ಸನಾತನ ರಾಷ್ಟ್ರ ಶಂಖ ನಾಡ ಹಬ್ಬ
|
ಫೊಂಡಾ (ಗೋವಾ), ಮೇ ೧೬ (ವಾರ್ತಾ) – ನಮ್ಮ ಕಾಲೇಜಿನ ಆವರಣದಲ್ಲಿ ನಡೆಯಲಿರುವ ಶಂಖನಾದ ಮಹೋತ್ಸವವು ನಮಗೆ ಹೆಮ್ಮೆಯ ವಿಷಯವಾಗಿದೆ. ನಾವು ಆಧುನಿಕ ತಂತ್ರಜ್ಞಾನವನ್ನು ಭಗವದ್ಗೀತೆಯೊಂದಿಗೆ ಸಂಯೋಜಿಸಿದರೆ, ಜೀವನದಲ್ಲಿ ಬಹಳಷ್ಟು ಉತ್ತಮ ಪ್ರಗತಿಯನ್ನು ಸಾಧಿಸಬಹುದು. ಆದ್ದರಿಂದ, ಸಾಂಪ್ರದಾಯಿಕ ಭಾರತ ಮತ್ತು ಆಧುನಿಕ ಭಾರತ ಎರಡೂ ಜೀವನದಲ್ಲಿ ಅವಶ್ಯಕವಾಗಿವೆ. ಈ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ‘ಅಜೆಂಡಾ’ ಎಂದು ನೋಡದೆ ವೈಯಕ್ತಿಕ ಅಭಿವೃದ್ಧಿಯ ದೃಷ್ಟಿಕೋನದಿಂದ ನೋಡಬೇಕು ಎಂದು ಇಲ್ಲಿನ ‘ಐಐಟಿ, ಗೋವಾ’ದ ‘ಎಂ.ಟೆಕ್.’ ಅಂತಿಮ ವರ್ಷದ ವಿದ್ಯಾರ್ಥಿ ಕೌಶಲ ಶ್ರೀವಾಸ್ತವ ಅಭಿಪ್ರಾಯಪಟ್ಟರು. ಶಂಖನಾದ ಮಹೋತ್ಸವದ ನಿಮಿತ್ತ ‘ಸನಾತನ ಪ್ರಭಾತ’ದ ವಿಶೇಷ ಪ್ರತಿನಿಧಿ ಶ್ರೀ. ವಿಕ್ರಮ ಡೋಂಗರೆ ಅವರು ಗೋವಾ ಇಂಜಿನಿಯರಿಂಗ್ ಕಾಲೇಜಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಪ್ರತಿಕ್ರಿಯೆಗಳನ್ನು ತಿಳಿದುಕೊಂಡರು. ಈ ಸಂದರ್ಭದಲ್ಲಿ, ‘ಸಾಂಪ್ರದಾಯಿಕ ಭಾರತ ಮತ್ತು ಆಧುನಿಕ ಭಾರತ ಒಟ್ಟಾಗಿ ಸಾಗಲು ಸಾಧ್ಯವೇ?’ ಎಂಬ ಪ್ರಶ್ನೆಯನ್ನು ವಿದ್ಯಾರ್ಥಿಗಳಿಗೆ ಕೇಳಲಾಗಿತ್ತು.
🛕✨ When Dharma meets Design — A Revolution Begins!
In this vibrant ground report, Assistant Editor Vikram Dongrey visits the Goa Engineering College campus, where the Sanatan Rashtra Shankhnad Mahotsav is being organized.
🎓 He speaks with young engineering students… pic.twitter.com/bSV0wZEtEh
— Sanatan Prabhat (@SanatanPrabhat) May 16, 2025
ಸನಾತನ ಧರ್ಮದ ಪುನರುತ್ಥಾನಕ್ಕಾಗಿ ಈ ಕಾರ್ಯಕ್ರಮ!
ಈ ಸಂದರ್ಭದಲ್ಲಿ ಸ್ವನೀಶ ಫಳದೇಸಾಯಿ ಎಂಬ ವಿದ್ಯಾರ್ಥಿ ಮಾತನಾಡಿ, “ಗೋವಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಈ ಕಾರ್ಯಕ್ರಮಕ್ಕೆ ಯೋಗಿ ಆದಿತ್ಯನಾಥ ಮತ್ತು ಶ್ರೀ ಶ್ರೀ ರವಿಶಂಕರಜೀ ಕೂಡಾ ಬರುತ್ತಿದ್ದಾರೆ. ಇಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಕಾರ್ಯಕ್ರಮ ನಡೆಯುತ್ತಿರುವುದರಿಂದ ಪ್ರತಿಯೊಬ್ಬರೂ ಈ ಕಾರ್ಯಕ್ರಮಕ್ಕೆ ಹಾಜರಾಗಿ ಉತ್ತಮ ಅನುಭವ ಪಡೆಯಬೇಕು” ಎಂದರು.
‘ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ವಿಭಾಗದ ಪಾರ್ಥ ಕಾಮತ್, “ಸನಾತನ ಧರ್ಮದ ಪುನರುತ್ಥಾನಕ್ಕಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಇಂದಿನ ಯುದ್ಧದಂತಹ ಪರಿಸ್ಥಿತಿಯಲ್ಲಿ ಎಲ್ಲಾ ಭಾರತೀಯರು ಒಗ್ಗೂಡುವುದು ಕಾಲದ ಅನಿವಾರ್ಯತೆಯಾಗಿದೆ. ವಿದೇಶಗಳಲ್ಲಿರುವ ಭಾರತೀಯರು ಭಾರತದ ಸಂಪ್ರದಾಯವನ್ನು ಉಳಿಸಿಕೊಂಡು ತಂತ್ರಜ್ಞಾನದಲ್ಲೂ ಪ್ರಗತಿ ಸಾಧಿಸುತ್ತಿದ್ದಾರೆ. ಆದ್ದರಿಂದ ಸಾಂಪ್ರದಾಯಿಕ ಭಾರತ ಮತ್ತು ಆಧುನಿಕ ಭಾರತವನ್ನು ಒಗ್ಗೂಡಿಸಬೇಕು” ಎಂದರು.
ತಂತ್ರಜ್ಞಾನದಿಂದ ಸನಾತನ ಸಂಪ್ರದಾಯಗಳಿಗೆ ಬಲ ಸಿಗಲಿದೆ !
ಕಂಪ್ಯೂಟರ್ ಇಂಜಿನಿಯರಿಂಗ್ನ ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಆಯೇಶ್ ಸಾಲೇಲ್ಕರ್ ಎಂಬ ವಿದ್ಯಾರ್ಥಿ ಮಾತನಾಡಿ, “ಸಾಂಪ್ರದಾಯಿಕ ಭಾರತ ಮತ್ತು ಆಧುನಿಕ ಭಾರತ ಕೈಜೋಡಿಸಿ ಮುಂದೆ ಸಾಗಬಹುದು; ಏಕೆಂದರೆ ನಮ್ಮ ಸಂಪ್ರದಾಯಗಳಲ್ಲಿಯೂ ವಿಜ್ಞಾನ ಅಡಗಿದೆ. ತಂತ್ರಜ್ಞಾನದಿಂದ ಸಂಪ್ರದಾಯಗಳಿಗೆ ಬಲ ಸಿಕ್ಕಿದೆ. ಪ್ರಧಾನಮಂತ್ರಿ ಮೋದಿಯವರ ‘ವಿಕಸಿತ ಭಾರತ ೨೦೪೭’ರ ಕನಸು ಆಧ್ಯಾತ್ಮ ಮತ್ತು ತಂತ್ರಜ್ಞಾನ ಎರಡರ ಮೂಲಕವೂ ನನಸಾಗಲು ಸಾಧ್ಯ” ಎಂದರು.
“ಹೊಸ ಪೀಳಿಗೆಯು ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಹೊಂದಿರಬೇಕು. ಅದಕ್ಕಾಗಿ ತಂತ್ರಜ್ಞಾನದೊಂದಿಗೆ ಸಂಪ್ರದಾಯವನ್ನು ಕಾಪಾಡಿಕೊಳ್ಳುವುದು ಅವಶ್ಯಕ” ಎಂದು ಅವರ ಸಹಪಾಠಿ ಮಿತ್ರ ಹೇಳಿದರು.