Police Stabbed Muharram : ದರ್ಭಾಂಗಾ (ಬಿಹಾರ) ಇಲ್ಲಿ ಮೊಹರಂ ಮೆರವಣಿಗೆಯಲ್ಲಿ ಪೊಲೀಸ್ ಅಧಿಕಾರಿಗೆ ಚಾಕು ಇರಿತ

ದರ್ಭಾಂಗಾ (ಬಿಹಾರ) – ಇಲ್ಲಿ ಮೊಹರಂ ಮೆರವಣಿಗೆಯಲ್ಲಿ ಮೊಹಮ್ಮದ್ ರಬ್ಬಾನಿಯು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಮಿತ ಕುಮಾರ್ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ದಾಳಿಯಲ್ಲಿ ಗಾಯಗೊಂಡಿರುವ ಅಮಿತ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮೊಹಮ್ಮದ್ ರಬ್ಬಾನಿಯನ್ನು ಬಂಧಿಸಿದ್ದಾರೆ. ರಬ್ಬಾನಿಯ ಬಂಧನ ವಿರೋಧಿಸಿ ಆತನ ಕುಟುಂಬ ಸದಸ್ಯರು ರಸ್ತೆ ತಡೆದು ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.

ಜುಲೈ 5 ರ ತಡರಾತ್ರಿ ಮೊಹರಂ ಮೆರವಣಿಗೆಯ ವೇಳೆ ಕೆಲವು ಮುಸ್ಲಿಮರು ಗಲಾಟೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಆಗ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಮಿತ ಕುಮಾರ್ ರಸ್ತೆಯಲ್ಲಿ ಬಿದ್ದಿದ್ದಾಗ ಆರೋಪಿ ರಬ್ಬಾನಿ ಅವರ ಎಡ ತೊಡೆಗೆ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡಿದ್ದರೂ, ಅಮಿತ ಕುಮಾರ್ ಧೈರ್ಯದಿಂದ ರಬ್ಬಾನಿಯನ್ನು ಹಿಡಿದು ನೇರವಾಗಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಅಮಿತ ಕುಮಾರ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

  • ಮೊಹರಂ ಮೆರವಣಿಗೆಗಳಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಘಟನೆಗಳನ್ನು ಗಮನಿಸಿದರೆ, ಇಂತಹ ಮೆರವಣಿಗೆಗಳ ಮೇಲೆ ಈಗ ನಿಷೇಧ ಹೇರುವುದು ಅಗತ್ಯ
     
  • ಈ ರೀತಿಯ ಘಟನೆಗಳ ಬಗ್ಗೆ ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮುಂತಾದ ‘ಕಪಟ ಜಾತ್ಯತೀತ’ ಮತ್ತು ಸರ್ವಧರ್ಮ ಸಮಭಾವದ ಈ ಬಗ್ಗೆ ಮಾತನಾಡುವ ಪಕ್ಷಗಳು ಮೌನವಾಗಿವೆ ಎಂಬುದು ಗಮನದಲ್ಲಿಟ್ಟಕೊಳ್ಳಿ!