡವಾಗಿ ಈ ಘಟನೆ ನಡೆದಿದೆ. ಗುಂಡಿನ ಶಬ್ದ ಕೇಳಿ ಕುಟುಂಬದ ಸದಸ್ಯರು ಅಲ್ಲಿಗೆ ಬಂದರು. ಸೈನಿಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಆತನನ್ನು ಮೃತ ಎಂದು ಘೋಷಿಸಿದರು.

ಮಗು ಹುಟ್ಟಿ ೩ ದಿನಗಳಷ್ಟೇ ಆಗಿತ್ತು!

ಸೈನಿಕನ ಹೆಸರು ಕೃಷ್ಣಾ, ಇವರು ಖೇಡಿ ದಮ್ಕನ್ ಗ್ರಾಮದ ನಿವಾಸಿಯಾಗಿದ್ದರು. ಕೃಷ್ಣಾ ಪ್ರಸ್ತುತ ಛತ್ತೀಸ್‌ಗಢದಲ್ಲಿ ನಿಯೋಜಿತರಾಗಿದ್ದರು ಮತ್ತು ೧ ತಿಂಗಳ ರಜೆ ತೆಗೆದುಕೊಂಡು ಮನೆಗೆ ಬಂದಿದ್ದರು. ಕೃಷ್ಣಾ ಅವರಿಗೆ ೨ ಮಕ್ಕಳಿದ್ದು, ಚಿಕ್ಕ ಮಗುವಿಗೆ ಕೇವಲ ೩ ದಿನಗಳ ಹಿಂದೆ ಜನ್ಮ ನೀಡಿತ್ತು. ಅವರ ಪತ್ನಿ ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಕೃಷ್ಣಾ ಹರಿದ್ವಾರಕ್ಕೆ ಕಾವಡ್ ಯಾತ್ರೆಗೆ ಹೋಗಿದ್ದಾಗ ಅಲ್ಲಿ ಕೆಲವು ಯುವಕರೊಂದಿಗೆ ಜಗಳವಾಗಿತ್ತು. ಆ ಕಾರಣದಿಂದಲೇ ಅವರ ಹತ್ಯೆ ನಡೆದಿದೆ ಎಂದು ಅಂದಾಜಿಸಲಾಗಿದೆ.